ವುಡನ್ ಕೋರ್ಟ್ನಲ್ಲಿ ಟಿಟಿ ಟೇಬಲ್ ತೆರವಿಗೆ ಒತ್ತಾಯ
Team Udayavani, Oct 30, 2021, 6:12 PM IST
ರಾಯಚೂರು: ಜಿಲ್ಲಾ ಕ್ರೀಡಾಂಗಣದ ಬ್ಯಾಡ್ಮಿಂಟನ್ ವುಡನ್ ಕೋರ್ಟ್ನಲ್ಲಿ ಟಿಟಿ ಟೇಬಲ್ಗಳನ್ನು ಹಾಕುವುದರಿಂದ ಹಾನಿಯಾಗುತ್ತದೆ. ಎಲ್ಲೂ ಟಿಟಿ ಟೇಬಲ್ಗಳು ಹಾಕುವುದಿಲ್ಲ. ಈ ಕೂಡಲೇ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಜಿಲ್ಲಾ ಬ್ಯಾಡ್ಮಿಂಟನ್ ಅಸೊಸಿಯೇಶನ್ ಸದಸ್ಯರು ಪ್ರಭಾರ ಜಿಲ್ಲಾಧಿಕಾರಿಗೆ ಶೇಖ್ ತನ್ವೀರ್ ಆಸೀಫ್ ಅವರಿಗೆ ಮನವಿ ಸಲ್ಲಿಸಿದರು.
ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ವಿಶ್ವದರ್ಜೆಯ ಆರು ಮರದ ಬ್ಯಾಡ್ಮಿಂಟನ್ ಕೋರ್ಟ್ ಗಳನ್ನು ಎಚ್ಕೆಆರ್ಡಿಬಿಯಿಂದ ಮಂಜೂರು ಮಾಡಲಾಗಿದೆ. ಟೆಂಡರ್ ದಾಖಲೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಹಿಂದಿನ ಜಿಲ್ಲಾಧಿಕಾರಿ ಡಾ| ಸತೀಶ್ ಅವರು ಟಿಟಿ ಟೇಬಲ್ಗಳನ್ನು ತೆಗೆದು ಹಾಕಿಸಿದ್ದರು. ಜಿಲ್ಲಾಧಿಕಾರಿ ವರ್ಗಾವಣೆಯಾದ ತಕ್ಷಣ ಬ್ಯಾಡ್ಮಿಂಟನ್ ವುಡನ್ ಕೋರ್ಟ್ನಲ್ಲಿ ಎರಡು ಟಿಟಿ ಟೇಬಲ್ಗಳನ್ನು ಮತ್ತೆ ಹಾಕಲಾಗಿದೆ ಎಂದು ದೂರಿದರು.
ಬ್ಯಾಡ್ಮಿಂಟನ್ ಮರದ ಅಂಕಣಗಳನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಬ್ಯಾಡ್ಮಿಂಟನ್ ಅನ್ನು ಗುರುತು ಹಾಕದ ಬ್ಯಾಡ್ಮಿಂಟನ್ ಶೂಗಳೊಂದಿಗೆ ಆಡಲಾಗುತ್ತದೆ. ಬ್ಯಾಡ್ಮಿಂಟನ್ ಮರದ ಅಂಗಣದಲ್ಲಿ ಯಾವುದೇ ಗಟ್ಟಿಯಾದ ವಸ್ತುವನ್ನು ಹಾಕುವುದರಿಂದ ಮರದ ನೆಲಕ್ಕೆ ಹಾನಿಯಾಗುತ್ತದೆ. ಬ್ಯಾಡ್ಮಿಂಟನ್ ಕ್ರೀಡೆಯ ಅಭಿವೃದ್ಧಿಗಾಗಿ ಗಮನಕ್ಕೆ ತರುತ್ತಿದ್ದು, ಈ ಕೂಡಲೇ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಕಿರಣ್ ಬೆಲ್ಲದ್, ಉಪಾಧ್ಯಕ್ಷ ರಾಮಲಿಂಗ ಯಲೇರಿ, ಸದಸ್ಯರಾದ ಆನಂದ್, ಶಿವರಾಜ ಬಿದರಾನಿ, ನಾಗರಾಜ, ಜಂಬಣ್ಣ ವೈ, ರಮೇಶ, ಬಸವರಾಜ, ವಿಷ್ಣು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ