ಮಳೆ-ಗಾಳಿಗೆ ನಾನಾ ಕಡೆ ಅನಾಹುತ
•ಕಿತ್ತು ಹೋದ ಪಾಲಿ ಹೌಸ್ಗೆ ಅಳವಡಿಸಿದ ಪ್ಲಾಸ್ಟಿಕ್ •ಸಂಪೂರ್ಣ ಕಿತ್ತು ಹೋದ ಗುಡಿಸಲು ಹೊದಿಕೆ •ವಿದ್ಯುತ್ ಕಂಬಗಳು ಧರೆಗೆ
Team Udayavani, May 22, 2019, 10:16 AM IST
ರಾಯಚೂರು: ತಾಲೂಕಿನ ಚಂದ್ರಬಂಡಾದ ರೈತ ತಾಯಪ್ಪ ಅವರ ಹೊಲದಲ್ಲಿ ಅಳವಡಿಸಿದ್ದ ಪಾಲಿ ಹೌಸ್ ಹೊದಿಕೆ ಕಿತ್ತು ಹೋಗಿರುವುದು.
ರಾಯಚೂರು: ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆಗೆ ನಾನಾ ಕಡೆ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ತಡರಾತ್ರಿ 12 ಗಂಟೆ ಸುಮಾರಿಗೆ ಎಲ್ಲೆಡೆ ಭಾರೀ ಗಾಳಿ ಬೀಸಿ, ಗುಡುಗು ಸಹಿತ ಮಳೆಯಾದರೆ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ.
ತಾಲೂಕಿನ ಕಡಗಂದೊಡ್ಡಿಯಲ್ಲಿ ಮಳೆ ಗಾಳಿಗೆ ಗುಡಿಸಲು ಛಾವಣಿ ಹಾರಿ ಹೋದರೆ, ಕಂಬಗಳು ನೆಲಕ್ಕುರುಳಿವೆ. ಚಂದ್ರಬಂಡಾದಲ್ಲಿ ತಾಯಪ್ಪ ತನ್ನ ಹೊಲದಲ್ಲಿ ಪಾಲಿ ಹೌಸ್ಗೆ ಅಳವಡಿಸಿದ್ದ ಮೇಲ್ಪದರ ಪ್ಲಾಸ್ಟಿಕ್ ಸಂಪೂರ್ಣ ಕಿತ್ತು ಹೋಗಿದ್ದು, ಅಂದಾಜು 3 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎನ್ನಲಾಗುತ್ತಿದೆ. ಇನ್ನು ಕಡಗಂದೊಡ್ಡಿ ಗ್ರಾಮದ ಅಂಜಿನಮ್ಮರ ಗುಡಿಸಲು ಗಾಳಿಗೆ ಕಿತ್ತು ಹೋಗಿದೆ. ಮೇಲ್ಪದರು ಸಂಪೂರ್ಣವಾಗಿ ಗಾಳಿಗೆ ಹಾರಿ ಹೋಗಿದ್ದು, ಅವರ ಬದುಕು ಬೀದಿ ಪಾಲಾಗಿದೆ. ಗ್ರಾಮದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿ, ರಾತ್ರಿಯೇ ವಿದ್ಯುತ್ ವ್ಯತ್ಯಯವಾಗಿತ್ತು. ಇನ್ನು ತಾಲೂಕಿನ ಮನ್ಸಲಾಪುರ ಗ್ರಾಮದಲ್ಲೂ ರೈತನೊಬ್ಬನ ಹೊಲದಲ್ಲಿ ಅಳವಡಿಸಿದ್ದ ಪಾಲಿ ಹೌಸ್ ಕಿತ್ತು ಹೋಗಿರುವ ಮಾಹಿತಿ ಇದೆ. ಸಿರವಾರ, ಲಿಂಗಸುಗೂರು, ಮಸ್ಕಿ ಸೇರಿ ವಿವಿಧೆಡೆ ಆಲಿಕಲ್ಲು ಸಹಿತ ಮಳೆಯಾದ ವರದಿಯಾಗಿದೆ. ಆದರೆ, ಕೆಲವೆಡೆ ಬರೀ ಗುಡುಗು ಸಿಡಿಲಿನ ಆರ್ಭಟ ಇತ್ತಾದರೂ ಮಳೆ ಬರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ