ಮನೆ-ಮನೆಗೂ ನೀರು; ಆರಂಭದಲ್ಲೇ ವಿಘ್ನ!


Team Udayavani, Jun 18, 2021, 8:08 PM IST

sindhanuru news

ಸಿಂಧನೂರು: ಮನೆ-ಮನೆಗೂ ಶುದ್ಧ ಕುಡಿವನೀರು ಕಲ್ಪಿಸುವ ಜಲಜೀವನ್‌ ಮಿಷನ್‌ ಯೋಜನೆಅನುಷ್ಠಾನಗೊಂಡ ನಾಲ್ಕು ತಿಂಗಳಲ್ಲೇ ಪಲ್ಟಿಹೊಡೆದಿದೆ. ಎಲ್ಲೆಂದರಲ್ಲಿ ಪೈಪ್‌ ಹಾಕಿ ಕೈ ಬಿಟ್ಟನಂತರ ತಿರುಗಿ ನೋಡದ ಪರಿಣಾಮ ಕಲುಷಿತನೀರನ್ನೇ ಗ್ರಾಮಸ್ಥರು ಕುಡಿಯುವಂತಾಗಿದೆ.

ತಾಲೂಕಿನ ಹೊಸಳ್ಳಿ ಕ್ಯಾಂಪಿನಲ್ಲಿ ಜಲಜೀವನ್‌ಮಿಷನ್‌ ಯೋಜನೆಯಡಿ ಹಾಕಿರುವ ಪೈಪ್‌ಗಳು ಭೂಮಿ ಸೇರಿ ನಾಲ್ಕು ತಿಂಗಳು ಗತಿಸಿವೆ.ಎಲ್ಲೆಂದರಲ್ಲಿ ಸಿಸಿ ರಸ್ತೆ ಅಗೆದು ತೀವ್ರ ಗತಿಯಲ್ಲಿಪೈಪ್‌ ಹಾಕುವ ಕೆಲಸವನ್ನು ಪೂರ್ಣಗೊಳಿಸಿದಗುತ್ತಿಗೆದಾರರು, ವಾಪಸ್‌ ಕ್ಯಾಂಪಿನತ್ತ ತಿರುಗಿನೋಡಿಲ್ಲ. ಪರಿಣಾಮ ಗ್ರಾಮಸ್ಥರ ಬಹುನಿರೀಕ್ಷೆಯಯೋಜನೆ ಆರಂಭದಲ್ಲೇ ಮುಗ್ಗರಿಸಿ, ಜನರಆಕ್ರೋಶಕ್ಕೆ ಕಾರಣವಾಗಿದೆ.

ಪೈಪ್‌ ಹಾಕಿದವರು ಬರಲೇ ಇಲ್ಲ: ಹೊಸಳ್ಳಿಕ್ಯಾಂಪಿನಲ್ಲಿ ಮತದದಾರರ ಸಂಖ್ಯೆ 1200 ರಷ್ಟಿದೆ.ಇಲ್ಲಿನ ಪ್ರತಿಯೊಂದು ಮನೆಗೂ ಶುದ್ಧ ಕುಡಿವನೀರು ಕಲ್ಪಿಸಲು 42 ಲಕ್ಷ ರೂ. ಮೊತ್ತವನ್ನುನಿಗದಿಪಡಿಸಲಾಗಿದೆ. ನಾಲ್ಕು ತಿಂಗಳ ಹಿಂದೆಮುಖ್ಯರಸ್ತೆ, ಅಡ್ಡರಸ್ತೆಗಳನ್ನು ಅಗೆದು 2, 3ಇಂಚಿನ ಪೈಪ್‌ಗ್ಳನ್ನು ಹಾಕಿ, ಅರ್ಧ ಇಂಚಿನಪೈಪ್‌ಗ್ಳನ್ನು ಮನೆ ಎದುರು ತೇಲಿಸಲಾಗಿದೆ.ಜೆಸಿಬಿ, ರಸ್ತೆ ಅಗೆಯುವ ಡ್ರಿಲಿಂಗ್‌ ಮಿಷನ್‌ ಬಳಸಿ,ಒಂದೆರಡು ದಿನ ಕೆಲಸ ಮಾಡಿದ ನಂತರ ವಾಪಸ್‌ತಿರುಗಿ ನೋಡಿಲ್ಲ.

ಲಕ್ಷಾಂತರ ರೂ. ಖರ್ಚುಮಾಡಿ ನಿರ್ಮಿಸಿದ ಸಿಸಿ ರಸ್ತೆಗಳನ್ನು ಮನಬಂದಂತೆಅಗೆಯಲಾಗಿದ್ದು, ಅವುಗಳ ಮರು ನಿರ್ಮಾಣದಭರವಸೆ ಈಡೇರಿಲ್ಲ.ಕಾಲ್ನಡಿಗೆಯೇ ಗತಿ: ಕ್ಯಾಂಪಿನಲ್ಲಿರುವ ಕೆರೆಯಲ್ಲಿನನೀರು ಹಳದಿ ಬಣ್ಣಕ್ಕೆ ತಿರುಗಿದ್ದು, ಕುಡಿಯುವುದಕ್ಕೆಯೋಗ್ಯವಾಗಿಲ್ಲ. ಪ್ರಯೋಗಾಲಯದ ವರದಿಯೇಇದನ್ನು ಬಹಿರಂಗಪಡಿಸಿದೆ.

ಇದೀಗ ಗ್ರಾಮದಲ್ಲಿ ಕೆರೆಯಿದ್ದರೂ ಆ ನೀರನ್ನು ಜಾನುವಾರು ಹಾಗೂಬಳಕೆಗೆ ಉಪಯೋಗಿಸುತ್ತಿರುವ ಜನ, ಕುಡಿವನೀರಿಗಾಗಿ ಪ್ರತಿನಿತ್ಯ ಅರ್ಧ ಕಿ.ಮೀ. ದೂರದಖಾಸಗಿ ಕೆರೆಯ ದಾರಿ ಹಿಡಿಯುವಂತಾಗಿದೆ.ತಳ್ಳುವ ಬಂಡಿ ಹಿಡಿದು ನಿತ್ಯವೂ ನೀರಿಗಾಗಿ ಇಲ್ಲಿನಜನ ಬೆವರು ಸುರಿಸುವಂತಾಗಿದೆ.ಕೆರೆ ನಿರ್ಮಿಸಿದ ಮೇಲೆ ನೀರು: ಪ್ರತಿ ಮನೆಯಎದುರು ಅರ್ಧ ಇಂಚಿನ ಪೈಪ್‌ಗ್ಳನ್ನು ಹಾಕಲಾಗಿದೆ.ಇದರ ಗಾತ್ರವನ್ನು ಒಂದು ಇಂಚಿಗೆ ಹೆಚ್ಚಿಸಬೇಕುಎಂಬ ಬೇಡಿಕೆ ಗ್ರಾಮಸ್ಥರಿಂದ ಕೇಳಿಬಂದಿದೆ.ಈ ನಡುವೆ ಇಲ್ಲಿನ ಜನರೊಂದಿಗೆ ವಾಗ್ವಾದನಡೆಸಿದ ಜೆಇಯೊಬ್ಬರು, ಯೋಜನೆ ಅರ್ಧಕ್ಕೆನಿಲ್ಲಿಸಲು ಕಾರಣರಾಗಿದ್ದಾರೆ ಎಂದು ಗ್ರಾಮಸ್ಥರೇ ದೂರುತ್ತಾರೆ.

ಜೀವನ್‌ ಮಿಷನ್‌ ಯೋಜನೆಅನುಷ್ಠಾನಗೊಳ್ಳಲು ಮೊದಲು ಹೊಸದಾಗಿಕೆರೆ ನಿರ್ಮಿಸಬೇಕೆಂದು ಹೇಳಲಾಗುತ್ತಿದೆ. ಆಕೆಲಸ ಇನ್ನೂ ಆರಂಭವಾಗಿಲ್ಲ. ಕಾಲಮಿತಿಯಲ್ಲಿನೀರು ಕಲ್ಪಿಸುವ ಭರವಸೆ ಕ್ಯಾಂಪಿನ ನಿವಾಸಿಗಳಲ್ಲಿಉಳಿದಿಲ್ಲ. ಹನಿ ನೀರಿಗೂ ಕ್ಯಾಂಪಿನಲ್ಲಿ ಪರದಾಟನಡೆದಿದ್ದು, ಜಲಜೀವನ್‌ ಮಿಷನ್‌ ಯೋಜನೆನೆರವಿಗೆ ಬರುವುದು ಯಾವಾಗ? ಎಂದು ಕ್ಯಾಂಪಿನನಿವಾಸಿಗಳು ಪ್ರಶ್ನಿಸಲಾರಂಭಿಸಿದ್ದಾರೆ.

ಯಮನಪ್ಪ ಪವಾರ

ಟಾಪ್ ನ್ಯೂಸ್

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ

Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ

Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು

Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು

ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!

ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.