ಸಂತ ಹೃದಯಿಗಳೇ ನೈಜ ಜನಪ್ರತಿನಿಧಿ: ಗವಿ ಶ್ರೀ
Team Udayavani, Feb 20, 2018, 2:21 PM IST
ಸಿಂಧನೂರು: ಯಾವ ರಾಜಕಾರಣಿಗಳಲ್ಲಿ ಸಂತನ ಹೃದಯ ಇರುತ್ತದೆ ಅವನೇ ನಿಜವಾದ ಜನಪ್ರತಿನಿಧಿಯಾಗುತ್ತಾನೆ. ಆ ಕೆಲಸವನ್ನು ಶಾಸಕ ಹಂಪನಗೌಡ ಬಾದರ್ಲಿ ಮಾಡಿ ತೋರಿಸಿದ್ದಾರೆ ಎಂದು ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಅಭಿಮಾನಿ ಬಳಗದಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಶಾಸಕ ಹಂಪನಗೌಡ ಬಾದರ್ಲಿಯವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಾಮಾಜಿಕ ಜೀವನ
ಮುಳ್ಳಿನ ಹಾಸಿಗೆ ಇದ್ದಂತೆ. ಜಗತ್ತಿಗೆ ಬೆಳಕು ಚೆಲ್ಲಿದ ಯೇಸು ಕ್ರೀಸ್ತನನ್ನು ಸಮಾಜ ಶಿಲುಬೆಗೇರಿರೆಸಿದೆ. ಸಮಾಜದಲ್ಲಿ
ಸಮಾನತೆ ತರಲು ಹೊರಟ ಬಸವಣ್ಣನನ್ನು ಸಮಾಜದಿಂದ ದೂರ ಮಾಡಿತು ಎಂದರು.
ಬದುಕಿನ ಬೆಲೆ ಗೊತ್ತಿರುವವರು ಉತ್ತಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ನನಗೆ ಕಣ್ಣು ಇಲ್ಲದಿದ್ದರೇನು ಜನರಿಗೆ ಕಣ್ಣು
ಕೊಡುವ ಕೆಲಸವನ್ನು ಮಾಡಬೇಕು ಎಂದು ಪುಟ್ಟರಾಜ ಗವಾಯಿಗಳು ಹೇಳಿದ್ದನ್ನು ಸ್ಮರಿಸಿದ ಪೂಜ್ಯರು, ಕುದುರೆ, ಆನೆ, ಬಂಡೆ, ಬಂಗಾರವಿದ್ದರೇನು? ನಾನು ತಿನ್ನುವುದು ಮುಡಿ ಅಕ್ಕಿ ಮಾತ್ರ, ಜಗತ್ತನ್ನೆ ಬದಲಾವಣೆ ಮಾಡುವಂತ ಸಾಮರ್ಥ್ಯವಿರುವ ಮನುಷ್ಯ ಮನೆಯ ಟಿವಿ ಚಾನೆಲ್ ಬದಲಾವಣೆ ಮಾಡಲಾರದಂತಹ ಹೀನಾಯ ಸ್ಥಿತಿಗೆ ಬಂದು
ನಿಂತಿದ್ದಾನೆ.
ಆರೋಗ್ಯ ಸಚಿವ ರಮೇಶಕುಮಾರ್ ಮಾತನಾಡಿ, ಶಾಸಕ ಹಂಪನಗೌಡ ಬಾದರ್ಲಿ ಸರ್ಕಾರದಿಂದ ನೂರಾರು ಕೋಟಿ
ರೂ. ಅನುದಾನ ತಂದು ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರಾಜಕಾರಣಿಗಳಿಗೆ ಸಂಸಾರವಿದ್ದು, ಸ್ವಾಮಿಗಳಿಗೆ ಸಂಸಾರವಿರುವುದಿಲ್ಲ. ಸುಮಾರು 30 ವರ್ಷಗಳ ರಾಜಕೀಯ ಜೀವನದಲ್ಲಿ ಅವರು ಸಂಸಾರ ಮತ್ತು ಸಾಮಾಜಿಕ ಜೀವನವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
ಚುನಾವಣೆಗಳಲ್ಲಿ ಹಣ ಕೊಟ್ಟು ಗೆಲ್ಲುವ ಹಾಗೂ ಹಣ ಕೊಟ್ಟು ಸನ್ಮಾನ ಮಾಡಿಸಿಕೊಳ್ಳುವ ರಾಜಕಾರಣಿಗಳನ್ನು ನಾನು ನೋಡಿದ್ದೇನೆ. ತಾಲೂಕಿನ ಸಾರ್ವಜನಿಕರು ಸ್ವಇಚ್ಛೆಯಿಂದ ಶಾಸಕರಿಗೆ ಸನ್ಮಾನ ಮಾಡುತ್ತಿರುವುದು ಮಾದರಿಯಾಗಿದೆ. ಉತ್ತಮ ರಾಜಕಾರಣಿಗಳಲ್ಲಿ ಹಂಪನಗೌಡರು ಒಬ್ಬರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕಾರಣಿಗಳ ಬದುಕು ಕೆಸರು ಗದ್ದೆಯಾಗಿದ್ದು ಕಮಲದಂತೆ ಎದ್ದು ಬಂದು ನಿಸ್ವಾರ್ಥದಿಂದ ಸೇವೆ ಮಾಡುವವನೇ ನಿಜವಾದ ಸಮಾಜ ಸೇವಕ, ಜನನಾಯಕ. ಯಾವ ರಾಜಕಾರಣಿ ಕೋಪ ಮಾಡಿಕೊಳ್ಳುತ್ತಾನೆ ಅವನಲ್ಲಿ
ನೈಜತೆ ಇರುವುದೆಂದು ಸಾರ್ವಜನಿಕರು ತಿಳಿದುಕೊಳ್ಳಬೇಕು ಎಂದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ತಂದೆ-ತಾಯಿ, ಸಹೋದರರ, ಸಹಾಯ, ಸಹಕಾರ, ಮೂವತ್ತು ವರ್ಷಗಳಿಂದ ರಾಜಕೀಯದಲ್ಲಿ ಮೇಲೆ ಬರುವಂತೆ ಮಾಡಿದ ಕ್ಷೇತ್ರದ ಜನತೆಯನ್ನು ಎಂದಿಗೂ ಮರೆಯಲಾರೆ ಎಂದರು.
ರಾಯಚೂರು ಸಂಸದ ಬಿ.ವಿ. ನಾಯಕ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಮಾನ್ವಿ ಶಾಸಕ ಹಂಪಯ್ಯ ನಾಯಕ, ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು, ಬಸವರಾಜ ಇಟಗಿ, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ವಸಂತಕುಮಾರ್, ನಿವೃತ್ತ ಪ್ರಾಂಶುಪಾಲ ಶಾಶ್ವತಯ್ಯ ಸ್ವಾಮಿ ಮುಕ್ಕುಂದಿ ಮಠ, ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ್, ಜಿಪಂ ಸದಸ್ಯರಾದ ಬಾಬುಗೌಡ ಬಾದರ್ಲಿ, ಬಸವರಾಜ ಹಿರೇಗೌಡ್ರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ
Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ