ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಗುರುವೈಭವೋತ್ಸವ : ನಟ ದರ್ಶನ್ ಭೇಟಿ
Team Udayavani, Mar 17, 2021, 10:46 PM IST
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯುತ್ತಿರುವ ಶ್ರೀ ಗುರು ವೈಭವೋತ್ಸವ ನಿಮಿತ್ತ ಬುಧವಾರ ಸಂಜೆ ನಟ ದರ್ಶನ್ ಭೇಟಿ ನೀಡಿದರು. ಈ ವೇಳೆ ಶ್ರೀಮಠದಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ದರ್ಶನ್, ರಾಯರ ಅನುಗ್ರಹ ಇದ್ದಾಗ ಮಾತ್ರ ನಾವು ಇಲ್ಲಿಗೆ ಬರಲು ಸಾಧ್ಯ. ಮಠದ ಪೀಠಾಧಿಪತಿಗೂ ನನ್ನನ್ನು ಕರೆಯಿಸಿಕೊಳ್ಳುವಂತೆ ರಾಯರ ಅನುಗ್ರಹವಾಗಿತ್ತು. ಅದೇ ಕಾಲಕ್ಕೆ ನನಗೂ ಇಲ್ಲಿಗೆ ಬರಬೇಕು ಎಂಬ ಮನಸಾಗಿದೆ. ಅದೊಂದು ಪವಾಡದ ರೀತಿಯಲ್ಲೇ ನಡೆದು ಹೋಯಿತು. ಐದಾರು ವರ್ಷಗಳ ಹಿಂದೆ ಮಂತ್ರಾಲಯಕ್ಕೆ ಬಂದಿದ್ದೆ. ಈಗ ರಾಯರು ನನ್ನನ್ನು ಕರೆಯಿಸಿಕೊಂಡಿದ್ದಾರೆ ಎಂದರು.
ಅನುಗ್ರಹ ಸಂದೇಶ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು, ರಾಜ್ಯ ಕಂಡ ಉತ್ತಮ, ಜನಪ್ರಿಯ ನಾಯಕರಲ್ಲಿ ದರ್ಶನ್ ಕೂಡ ಒಬ್ಬರು. ಅವರ ತಂದೆಯವರು ದೊಡ್ಡ ನಟರು, ದೈವಭಕ್ತರು. ದರ್ಶನ್ ಕೂಡ ತಂದೆಯAತೆ ದೊಡ್ಡ ಪ್ರಸಿದ್ಧಿ ಪಡೆದಿದ್ದಾರೆ. ಖ್ಯಾತ ನಟ ಡಾ.ರಾಜ್ಕುಮಾರ್ ಶ್ರೀಮಠಕ್ಕೆ ಬಂದರೆ ನದಿಯಲ್ಲಿ ಸ್ನಾನ ಮಾಡಿ, ಉರುಳು ಸೇವೆ ಮಾಡಿ, ನೆಲದ ಮೇಲೆಯೇ ಮಲಗಿ ಹೋಗುತ್ತಿದ್ದರು. ರಾಯರ ಕುರಿತು ಅನೇಕ ಗೀತೆಗಳನ್ನು ಹಾಡಿ ರಾಯರ ಸೇವೆ ಮಾಡಿದ್ದರು. ಅವರಂತೆ ಕರ್ನಾಟಕದ ಅನೇಕ ಸಿನಿಮಾ ನಟರು ರಾಯರ ಪ್ರೀತಿಗೆ ಪಾತ್ರರಾಗಿದ್ದಾರೆ. ಇಂದು ದರ್ಶನ್ ಅವರನ್ನು ರಾಯರ ಸೂಚನೆಯಂತೆಯೇ ಅನುಗ್ರಹ ಮಾಡಿ ಗೌರವಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ