ಪ್ರಶಸ್ತಿಗಿಂತ ಅಪ್ಪು ವ್ಯಕ್ತಿತ್ವವೇ ದೊಡ್ಡದು: ನಟ ಚೇತನ್
Team Udayavani, Nov 8, 2021, 12:45 PM IST
ರಾಯಚೂರು: ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದರೂ- ನೀಡದಿದ್ದರೂ ಯಾವುದೇ ವ್ಯತ್ಯಾಸವಿಲ್ಲ. ಅವರು ತಮ್ಮ ವ್ಯಕ್ತಿತ್ವದ ಮೂಲಕ ಇಡೀ ನಾಡಿಗೆ ಮಾದರಿಯಾಗಿದ್ದಾರೆ ಎಂದು ನಟ ಚೇತನ್ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪುನೀತ್ ಅವರ ಜತೆ 14 ವರ್ಷಗಳ ಸ್ನೇಹವಿದೆ. ಅವರೊಬ್ಬ ಉತ್ತಮ ವ್ಯಕ್ತಿ. ಸಮಾಜಸೇವೆ ಮೂಲಕ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಪುನೀತ್ ಅವರಿಗೆ ಪದ್ಮಶ್ರೀ ಕೊಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ಪ್ರಶಸ್ತಿಗಳಿಂದ ಪುನೀತ್ ವ್ಯಕ್ತಿತ್ವ ಹೆಚ್ಚು ಆಗುವುದಿಲ್ಲ, ಕಡಿಮೆಯೂ ಆಗುವುದಿಲ್ಲ ಎಂದರು.
ಇದನ್ನೂ ಓದಿ:ಅಪ್ಪು ಬಿಟ್ಟುಹೋದ ಜಾಗ ತುಂಬಲು ಸಾಧ್ಯವಿಲ್ಲ: ರಮೇಶ್ ಅರವಿಂದ್