ಆಡಳಿತಕ್ಕೆ ಕಾಣದೇ ಹದಗೆಟ್ಟ ರಂಗಮಂದಿರ ರಸ್ತೆ?
Team Udayavani, Sep 22, 2022, 4:33 PM IST
ರಾಯಚೂರು: ನಿತ್ಯ ನೂರಾರು ಜನ ಆಗಮಿಸುವ ನಗರದ ಪ್ರಮುಖ ಕೇಂದ್ರ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದ ಮುಂಭಾಗದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಕೇಳೊರಿಲ್ಲದಂತಾಗಿದೆ.
ಮಳೆ ಬಂದರೆ ಇಡೀ ವಾತಾವರಣ ಕೆಸರುಮಯವಾಗುತ್ತದೆ. ನಗರದಲ್ಲಿ ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ ನಡೆದರೂ ಅದು ಈ ರಂಗಮಂದಿರದಲ್ಲಿಯೇ. ಸರ್ಕಾರಿ ಕಾರ್ಯಕ್ರಮಗಳು, ಮಹನೀಯರ ಜಯಂತಿಗಳು ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲಿ ನಡೆಯುತ್ತವೆ. ಇಂಥ ಕಾರ್ಯಕ್ರಮಗಳಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಕೇವಲ ಜನರು ಮಾತ್ರವಲ್ಲ ಜಿಲ್ಲಾಧಿಕಾರಿ, ನಗರಸಭೆ ಆಯುಕ್ತರು, ಶಾಸಕರಿಂದ ಹಿಡಿದು ನಗರಸಭೆ ಸದಸ್ಯರವರೆಗೆ ಎಲ್ಲರೂ ಬಂದು ಹೋಗುತ್ತಾರೆ. ಆದರೆ, ಇಲ್ಲಿನ ಅವ್ಯವಸ್ಥೆ ಬಗ್ಗೆ ಮಾತ್ರ ಜಿಲ್ಲಾಡಳಿತಕ್ಕಾಗಲಿ, ನಗರಾಡಳಿತಕ್ಕಾಗಲಿ ಕಾಣದಿರುವುದು ವಿಪರ್ಯಾಸ.
ಇಲ್ಲಿನ ರಸ್ತೆ ಸಂಪೂರ್ಣ ಹಾಳಾಗಿ ತಗ್ಗು ದಿನ್ನೆಗಳಿಂದ ಕೂಡಿದೆ. ಸ್ವಲ್ಪ ಮಳೆ ಬಂದರೂ ನೀರು ಶೇಖರಣೆಯಾಗುತ್ತದೆ. ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಸ್ವತ್ಛಗೊಳಿಸಿಲ್ಲ. ಚರಂಡಿಯಲ್ಲಿ ಹೂಳು ತುಂಬಿ ಮುಚ್ಚಿಕೊಂಡು ಹೋಗಿದೆ. ಮುಂದಿನ ಉದ್ಯಾನವನದ ಕಾಂಪೌಂಡ್ಗೆ ಹೊಂದಿಕೊಂಡು ಫುಟ್ಪಾತ್ ನಿರ್ಮಿಸಿದ್ದು, ಬಿಟ್ಟರೆ ಯಾವುದೇ ಡಾಂಬರೀಕರಣವಾಗಲಿ, ಮರಂ ಹಾಕಿ ಸಮತಟ್ಟು ಮಾಡುವುದಾಗಲಿ ಮಾಡಿಲ್ಲ. ರಂಗಮಂದಿರ ನಗರದ ಹೃದಯ ಭಾಗ ಮಾತ್ರವಲ್ಲದೇ, ಕೇಂದ್ರ ಬಿಂದುವಾಗಿದೆ.
ನಗರದಲ್ಲಿ ನಡೆಯುವ ಬಹುತೇಕ ಪ್ರಮುಖ ಕಾರ್ಯಕ್ರಮಗಳಿಗೆ ಇದೇ ಮುಖ್ಯ ವೇದಿಕೆ. ಗಣ್ಯಾತಿಗಣ್ಯರು, ಪ್ರಭಾವಿಗಳು, ಸಚಿವರು ಸೇರಿದಂತೆ ದೊಡ್ಡ-ದೊಡ್ಡ ವ್ಯಕ್ತಿಗಳು ಬರುತ್ತಾರೆ. ಅದರ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಕೂಡ ಇದೇ ಕಟ್ಟಡದಲ್ಲಿದೆ. ಇಷ್ಟೆಲ್ಲ ಇದ್ದಾಗ್ಯೂ ಕನಿಷ್ಠ ಮೂಲ ಸೌಲಭ್ಯಗಳು ಇಲ್ಲದಿರುವುದು ಆಡಳಿತದ ವೈಫಲ್ಯ ಎತ್ತಿ ತೋರುತ್ತದೆ. ಮುಖ್ಯರಸ್ತೆ ಮಾರ್ಪಟ್ಟಿದೆ: ಇದು ಕೇವಲ ರಂಗಮಂದಿರಕ್ಕೆ ಮಾತ್ರ ಸಂಪರ್ಕ ಕಲ್ಪಿಸದೆ ಬೇರೆ ಕಡೆ ಓಡಾಡುವ ಮುಖ್ಯರಸ್ತೆಯಾಗಿ ಮಾರ್ಪಟ್ಟಿದೆ.
ರಂಗಮಂದಿರ ಮುಂಭಾಗದಿಂದಲೇ ಕನ್ನಡ ಭವನ, ಗ್ರಂಥಾಲಯ ಸೇರಿದಂತೆ ವಿವಿಧೆಡೆ ಓಡಾಡುತ್ತಾರೆ. ರಂಗಮಂದಿರ ಹಿಂಭಾಗ ಸಿಸಿ ರಸ್ತೆ ಮಾಡಿದ್ದರೂ ಅದನ್ನು ಬಹುತೇಕರು ಬಳಕೆ ಮಾಡುತ್ತಿಲ್ಲ. ವಾಹನಗಳ ಓಡಾಟ ಹೆಚ್ಚಾಗಿರುವ ಕಾರಣ ಈ ರಸ್ತೆ ಕೂಡ ಸಂಪೂರ್ಣ ಹಾಳಾಗಿದ್ದು, ಅವ್ಯವಸ್ಥೆ ಆಗರವಾಗಿ ಮಾರ್ಪಟ್ಟಿದೆ.
ರಂಗಮಂದಿರ ಮುಂಭಾಗದ ರಸ್ತೆ ದುರಸ್ತಿಗಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವ ಭರವಸೆ ನೀಡಿದ್ದಾರೆ. ಗ್ರಂಥಾಲಯ, ಕನ್ನಡ ಭವನ ಸೇರಿದಂತೆ ವಿವಿಧೆಡೆ ಓಡಾಡುವವರು ಇದೇ ರಸ್ತೆ ಬಳಸುತ್ತಿದ್ದಾರೆ. ಕಾಂಪೌಂಡ್ ನಿರ್ಮಿಸುವ ಮೂಲಕ ಅದಕ್ಕೆ ಕಡಿವಾಣ ಹಾಕುವ ಕುರಿತು ತಿಳಿಸಲಾಗಿದೆ. –ಮಂಗಳಾ ನಾಯಕ, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’