‘ವಿಷ ಕೊಟ್ಟು ಬಿಡಿ, ಸಾಯುತ್ತೇವೆ’ ಸಚಿವ ರಾಮುಲುಗೆ ಮುತ್ತಿಗೆ ಹಾಕಲು ಪೌರಕಾರ್ಮಿಕರು ಯತ್ನ
Team Udayavani, Apr 5, 2020, 11:24 AM IST
ರಾಯಚೂರು: ಕಳೆದ ಎಂಟು ತಿಂಗಳಿಂದ ವೇತನ ನೀಡದ ಕಾರಣ ನಗರಸಭೆ ಪೌರಕಾರ್ಮಿಕರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರಿಗೆ ಘೇರಾವ್ ಹಾಕಲು ಮುಂದಾದ ಘಟನೆ ರವಿವಾರ ನಡೆದಿದೆ.
ಕೋವಿಡ್-19 ಶುರುವಾದ ಬಳಿಕ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ. ಈ ವಿಚಾರ ತಿಳಿದ ಪೌರಕಾರ್ಮಿಕರು ಡಿಸಿ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಚದುರಿಸಲು ಮುಂದಾದಾಗ ಆಕ್ರೋಶ ಹೊರಹಾಕಿದ ಕಾರ್ಮಿಕರು ವಿಷ ಕೊಟ್ಟು ಬಿಡಿ ಕುಡಿದು ಸಾಯುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
280 ಪೌರ ಕಾರ್ಮಿಕರಿದ್ದು, ಕಳೆದ ಎಂಟು ತಿಂಗಳಿಂದ ವೇತನ ಕೊಟ್ಟಿಲ್ಲ. ಮನೆಯಲ್ಲಿ ಬಿಡಿಗಾಸು ಹಣವಿಲ್ಲ. ರೇಶನ್ ಖಾಲಿಯಾಗಿದೆ. ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲ. ಮನೆಯಲ್ಲಿ ಇರುವ ಸಾಮಗ್ರಿ ಅಡ ಇಟ್ಟು ಜೀವನ ನಡೆಸುತ್ತಿದ್ದೇವೆ. ಹೊರಗೆ ಸಾಲ ಕೊಡುತ್ತಿಲ್ಲ. ನಾವು ಜೀವನ ನಡೆಸಬೇಕೆ ಇಲ್ಲವೇ. ಇಲ್ಲವಾದರೆ ವಿಷ ಕೊಡಿ ಎಂದರು ಆಕ್ರೋಶ ಹೊರಹಾಕಿದರು.
ಕಮಿಶನರ್ ಗೆ ಕೇಳಿದರೆ ಯೋಜನಾ ನಿರ್ದೇಶಕರಿಗೆ ಕೇಳಿ ಅಂತಾರೆ. ಅವರನ್ನು ಕೇಳಿದರೆ ಇವರನ್ನು ಕೇಳಿ ಅಂತಾರೆ. ಎಲ್ಲ ಕಡೆ ರೋಗ ಬಂದು ಜನ ಮನೆಯಲ್ಲಿದ್ದರೆ ನಾವು ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇವೆ. ಕೂಡಲೇ ವೇತನ ಪಾವತಿಸುತ್ತಿದ್ದರೆ ಮುಂದಿನ ಅನಾಹುತಕ್ಕೆ ಅಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
Protest: ಕುಡಿವ ನೀರಿಗಾಗಿ ಪಂಚಾಯಿತಿಗೆ ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರಿಂದ ಪ್ರತಿಭಟನೆ
Raichur; ಮೋದಿ ರೋಡ್ ಶೋಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ: ಎನ್.ಎಸ್.ಭೋಸರಾಜು
ಸಿಂಧನೂರು: ನಗರಸಭೆ ಖಜಾನೆಗೆ ಝಣ ಝಣ ಕಾಂಚಾಣ!
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ