ರುಚಿಯಾದ ಊಟ, ಏರಿದ ಜನಪ್ರವಾಹ-ನೂಕುನುಗ್ಗಲು
2ನೇ ದಿನ ಭೋಜನಗೃಹದಲ್ಲಿ ಕಂಡು ಬಂದ ದೃಶ್ಯ ಜನರ ದಾಂಗುಡಿಗೆ ಗಲಿಬಿಲಿಗೊಂಡ ಸಂಘಟಕರು
Team Udayavani, Feb 7, 2020, 12:04 PM IST
ರಾಯಚೂರು: ಗಡಿಭಾಗದ ಸಮ್ಮೇಳನಕ್ಕೆ ಆಭೂತಪೂರ್ವ ಬೆಂಬಲ ನೀಡಿರುವ ಸಾಹಿತ್ಯಾಸಕ್ತರಿಗೆ ಎರಡನೇ ದಿನವೂ ರುಚಿಯಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಧ್ಯಾಹ್ನದ ಊಟಕ್ಕಾಗಿ ಹಿಂದಿನಗಳಂತೆಯೇ ನೂಕುನುಗ್ಗಲು ಏರ್ಪಟ್ಟು ಜನ ಪ್ರಯಾಸದಲ್ಲೇ ಊಟ ಮುಗಿಸಿದರು.
ಎರಡನೇ ದಿನ ಬೆಳಗ್ಗೆ ಉಪಾಹಾರಕ್ಕೆ ಮಂಡಳ ಒಗ್ಗರಣೆ (ಸುಸಲಾ) ಹಾಗೂ ಮೆಣಸಿನಕಾಯಿ ಭಜ್ಜಿ ಮಾಡಲಾಗಿತ್ತು. ಅದರ ಜತೆಗೆ ಮೈಸೂರ್ ಪಾಕ್ ನೀಡಲಾಯಿತು. ಬೆಳಗ್ಗೆ ಸುಮಾರು 35 ಸಾವಿರಕ್ಕೂ ಅಧಿಕ ಜನ ಉಪಾಹಾರ ಸ್ವೀಕರಿಸಿದರು. ಜನ ಹೆಚ್ಚಾಗಿ ಬರುತ್ತಿದ್ದ ಕಾರಣ ಮಧ್ಯಾಹ್ನದ ಊಟವನ್ನು ಬೇಗನೆ ಶುರು ಮಾಡಲಾಯಿತು. ಶೇಂಗಾ ಹೋಳಿಗೆ ನಿನ್ನೆಯ ವಿಶೇಷ ಭಕ್ಷ್ಯವಾಗಿತ್ತು. ಅದರ ಜತೆಗೆ ಖಡಕ್ ರೊಟ್ಟಿ, ಚಪಾತಿ, ಪುಂಡೆಪಲ್ಯ, ಕಡಲೆಕಾಯಿ ಕಾಳು ಮಾಡಲಾಗಿತ್ತು. ಆಹಾರ ಸಮಿತಿಯ ಅಧಿಕಾರಿ ಮಾಹಿತಿ ಪ್ರಕಾರ, ಮಧ್ಯಾಹ್ನ 80 ಸಾವಿರ ಜನ ಊಟ ಮಾಡಿದ್ದಾರೆ.
ಮೊದಲ ದಿನ ಸದಸ್ಯತ್ವ ಪಡೆದವರಿಗಾಗಿ ಮೀಸಲಿಟ್ಟ ಮೊದಲ 20 ಕೌಂಟರ್ಗಳಲ್ಲೂ ಎಲ್ಲರಿಗೂ ಊಟ ಬಡಿಸಲಾಗಿತ್ತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತವಾದ ಕಾರಣ ಎರಡನೇ ದಿನ, ಆ ಕೌಂಟರ್ಗಳನ್ನು ಬಿಟ್ಟು ಉಳಿದವುಗಳಲ್ಲಿ ಮಾತ್ರ ಸಾರ್ವಜನಿಕರಿಗೆ ಊಟ ಬಡಿಸಲಾಯಿತು. ಇದರಿಂದ ತುಸು ಗೊಂದಲ ಏರ್ಪಟ್ಟು ಅಲ್ಲಲ್ಲಿ ನೂಕುನುಗ್ಗಲು ಉಂಟಾಯಿತು. ಸ್ಥಳದಲ್ಲಿ ಪೊಲೀಸರ ಕೊರತೆ ಕಂಡುಬಂದ ಕಾರಣ ಜನಸಂದಣಿ ನಿಯಂತ್ರಿಸುವವರೇ ಇಲ್ಲದಂತಾಗಿತ್ತು. ಮಧ್ಯಾಹ್ನ ಮೂರು ಗಂಟೆಯಾದರೂ ಊಟದ ಸರದಿಯಲ್ಲಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಊಟ ಮುಗಿಸಿಕೊಂಡು ಬರುವವರ ಸಂಖ್ಯೆಗೆ ಸಮನಾಗಿ, ಊಟ ಮಾಡಲು ಬರುವವರ ಸಂಖ್ಯೆಯಿತ್ತು. ಇನ್ನು ರಾತ್ರಿಗೆ ಬಿಸಿಬೇಳೆ ಬಾತ್, ಮೊಸರನ್ನ, ಹೆಸರುಬೇಳೆ ಪಾಯಸದ ವ್ಯವಸ್ಥೆ ಮಾಡಲಾಗಿತ್ತು.
ಜನರ ಸಂಖ್ಯೆ ವಿಪರೀತ ಏರಿದೆ. ಊಟೋಪಚಾರದಲ್ಲಿ ಕಿಂಚಿತ್ತೂ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಅಡುಗೆ ಕೆಲಸ ನಿರಂತರವಾಗಿ ನಡೆಯುತ್ತಿದೆ. ಜನಸಂದಣಿ ಹೆಚ್ಚಾಗಿರುವ ಕಾರಣ ಅಲ್ಲಲ್ಲಿ ನೂಕುನುಗ್ಗಲು ಆಗುತ್ತಿದೆ. ಪೊಲೀಸರು ನಿಯಂತ್ರಿಸುತ್ತಿದ್ದಾರೆ.
ಪ್ರವೀಣಾಪ್ರಿಯ,
ಆಹಾರ ಸಮಿತಿ ಕಾರ್ಯಾಧ್ಯಕ್ಷ
ಸಿದ್ಧಯ್ಯಸ್ವಾಮಿ ಕುಕುನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು
ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!
MUST WATCH
ಹೊಸ ಸೇರ್ಪಡೆ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ