ಮಾನ್ವಿಯಲ್ಲಿ “ಕಾಲಾ’ಗೆ ಪೊಲೀಸ್ ಕಾವಲು!
Team Udayavani, Jun 8, 2018, 1:45 PM IST
ಮಾನ್ವಿ: ಕಾವೇರಿ ಜಲ ವಿವಾದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ತಮಿಳು ನಟ ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಪ್ರದರ್ಶನ ರದ್ದತಿಗೆ ಆಗ್ರಹಿಸಿ ಕರವೇ ಪ್ರವೀಣಶೆಟ್ಟಿ ಬಣ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘಟನೆ ತಾಲೂಕು ಅಧ್ಯಕ್ಷ ಸುಭಾನ್ ಬೇಗ್, ತಮಿಳು ನಟ ರಜನಿಕಾಂತ್ ಮೂಲತಃ
ಕನ್ನಡಿಗರಾಗಿದ್ದಾರೆ. ಕಾವೇರಿ ನದಿ ನೀರಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಆದ್ದರಿಂದ ಪಟ್ಟಣದಲ್ಲಿ ಅವರ ನಟನೆಯ ಕಾಲಾ ಚಿತ್ರ ಪ್ರದರ್ಶನ ತಡೆಯಬೇಕೆಂದು ಆಗ್ರಹಿಸಿದರು.
ರಜನಿಕಾಂತ್ ಅವರು ಇತ್ತೀಚೆಗಷ್ಟೇ ನೂತನ ರಾಜಕೀಯ ಪಕ್ಷ ಕಟ್ಟಿದ್ದಾರೆ. ಅಲ್ಲಿನ ತಮಿಳಿಗರನ್ನು ಓಲೈಸಲು ಈ ರೀತಿ ವರ್ತಿಸುತ್ತಿದ್ದಾರೆ. ಕಾವೇರಿ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಇದರಿಂದಾಗಿ ಕರ್ನಾಟಕ
ಮತ್ತು ತಮಿಳುನಾಡು ಜನರಲ್ಲಿ ದ್ವೇಷ ಭಾವನೆಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ. ತಾವೊಬ್ಬ ಹಿರಿಯ ಕಲಾವಿದರಾಗಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು ಎಂದು ಹೇಳಿದರು.
ಪೊಲೀಸ್ ಭದ್ರತೆಯಲ್ಲಿ ಪ್ರದರ್ಶನ: ಕರವೇ ಕಾರ್ಯಕರ್ತರ ಒತಾಯಕ್ಕೆ ಮಣಿದು ಪಟ್ಟಣದ ಅಪರ್ಣ ಚಿತ್ರಮಂದಿರ
ಮಾಲಿಕರು ಬೆಳಗ್ಗೆ 11 ಗಂಟೆಯ ಪ್ರದರ್ಶನ ಮತ್ತು ಮಧ್ಯಾಹ್ನ 2 ಗಂಟೆಯ ಪ್ರದರ್ಶನ ರದ್ದುಗೊಳಿಸಿದ್ದರು. ನಂತರ ಪೊಲೀಸ್ ಭದ್ರತೆಯೊಂದಿಗೆ ಸಂಜೆ 6 ಗಂಟೆಯ ಪ್ರದರ್ಶನ ಪ್ರಾರಂಭಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ಸೌಂದರ್ಯ, ಉಪಾಧ್ಯಕ್ಷೆ ನಾಗಿಣಿ, ಪಿ. ಉಮಾಪತಿ, ಯೂಸೂಫ್, ಅರವಿಂದ ಭಾಷೋತ್ಕರ್, ರಹೀಮ್, ಪ್ರಸಾದ, ಗಿರೀಶ ಜೋಶಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್ಐ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ