ಮೊದಲ ದಿನದಲ್ಲೇ 2.5 ಕೋಟಿ ರೂ. ಮದ್ಯ ಮಾರಾಟ
ಪರಿಷ್ಕೃತ ದರ ನಿಗದಿ-ಸಮಯ ಬದಲಾವಣೆ ಮದ್ಯದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಮಾಯ
Team Udayavani, May 6, 2020, 12:29 PM IST
ಸಾಂದರ್ಭಿಕ ಚಿತ್ರ
ರಾಯಚೂರು: ಬರೋಬ್ಬರಿ ಒಂದೂವರೆ ತಿಂಗಳು ಬಳಿಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೊದಲ ದಿನವೇ 2.5 ಕೋಟಿ ರೂ. ಮದ್ಯ ಮಾರಾಟವಾಗಿದೆ. 118 ಅಂಗಡಿಗಳಲ್ಲಿ 89 ವೈನ್ ಶಾಪ್, 29 ಎಂಎಸ್ಐಎಲ್ ಆರಂಭಿಸಲಾಗಿದೆ. 53,750 ಲೀಟರ್ ಮದ್ಯ ವಿಸ್ಕಿ, 13,850 ಲೀಟರ್ ಬೀಯರ್ ಮಾರಾಟವಾಗಿದೆ. ಇದರ ಮೌಲ್ಯದ 2.5 ಕೋಟಿ ರೂ. ದಾಟಿದೆ. ಆದರೂ, ಸಂಜೆ ಸಾಕಷ್ಟು ಜನರಿಗೆ ಮದ್ಯ ಸಿಗದೆ ಮರಳಿ ಹೋಗಿದ್ದಾರೆ.
ಸೋಮವಾರ ಬೆಳಗ್ಗೆ 9:00ರಿಂದ ಸಂಜೆ 7:00ರ ವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಇದ್ದರೂ ಬಹುತೇಕ ಅಂಗಡಿಗಳಲ್ಲಿ ಸಂಜೆ 5:00 ಗಂಟೆಗೆಲ್ಲ ಖಾಲಿಯಾಗಿತ್ತು. ಇದರಿಂದ ಕೆಲಕಾಲ ಮದ್ಯದ ಅಂಗಡಿಗಳ ಎದುರು ಜನ ಜಮಾಯಿಸಿದ್ದರು. ಗಲಾಟೆಯಾಗುವ ಮುನ್ಸೂಚನೆ ಕಂಡ ಪೊಲೀಸರು ಜನರನ್ನು ಚದುರಿಸಿದರು. ಆದರೆ, ಸರ್ಕಾರ ಮದ್ಯದ ದರವನ್ನು ಶೇ.6ರಷ್ಟು ಹೆಚ್ಚಿಸಿರುವ ಕಾರಣ ಮಂಗಳವಾರದಿಂದ ಪರಿಷ್ಕೃತ ದರ ಜಾರಿಗೊಳಿಸಲಾಗಿದೆ.
ಅಬಕಾರಿ ಇಲಾಖೆ ಗೋಡಾನ್ನಲ್ಲಿ ಸಂಗ್ರಹವಾಗಿದ್ದ ಮದ್ಯವನ್ನು ಅಂಡಿಗಳಿಗೆ ಸಾಗಿಸಲಾಗಿದೆ. ಆದರೆ, ಲಾಕ್ಡೌನ್ ಕಾರಣಕ್ಕೆ ಕೆಲವೊಂದು ಬ್ರ್ಯಾಂಡ್ ಮದ್ಯ ಖಾಲಿಯಾಗಿದೆ. ಮಾರಾಟ ಆರಂಭವಾದ ಒಂದು ಗಂಟೆಯೊಳಗೆ ಕೆಲವೆಡೆ ಮದ್ಯ ಖಾಲಿಯಾಗಿದೆ. ಮೊದಲ ದಿನ ಕೆಲಕಾಲ ಸಾಮಾಜಿಕ ಅಂತರ ಕಂಡು ಬಂದರೂ ಮಧ್ಯಾಹ್ನಕ್ಕೆಲ್ಲ ಜನ ಗುಂಪು ಗುಂಪಾಗಿ ಮದ್ಯ ಖರೀದಿಗೆ ಮುಗಿ ಬಿದ್ದಿದ್ದರು. ಹೀಗಾಗಿ ಮಂಗಳವಾರದಿಂದ ಸಮಯ ಬದಲಿಸಲಾಗಿದೆ. ಬೆಳಗ್ಗೆ 8:00ರಿಂದ ಮಧ್ಯಾಹ್ನ 2:00ರ ವರೆಗೂ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆಂಧ್ರ, ತೆಲಂಗಾಣದಲ್ಲಿ ಕೊರೊನಾ ಭೀತಿ ಇರುವ ಕಾರಣ ಗಡಿ ಭಾಗದಲ್ಲಿ ನಾಲ್ಕು ವೈನ್ ಶಾಪ್ ಹಾಗೂ ಒಂದು ಎಂಎಸ್ಐಎಲ್ ಅಂಗಡಿ ಮುಚ್ಚಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು
ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!
MUST WATCH
ಹೊಸ ಸೇರ್ಪಡೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ
Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ