ಕಚೇರಿ ಪಕ್ಕದಲ್ಲೇ “ತೋಟ’ಗಾರಿಕೆ ಬೀಳು

ಇಲ್ಲಿನ ತೋಟ ಬಯಲು ಬಹಿರ್ದೆಸೆ ತಾಣವಾಗಿದೆ.

Team Udayavani, Apr 17, 2021, 6:46 PM IST

kacheri

ಸಿಂಧನೂರು: ತಾಲೂಕಿನ ತೋಟಗಾರಿಕೆ ಇಲಾಖೆಯ ಕಾರ್ಯವೈಖರಿಯನ್ನು ಗಮನಿಸಲು ಇಲಾಖೆ ಕಚೇರಿ ಹಿಂಭಾಗದ ತೋಟಕ್ಕೆ ಕಾಲಿಟ್ಟರೆ ಸಾಕು! ಸಮೃದ್ಧವಾಗಿ ಬೆಳೆದ ಸಪೋಟಾ ತೋಟವೇ ಕೇಳ್ಳೋರಿಲ್ಲದೇ ಬೀಳು ಬಿದ್ದಿದೆ.

ನಗರದ ಹೃದಯ ಭಾಗದಲ್ಲಿನ ತೋಟಗಾರಿಕೆ ಇಲಾಖೆ ಕಚೇರಿ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಹೊಂದಿದ ಏಕೈಕ ಇಲಾಖೆಯೆಂಬ ಕೀರ್ತಿಗೆ ಪಾತ್ರವಾಗಿದೆ. ಇಲ್ಲಿನ ಜಮೀನು ಬಳಸಿಕೊಂಡು ಉತ್ತಮ ಉದ್ಯಾನ ನಿರ್ಮಿಸಬೇಕೆಂಬ ಉದ್ದೇಶವೂ ಇದೆ. ಇದಕ್ಕೂ ಪೂರ್ವದಲ್ಲಿ ಇಲಾಖೆ ಮುಖ್ಯವಾಗಿ ತನ್ನ ಪಕ್ಕದಲ್ಲೇ ಕಣ್ಣಿಗೆ ಬೀಳುತ್ತಿರುವ ತೋಟವನ್ನೇ ಮರೆತಿದೆ.

ಸ್ಥಿತಿಗತಿ ಏನು?: ಹಲವು ವರ್ಷಗಳ ಹಿಂದೆಯೇ ಇಲ್ಲಿ 150ಕ್ಕೂ ಹೆಚ್ಚು ಸಪೋಟಾ ಸಸಿಗಳನ್ನು ಹಾಕಲಾಗಿತ್ತು. ಅವುಗಳು ಬೆಳೆದ ಹಲವು ವರ್ಷಗಳ ಕಾಲ ಫಲ ಕೊಟ್ಟಿವೆ. 50 ರಿಂದ 80 ಸಾವಿರ ರೂ. ವರೆಗೆ ಟೆಂಡರ್‌ ಕರೆದು ಹಣ್ಣುಗಳನ್ನು ಮಾರಾಟ ಮಾಡಿದ ಹಿನ್ನೆಲೆಯೂ ಇಲಾಖೆಗೆ ಇದೆ. ಇತ್ತೀಚಿನ ಕೆಲವು ವರ್ಷಗಳಿಂದ ಹಣ್ಣಿನ ಗಿಡಗಳನ್ನು ಕಡೆಗಣಿಸಲಾಗಿದೆ. ಈ ಹಿಂದೆ ಕಾಲುವೆ ನೀರು ಪೂರೈಕೆಯಾಗುತ್ತಿತ್ತು. ನಂತರದಲ್ಲಿ ನೀರು ಬರುತ್ತಿಲ್ಲವೆಂದು ಕೈ ಬಿಡಲಾಗಿದೆ. ಸದ್ಯ 100 ಗಿಡಗಳಲ್ಲಿ ಸಪೋಟಾ ಹಣ್ಣುಗಳಿವೆ. ಆದರೆ, ಇಲಾಖೆಯೇ ಕೈ ಚೆಲ್ಲಿರುವುದರಿಂದ ಈ ಹಣ್ಣುಗಳು ಕಂಡವರ ಪಾಲಾಗುತ್ತಿವೆ. ಜತೆಗೆ, ಗಿಡಗಳನ್ನು ಕಡಿದು ಕಟ್ಟಿಗೆಗೆ ಉಪಯೋಗಿಸುವವರ ಸಂಖ್ಯೆಯೂ ಹೆಚ್ಚಿದೆ.

ಕಾವಲು ಕಾಯುವವರಿಲ್ಲ: ತೋಟಗಾರಿಕೆ ಇಲಾಖೆಗೆ 21 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 10 ಹುದ್ದೆಗಳು ಭರ್ತಿಯಾಗಿವೆ. ರಾಜ್ಯ ವಲಯದಲ್ಲಿನ ಸಿಬ್ಬಂದಿಯೊಬ್ಬರು ಇದ್ದಾರೆ. ಈ ಹಿಂದೆ ಈ ತೋಟವನ್ನು ಸಂರಕ್ಷಿಸಲು 11 ಜನ ಗಾರ್ಡನರ್‌ ಗಳಿದ್ದರು. ಅವರೆಲ್ಲ ಒಬ್ಬೊಬ್ಬರಾಗಿ ನಿವೃತ್ತಿಯಾಗಿ ಹೋದ ನಂತರ ಆ ಸ್ಥಾನಗಳನ್ನು ತುಂಬಿಲ್ಲ. ಅಲ್ಲಿಂದ ತೋಟಗಾರಿಕೆ ಇಲಾಖೆ ಕಾವಲುಗಾರರಿಲ್ಲದಂತಾಗಿದೆ.

ಇಲಾಖೆ ಕಚೇರಿಯ ಹಿಂಭಾಗದಲ್ಲಿರುವ ತೋಟವನ್ನು ಕೂಡ ಮರೆಯಲಾಗಿದ್ದು, ಇಲ್ಲಿನ ತೋಟ ಬಯಲು ಬಹಿರ್ದೆಸೆ ತಾಣವಾಗಿದೆ. ನೀರು ಪೂರೈಕೆ ಮಾಡದಿದ್ದರೂ ಮಳೆಗಾಲದಲ್ಲಿ ಸಂಗ್ರಹವಾದ ನೀರನ್ನು ಆಧರಿಸಿ, ಸಪೋಟಾ ಗಿಡಗಳು ಹಣ್ಣು ಬಿಟ್ಟಿವೆ. ಕನಿಷ್ಠ ಬಿಟ್ಟ ಹಣ್ಣಗಳನ್ನಾದರೂ ರಕ್ಷಿಸುವ ಕೆಲಸ ಮಾಡದಿದ್ದರಿಂದ ಇಲಾಖೆಯ ತೋಟ ಪಾಳುಬಿದ್ದಿದೆ. ಗಿಡಗಳಿಗೆ ಕೊಡಲಿ ಏಟು ಬೀಳುತ್ತಿರುವುದರಿಂದ ತೋಟವೂ ಕೂಡ ಕೆಲವೇ ದಿನಗಳಲ್ಲಿ ಇಲ್ಲವಾಗುವ ಮುನ್ಸೂಚನೆಗಳು ದಟ್ಟವಾಗಿವೆ.

ವಿವಾದದಲ್ಲಿ ಜಮೀನು
ಇಲ್ಲಿನ ತೋಟಗಾರಿಕೆ ಇಲಾಖೆ 24 ಎಕರೆ ಜಮೀನು ಹೊಂದಿತ್ತು. 2 ಎಕರೆ ಜಮೀನು ರಾಷ್ಟ್ರೀಯ ಹೆದ್ದಾರಿಗೆ ಹೋಗಿದ್ದರೆ, ಮತ್ತೆ 2 ಎಕರೆ ಭೂಮಿಯನ್ನು ಎಪಿಎಂಸಿಗೆ ಬಿಟ್ಟು ಕೊಡಲಾಗಿದೆ. ಈ ಜಮೀನಿನ ಮೂಲಕ ಮಾಲೀಕರು ಕೂಡ ತಮಗೆ ಪರಿಹಾರ ಬಂದಿಲ್ಲವೆಂದು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ನಡುವೆ ತೋಟಗಾರಿಕೆ ಇಲಾಖೆಗೆ 2 ಎಕರೆ ಜಾಗ ಬಿಟ್ಟು ಉಳಿದ ಜಮೀನಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಉದ್ಯಾನ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಈ ಮೊದಲು ನೀರಿತ್ತು. ಈಗ ನೀರಿನ ಸೌಲಭ್ಯವಿಲ್ಲದ್ದರಿಂದ ಸಪೋಟಾ ಗಿಡಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅವು ಒಣಗುತ್ತಿದ್ದು, ಹಣ್ಣುಗಳು ಗಿಡದಲ್ಲೇ ಒಣಗುತ್ತಿವೆ. ಉತ್ತಮ ಫಲವೇನು ಬರುವುದಿಲ್ಲ.
ಬಸವರಾಜ್‌ ನಂದಿಬೇವೂರು,
ಹಿರಿಯ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಸಿಂಧನೂರು

*ಯಮನಪ್ಪ ಪವಾರ

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.