ರಾಯಚೂರು: ಶಾಟ್ ಸರ್ಕ್ಯೂಟ್ ನಿಂದ ತಂದೆ ಮಗ ಸಾವು
Team Udayavani, Aug 14, 2020, 12:36 PM IST
ರಾಯಚೂರು: ಮನೆ ಪಕ್ಕದಲ್ಲಿದ್ದ ಮರದಿಂದ ವಿದ್ಯುತ್ ಪ್ರವಹಿಸಿ ತಂದೆ ಮಗ ಮೃತಪಟ್ಟ ಘಟನೆ ತಾಲೂಕಿನ ದಿನ್ನಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಮಹೇಶ (47), ನವೀನ್ (16) ಮೃತಪಟ್ಟಿದ್ದಾರೆ.
ಮನೆ ಪಕ್ಕದಲ್ಲಿದ್ದ ಮರಕ್ಕೆ ವಿದ್ಯುತ್ ವೈರ್ ತಾಕಿದೆ. ಇದೇ ಮರಕ್ಕೆ ಬಟ್ಟೆ ನೇತಾಕಲು ವೈರ್ ಕಟ್ಟಲಾಗಿತ್ತು. ಜಿಟಿ ಜಿಟಿ ಮಳೆ ಸುರಿಯುತ್ತಿರುವ ಪರಿಣಾಮ ಮರಕ್ಕೆ ವಿದ್ಯುತ್ ಪ್ರವಹಿಸಿ ತಂತಿಗೂ ಅರ್ಥಿಂಗ್ ಆಗಿದೆ. ಬಟ್ಟೆ ತೆಗೆಯಲು ಹೋದ ತಂದೆ ಶಾಕ್ ನಿಂದ ಮೃತಪಟ್ಟಿದ್ದಾನೆ. ತಂದೆ ಕೆಳಗೆ ಬಿದ್ದಿರುವುದನ್ನು ಗಮನಿಸಿದ ಮಗ ಎಬ್ಬಿಸಲು ಹೋದಾಗ ಮಗನಿಗೂ ಶಾಕ್ ತಗುಲಿದೆ.
ಯರಗೇರಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.