ಪ್ರಾಣದ ಜತೆ ಚೆಲ್ಲಾಟ…ತುಂಬಿ ಹರಿಯೋ ಕೃಷ್ಣಾ ನದಿಯಲ್ಲಿ ಈಜು ಸ್ಪರ್ಧೆ!
ಜಯ ಸಾಧಿಸಿದವರಿಗೆ ಕೇವಲ 5ರಿಂದ ಹತ್ತು ಸಾವಿರ ರೂ. ನಗದು
Team Udayavani, Aug 6, 2019, 1:23 PM IST
ರಾಯಚೂರು: ತಾಲೂಕಿನ ಲಿಂಗಸೂಗೂರಿನಲ್ಲಿ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಜೀವದ ಹಂಗು ತೊರೆದು ಈಜು ಸ್ಪರ್ಧೆಯಲ್ಲಿ ಭಾಗವಹಿಸಿರುವ ಘಟನೆ ಮಂಗಳವಾರ ನಡೆದಿದ್ದು, ಸ್ಪರ್ಧೆಯಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕೃಷ್ಣ ನದಿ ಬಲ ಮತ್ತು ಎಡದಂಡೆಯ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಲಿಂಗಸೂಗೂರು ತಾಲೂಕಿನ ಗದ್ದಗಿ ಗ್ರಾಮದ ಗಂಗಮ್ಮನ ಕಟ್ಟಿಯಿಂದ ಸಾಯಿ ಬಾಬಾ ಮಂದಿರದವರೆಗೆ ಈಜು ಸ್ಪರ್ಧೆ ಆಯೋಜಿಸಲಾಗಿದೆ.
8-10 ಯುವಕರು ಏಕಕಾಲದಲ್ಲಿ ಈಜು ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ಸ್ಪರ್ಧೆಯಲ್ಲಿ ಜಯ ಸಾಧಿಸಿದವರಿಗೆ ಕೇವಲ 5ರಿಂದ ಹತ್ತು ಸಾವಿರ ರೂ. ನಗದು ಹಾಗೂ ಕುರಿಮರಿ ಕೊಡುವುದಾಗಿ ಘೋಷಿಸಲಾಗಿದೆಯಂತೆ!
ಸ್ಪರ್ಧೆಯಲ್ಲಿ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕೃಷ್ಣ ನದಿ ಬಲ ಮತ್ತು ಎಡದಂಡೆಯ ಗ್ರಾಮಸ್ಥರು ಭಾಗಿ. ತುಂಬಿ ಹರಿಯುವ ನದಿಯಲ್ಲಿ ಮೂರು ಕಿಲೋ ಮೀಟರ್ ಈಜು ಸ್ಪರ್ಧೆ ನಡೆಯುತ್ತಿದೆ. ಪ್ರವಾಹದ ನಡುವೆ ಈಜಿ ಗುರಿ ತಲುಪಲು ಸ್ಪರ್ಧಿಗಳು ಹರಸಾಹಸ ಪಡುತ್ತಿದ್ದು, ಈಜಾಟ ನೋಡಲು ತಿಂಥಣಿ ಸೇತುವೆ ಮೇಲೆ ಜನಸಾಗರ ನೆರೆದಿದೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ