ರೋಶನ್ ಬೇಗ್ ಬಂಧನ ಹಣಕಾಸಿನ ವಿಚಾರಕ್ಕೆ, ಕಾಂಗ್ರೆಸ್ ಗೆ ಸಂಬಂಧಿಸಿದ್ದಲ್ಲ:ಸತೀಶ್ ಜಾರಕಿಹೊಳಿ
Team Udayavani, Nov 23, 2020, 1:53 PM IST
ರಾಯಚೂರು: ರೋಶನ್ ಬೇಗ್ ಬಂಧನ ವಿಚಾರ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಿದ್ದು, ಅದಕ್ಕೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.
ಮಸ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ನ್ಯಾಯಾಲಯ ನೋಡಿಕೊಳ್ಳುತ್ತದೆ. ಪಕ್ಷ ಅಂದರೆ ಸಮಸ್ಯೆ ಇರುವುದು ಸಾಮಾನ್ಯ. ಪಕ್ಷದಲ್ಲಿನ ನಾಯಕತ್ವ ವಿಚಾರ ಮಸ್ಕಿ ಚುನಾವಣೆಗೆ ಸಂಬಂಧವಿಲ್ಲ. ಪಕ್ಷ ಹಾಗೂ ಬಸನಗೌಡರ ಶಕ್ತಿಯಿಂದ ಚುನಾವಣೆ ಎದುರಿಸುತ್ತೇವೆ. ಪಕ್ಷ ಬಿಟ್ಟುಹೋದವರಿಗೆ ಜನ ಪಾಠ ಕಲಿಸುತ್ತಾರೆ ಎಂದರು.
ಇದನ್ನೂ ಓದಿ:ರೋಶನ್ ಬೇಗ್ ನಮ್ಮ ಪಕ್ಷದಲ್ಲಿಲ್ಲ, ನಮಗೂ ಅವರಿಗೂ ಸಂಬಂಧವಿಲ್ಲ: ಸಿದ್ದರಾಮಯ್ಯ
ಪಕ್ಷದಿಂದ ಯಾವುದೇ ಸಮಸ್ಯೆಯಿಲ್ಲ ವ್ಯಕ್ತಿಯಿಂದ ಸಮಸ್ಯೆಯಾಗಿದೆ. ಆರ್ ಆರ್ ನಗರ, ಶಿರಾ ಸೋಲು ಬೇರೆ ಇಲ್ಲಿನ ಚುನಾವಣೆಯೇ ಬೇರೆ ಎಂದ ಅವರು, ನೀರಾವರಿ ಯೋಜನೆಗಳೆಲ್ಲ ಕಾಂಗ್ರೆಸ್ ನ ಕನಸಿನ ಯೋಜನೆಗಳು. ಬಿಜೆಪಿ ಯಾವುದೇ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಟೀಕಿಸಿದರು.
ಪಕ್ಷ ಸಂಘಟನೆ ಮಾಡಲು ಸಮಾವೇಶಗಳನ್ನು ಮಾಡುತ್ತಿದ್ದೇವೆ. ಮಸ್ಕಿಯಲ್ಲಿ ಪಕ್ಷ ಬಲಪಡಿಸುವುದು ನಮ್ಮ ಕರ್ತವ್ಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು
Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ
Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್