ಬೇಕಾಬಿಟ್ಟಿ ವ್ಯಾಪಾರಕ್ಕೆ ಪೊಲೀಸರ ಕಡಿವಾಣ
Team Udayavani, May 12, 2021, 12:36 PM IST
ರಾಯಚೂರು: ಒಂದೆಡೆ ಕೊರೊನಾ ಸೋಂಕು ಮಿತಿ ಮೀರಿ ಹರಡುತ್ತಿದ್ದು, ಸಂಕಷ್ಟ ಎದುರಾಗುತ್ತಿದ್ದರೆ ಇತ್ತ ಮಾರುಕಟ್ಟೆಯಲ್ಲಿ ಜನ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. ಇದರಿಂದ ಮಂಗಳವಾರ ಪೊಲೀಸರು ಬೆಳಗ್ಗೆಯೇ ಮಾರುಕಟ್ಟೆಯಲ್ಲಿ ಸಂಚರಿಸುವ ಮೂಲಕ ಜನ ಸಂಚಾರಕ್ಕೆ ತುಸು ಕಡಿವಾಣ ಹಾಕಿದರು.
ಕಟ್ಟುನಿಟ್ಟಿನ ಜನತಾ ಕರ್ಫ್ಯೂ ಎಂದು ಸರ್ಕಾರ ಹೇಳಿದೆಯಾದರೂ ಬೆಳಗ್ಗೆ 10 ಗಂಟೆವರೆಗೆ ವ್ಯಾಪಾರ-ವಹಿವಾಟಿಗೆ ಅನುವು ಮಾಡಿದೆ. ಆದರೆ, ಜನಸಂಚಾರ ಮಿತಿ ಮೀರುತ್ತಿದ್ದು, ಪೊಲೀಸರು ಕೂಡ ಕೈ ಚೆಲ್ಲಿ ಕೂಡುವಂತಾಗಿತ್ತು. ಆದರೆ, ಕೊನೆಗೆ ಬೆಳಗ್ಗೆಯೇ ದಾಂಗುಡಿ ಇಟ್ಟ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರಿಗೆ ಬಿಸಿ ಮುಟ್ಟಿಸಿದರು.
ಅಲ್ಲದೇ, ಸುಖಾಸುಮ್ಮನೆ ಓಡಾಡದೇ ಬೇಗ ಬೇಗ ವ್ಯಾಪಾರ-ವಹಿವಾಟು ಮುಗಿಸಿಕೊಳ್ಳುವಂತೆ ತಾಕೀತು ಮಾಡಿದರು. ಅತ್ತ ರಂಜಾನ್ ಹಬ್ಬ ಸಮೀಪಿಸುತ್ತಿರುವ ಕಾರಣ ಹಬ್ಬದ ಖರೀದಿಗೆ ಜನ ಮಾರುಕಟ್ಟೆಯತ್ತ ಮುಗಿ ಬೀಳುತ್ತಿದ್ದಾರೆ. ಅದರ ಜತೆಗೆ ತರಕಾರಿ, ದಿನಸಿ, ಹಾಲು, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿರುತ್ತದೆ. ಬೆಳಗಿನ ನಾಲ್ಕು ಗಂಟೆಗಳ ಅವಧಿ ಯಲ್ಲೇ ಸೋಂಕು ವ್ಯಾಪಕವಾಗಿ ಹರಡಲು ಬೇಕಾದ ವಾತಾವರಣ ಇರುತ್ತದೆ. ಹೀಗಾಗಿ ಬೆಳಗ್ಗೆಯೇ ಮಾರುಕಟ್ಟೆಯಲ್ಲಿ ಸಂಚರಿಸಿದ ಪೊಲೀಸರು ಜನರನ್ನು ಚದುರಿಸಲು ಕ್ರಮ ಕೈಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ರಾಜಕೀಯ ಬಿಟ್ಟು ಕೃಷಿ ಮಾಡುವೆ: ಸಂಗಣ್ಣ ಕರಡಿ
Politics: ರಾಜ್ಯದಲ್ಲಿ ಇನ್ನೂ 9 ವರ್ಷ ಕಾಂಗ್ರೆಸ್ಗೆ ಅಧಿಕಾರ: ಡಿಕೆಶಿ
Politics: ಪ್ರಧಾನಿ ಅಧಿಕಾರಕ್ಕಾಗಿ ಏನಾದರೂ ಮಾಡುತ್ತಾರೆ; ಸಚಿವ ಭೋಸರಾಜು ವಾಗ್ದಾಳಿ
Raichur; ಅನಂತ ಕುಮಾರ್ ಹೆಗಡೆ ಮೂರ್ಖ ಸಂಸದ: ಸಚಿವ ಬಿ.ನಾಗೇಂದ್ರ
BJP; ಒಂದೆರಡು ದಿನಗಳಲ್ಲಿ 20 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ, ನನ್ನ ಹೆಸರೂ ಇದೆ: ಶ್ರೀ ರಾಮುಲು
MUST WATCH
ಹೊಸ ಸೇರ್ಪಡೆ
SS Rajamouli: ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್ನಲ್ಲಿ ಸುಳಿವು ಕೊಟ್ಟ ರಾಜಮೌಳಿ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!