ಅಮೆರಿಕ; ಜಲಪಾತಕ್ಕೆ ಬಿದ್ದ ಸ್ನೇಹಿತನನ್ನು ರಕ್ಷಿಸಲು ಹೋದ ಕರ್ನಾಟಕದ ಯುವಕನ ಸಾವು
Team Udayavani, Sep 5, 2019, 12:55 PM IST
ವಾಷಿಂಗ್ಟನ್: ಜಲಪಾತಕ್ಕೆ ಜಾರಿ ಬಿದ್ದ ಸ್ನೇಹಿತನನ್ನು ರಕ್ಷಿಸಲು ಹೋದ ರಾಯಚೂರು ಮೂಲದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಅಮೆರಿಕದ ಟರ್ನರ್ ಜಲಪಾತದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ನಿವಾಸಿ ಅಜಯ್ ಕುಮಾರ್ (24ವರ್ಷ) ಸ್ನೇಹಿತನನ್ನು ರಕ್ಷಿಸಲು ಹೋಗಿ ಪ್ರಾಣಕಳೆದುಕೊಂಡಿರುವುದಾಗಿ ಮೂಲಗಳು ಹೇಳಿವೆ.
ಅಜಯ್ ಅಮೆರಿಕದ ಹೂಸ್ಟನ್ ನಲ್ಲಿ ಎಂಎಸ್ ಇಂಜಿನಿಯರಿಂಗ್ ಕಲಿಯುತ್ತಿದ್ದರು. ಬುಧವಾರ ಸ್ನೇಹಿತರ ಜತೆ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆತ ಆಯತಪ್ಪಿ ಬಿದ್ದಿದ್ದು, ಕೂಡಲೇ ಅಜಯ್ ಸ್ನೇಹಿತನನ್ನು ರಕ್ಷಿಸಲು ಜಲಪಾತಕ್ಕೆ ಧುಮುಕಿದ್ದ. ಆದರೆ ನೀರಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.