ಕುಟುಂಬ ಪಿಂಚಣಿ ಹೆಚ್ಚಿಸಲು ಆಗ್ರಹಿಸಿ ಹೋರಾಟ-ಮನವಿ
Team Udayavani, Aug 5, 2022, 4:38 PM IST
ರಾಯಚೂರು: ಭಾರತೀಯ ಜೀವ ವಿಮಾ ನಿಗಮ ಮಂಡಳಿಯು ಒಪ್ಪಿರುವಂತೆ ಕುಟುಂಬ ಪಿಂಚಣಿಯನ್ನು ಶೇ.15ರಿಂದ ಶೇ.30ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ವಿಮಾ ಪಿಂಚಣಿದಾರರ ಸಂಘದ ಸದಸ್ಯರು ನಗರದ ಎಲ್ ಐಸಿ ವಿಭಾಗೀಯ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಆರೋಗ್ಯ ವಿಮಾ ಯೋಜನೆ ಸೇರುವುದಕ್ಕೆ ಮತ್ತೂಂದು ಅವಕಾಶ ಕಲ್ಪಿಸಬೇಕು. ವೇತನ ಪರಿಷ್ಕರಿಸುವ ಪ್ರತಿ ಹಂತದಲ್ಲಿ ಪಿಂಚಣಿಯನ್ನೂ ಪರಿಷ್ಕರಿಸಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸಿ 1995ರಲ್ಲಿದ್ದ ಪಿಂಚಣಿ ಯೋಜನೆ ಎಲ್ಲ ನೌಕರರಿಗೂ ಜಾರಿ ಮಾಡಬೇಕು ಹಾಗೂ ರೈಲ್ವೆ ಸೇವೆಯಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಸೇವೆ ಪುನಾರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಕೂಡಲೇ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ನೌಕರರ ಅರ್ಥಪೂರ್ಣ ವೇತನ ಪರಿಷ್ಕರಿಸಬೇಕು. ಕುಟುಂಬ ಪಿಂಚಣಿ ಯೋಜನೆ ಜಾರಿಯು ಎರಡು ವರ್ಷ ವಿಳಂಬವಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರವೀಂದ್ರನಾಥ, ಜಂಟಿ ಕಾರ್ಯದರ್ಶಿ ಟಿ.ಜಿ. ವಿಠಲ್, ವಿಮಾ ನೌಕರರ ಪ್ರಧಾನ ಕಾರ್ಯದರ್ಶಿ ಎಂ.ರವಿ ಮಾತನಾಡಿದರು. ಪಿಂಚಣಿದಾರರಾದ ಗುರುರಾಜಾಚಾರ್ ಜೋಶಿ, ನಾಗೇಂದ್ರಸ್ವಾಮಿ, ತಿಮ್ಮಪ್ಪ ಕಣ್ಣೂರು, ರಾಮು, ಗಾಯತ್ರಿ, ಶಾಂತಕುಮಾರಿ, ಗೋವಿಂದಮ್ಮ, ನಾಗಿರೆಡ್ಡಿ, ಜಂಬಯ್ಯ, ವೆಂಕಟೇಶ, ದುರುಗೇಶ, ವಿಮಾ ನೌಕರರ ಸಂಘದ ಅಧ್ಯಕ್ಷ ಎಂ.ಶರಣಗೌಡ, ಎ. ಶ್ರೀಧರ್, ರಾಘವೇಂದ್ರ, ಕೃಷ್ಣಮೂರ್ತಿ, ಜಿ.ಲತಾ, ರಘೋತ್ತಮರಾವ್, ಲಿಂಗರಾಜ್, ಸಂತೋಷ ಸೇರಿ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
PM Modi:ನನ್ನ 90 ಸೆಕೆಂಡ್ ಭಾಷಣ ಕಾಂಗ್ರೆಸ್, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ
Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು
ಕೇಜ್ರಿವಾಲ್, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್