ಶಾಂತಿ ಮಾರ್ಗದಲ್ಲಿ ನಡೆದರೆ ಸುಂದರ ಸಮಾಜ ಸೃಷ್ಟಿ
Team Udayavani, Aug 14, 2017, 3:45 PM IST
ಸಿಂಧನೂರು: ಕೆಲ ಯುವಕರು ದಾರಿ ತಪ್ಪುತ್ತಿದ್ದಾರೆ. ಅಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಇದರಿಂದ ಸ್ವಸ್ಥ ಸಮಾಜ
ನಿರ್ಮಿಸಲು ಸಾಧ್ಯವಿಲ್ಲ. ಯುವಕರು ಸನ್ಮಾರ್ಗದಲ್ಲಿ ಶಾಂತಿ ಮಂತ್ರ ಪಠಿಸುತ್ತಾ ಸಾಗಿದರೆ ಸುಂದರ ಸಮಾಜದ ನಿರ್ಮಾಣ
ಮಾಡಲು ಸಾಧ್ಯ ಎಂದು ಮಾಜಿ ಶಾಸಕ ವೆಂಕಟರಾವ ನಾಡಗೌಡ ಸಲಹೆ ನೀಡಿದರು. ನಗರದ ಸ್ತ್ರೀಶಕ್ತಿ ಭವನದಲ್ಲಿ ಜಮೀಯತಲ್
-ಉಲಮಾ-ಏ-ಹಿಂದ್ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ನಮ್ಮ ನಡಿಗೆ ಶಾಂತಿ ಕಡೆಗೆ ಪಾದಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯಎಂಬುವುದು ಸ್ವೆಚ್ಛಾರವಲ್ಲ. ಭಾರತ ಒಂದು ದೇವರ ನಾಡಾಗಿದೆ. ಇಲ್ಲಿ ಎಲ್ಲ ಧರ್ಮಿಯರು ಶಾಂತಿ, ಸಮಾಧಾನ, ಭಾವೈಕ್ಯ ಮತ್ತು ಪರಸ್ಪರ ಪ್ರೀತಿಯಿಂದ ಬದುಕುತ್ತಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಮಾಡುವ
ತಪ್ಪಿಗಾಗಿ ಇಡೀ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು. ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದರಿಂದ ಜನರಲ್ಲಿ ಪರಸ್ಪರ ಅಪನಂಬಿಕೆ ಹೆಚ್ಚುತ್ತಿದೆ. ಇದನ್ನು ಸರಿದಾರಿಗೆ ತರಬೇಕಾದರೆ ಇಂತಹ ಸಂಘಟನೆಗಳು, ಮೌಲ್ವಿಗಳು, ಶರಣರು, ಸಂತರು, ಸಮಾಜ ಸುಧಾರಕರು ಮುಂದುವರಿಯಬೇಕು. ಅಂದಾಗ ಮಾತ್ರ ಯುವಕರಲ್ಲಿ
ನೈತಿಕ ಪ್ರಜ್ಞೆ ಮೂಡಲು ಸಾಧ್ಯ ಎಂದು ಹೇಳಿದರು. ಜಿಪಂ ಸದಸ್ಯ ಎನ್. ಶಿವನಗೌಡ ಗೊರೇಬಾಳ ಮಾತನಾಡಿ, ಪ್ರತಿಯೊಬ್ಬರು ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ದುಡ್ಡಿಗಾಗಿ ತಮ್ಮತನ ಮಾರಿಕೊಳ್ಳಬಾರದು. ಸಮಾಜ ಮುಖೀಯಾಗಿ ಪರಿಸ್ಪರ ಪ್ರೀತಿ ಬೆಳೆಸುವ ಗುಣ ಅಳವಡಿಸಿಕೊಳ್ಳಬೇಕು. ಪ್ರೀತಿಯಿಂದ ಜಗತ್ತನ್ನು ಗೆಲ್ಲಲು ಸಾಧ್ಯ. ಶಾಂತಿ ಮತ್ತು ಪ್ರೀತಿ ಒಂದೆಡೆ ಸೇರಿದಾಗ ಎಲ್ಲರ ಬದುಕು ಸುಂದರವಾಗುತ್ತದೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ಮಾತನಾಡಿ, ಜಮೀಯತಲ್-ಉಲಮಾ-ಏ-ಹಿಂದ್ ಸಂಘಟನೆ ರಾಜ್ಯಾದಾಧ್ಯಂತ ಶಾಂತಿ ಸಂದೇಶ ಬೀರುವ ಕೆಲಸಕ್ಕೆ ಮುಂದಾಗಿರುವುದು ಅಭಿನಾಂದನಾರ್ಹ. ಇದಕ್ಕೆ ಎಲ್ಲ
ಸಮಾಜದ ಮುಖಂಡರು ಜಾತಿ-ಭೇದ ಮರೆತು ಕೈ ಜೋಡಿಸಬೇಕು ಎಂದು ಹೇಳಿದರು. ಸಂಘಟನೆ ಮುಖಂಡ ಮೌಲಾನಾ ಮಹ್ಮದ್ ತಾಜುದ್ದೀನ್ ಮಾತನಾಡಿ, ಸುಂದರ ಸಮಾಜದ ನಿರ್ಮಾಣಕ್ಕೆ ಎಲ್ಲ ಜಾತಿ ಮುಖಂಡರು ಕೈಜೋಡಿಸಿ ಶಾಂತಿ ಮಂತ್ರದ ಪಠಣೆ
ರೂವಾರಿಗಳಾಗಬೇಕು. ಇದನ್ನು ಯುವ ಸಮುದಾಯ ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಜಾತಿ ನಿರ್ಮೂಲನಾ ಚಳವಳಿ ರಾಜ್ಯ ಸಂಚಾಲಕ ಎಚ್.ಎನ್. ಬಡಿಗೇರ, ಖಾಜಿಮಲಿಕ್ ವಕೀಲರು, ಕೆ. ಜಿಲಾನಿಪಾಷಾ, ಮೌಲಾನಾ ಮಹಿಬೂಬ್ಸಾಬ
ರಾಯಚೂರು, ಜಮೀಯತಲ್ ಹಿಂದ್ನ ತಾಲೂಕು ಘಟಕದ ಅಧ್ಯಕ್ಷ ಆμàಸ್ ಚಾಂದ್ಸಾಬ್, ಕಾರ್ಯದರ್ಶಿ ಮಹ್ಮದ್ಸಾಬ್ ಮುಸ್ತಫಾ ಜ್ಯುವೆಲರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್