ಮಹಿಳೆಯರ ಸ್ವಾವಲಂಬನೆಗೆ ಯೋಜನೆ: ಸ್ವಾಮೀಜಿ
Team Udayavani, Nov 23, 2021, 5:14 PM IST
ಮಸ್ಕಿ: ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ಸಾಗಿಸುವುದಕ್ಕಾಗಿ ಸರಕಾರ ಹಲವು ಯೋಜನೆ ಜಾರಿ ಮಾಡಿದ್ದು, ಅವುಗಳ ಸದ್ಬಳಕೆಯಾಗಬೇಕು ಎಂದು ಗುಂಡಾ ಗ್ರಾಮಾದ ಶ್ರೀರಾಚೋಟಿ ಚೆನ್ನಮಲ್ಲಯ್ಯ ಸ್ವಾಮಿಗಳು ಹೇಳಿದರು.
ತಾಲೂಕಿನ ಗುಂಡಾ ಗ್ರಾಮದ ಶ್ರೀ ಸ್ಫೂರ್ತಿ ಸಂಜೀವಿನಿ, ಗ್ರಾಪಂ ಒಕ್ಕೂಟ ವತಿಯಿಂದ ಗುಂಡಾ ಗ್ರಾಪಂ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಉನ್ನತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಹಿಂದೆ ಮಹಿಳೆಯರು ಪುರುಷರನ್ನು ಅವಲಂಬಿಸಿಯೇ ಜೀವನ ನಡೆಸಬೇಕು ಎನ್ನುವ ಕಾಲವೊಂದಿತ್ತು. ಆದರೆ, ಈಗ ಸುಧಾರಣೆಯಾಗಿದೆ. ಮಹಿಳೆಯರು ಕೂಡ ವಿದ್ಯಾವಂತರಾಗಿದ್ದು, ಎಲ್ಲ ರಂಗದಲ್ಲೂ ಮುಂದುವರಿದಿದ್ದಾರೆ ಎಂದರು.
ಶ್ರೀಸ್ಫೂರ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಚಂದ್ರಮ್ಮ ಮಾತನಾಡಿದರು. ಗುಂಡಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ಕಣ್ಣೂರು, ಯೋಜನೆಯ ವಲಯ ಮೇಲ್ವಿಚಾರಕ ಪ್ರಕಾಶ, ತರಬೇತುದಾರ ಗಿರಿಜಾ, ಅಜಯ್ ಸೇರಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ