ಆಟೋ ಓಡಾಟದ ಮೇಲೆ ನಿಗಾ ಇಟ್ಟು ಬಲೆ ಹಾಕಿದ ಪೊಲೀಸರು: ವಾರದಲ್ಲೇ ಆಟೋ ಸಮೇತ ಕಳ್ಳ ಸೆರೆ
Team Udayavani, Jan 12, 2022, 9:00 AM IST
ಸಿಂಧನೂರು: ನಗರ ವ್ಯಾಪ್ತಿಯಲ್ಲಿ ಆಟೋವೊಂದು ಕಳವಾದ ಪ್ರಕರಣವನ್ನು ಪೊಲೀಸರು ಏಳೇ ದಿನದಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಚೂರು ತಾಲೂಕಿನ ಈರೇಶ ತಿಪ್ಪಯ್ಯ ಎಂಬ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದು, ಆತ ಕಳವು ಮಾಡಿದ್ದ ಆಟೋವನ್ನು ಜಪ್ತಿ ಮಾಡಿದ್ದಾರೆ.
ಜಪ್ತಿ ವಾಹನದ ಮೌಲ್ಯ 50 ಸಾವಿರ ರೂ.ಎಂದು ಅಂದಾಜಿಸಲಾಗಿದೆ. ಇತ್ತೀಚೆಗೆ ನಗರದಲ್ಲಿ ವಾಹನ ಕಳ್ಳತನದ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶದನಲ್ಲಿ ಸಿಪಿಐ ಉಮೇಶ ಕಾಂಬಳೆ, ಪಿಎಸ್ ಐ ಸೌಮ್ಯ, ಸಿಬ್ಬಂದಿ ಸಂಗನಗೌಡ, ಆದಯ್ಯ, ಅನಿಲ್, ಕುಮಾರ್, ಚಾಂದ್ ಪಾಷಾ, ಶರಣಪ್ಪ, ದ್ಯಾವಣ ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು. ನಗರದಲ್ಲಿ ಜನವರಿ 4, 2022 ರಂದು ಕಳವಾಗಿದ್ದ ಆಟೋವನ್ನು ಪತ್ತೆ ಹಚ್ಚಿ, ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಏಳು ದಿನದಲ್ಲಿ ಪ್ರಕರಣ ಬೇಧಿಸಿದ ಹಿನ್ನೆಲೆಯಲ್ಲಿ ಪೊಲೀಸ್ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ