ಎಂಜಿನಿಯರ್ ವಿರುದ್ದ ಕ್ರಮಕ್ಕೆ ಮಹಿಳಾ ಕಾರ್ಮಿಕರ ಆಗ್ರಹ
Team Udayavani, Jan 20, 2022, 6:17 PM IST
ಲಿಂಗಸುಗೂರು: ಮಹಿಳಾ ಕಾರ್ಮಿಕರ ವಿರುದ್ಧ ನಿಂದನೆ ಮಾಡಿದ ಎಂಜಿನಿಯರ್ ಸೈಯದ್ ಶಫಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಮಹಿಳಾ ಕಾರ್ಮಿಕರು ತಾಪಂ ಇಒ ಅವರಿಗೆ ಒತ್ತಾಯಿಸಿದರು.
ಈಚನಾಳ ಗ್ರಾಪಂಗೆ ಬುಧವಾರ ಭೇಟಿ ನೀಡಿದ್ದ ತಾಪಂ ಇಒ ಲಕ್ಷ್ಮೀದೇವಿ ಅವರಿಗೆ ಮನವಿ ಮಾಡಿದ ಮಹಿಳಾ ಕಾರ್ಮಿಕರು, ಕಾರ್ಮಿಕರ ಬಗ್ಗೆ ನಿಂದನೆ ಮಾಡಿದ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜ.24ರಂದು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ವೇಳೆ ಗ್ರಾಮಸ್ಥರಾದ ಕುಪ್ಪಣ್ಣ ಚಿಗರಿ, ಆನಂದ ಕುಂಬಾರ, ಸಣ್ಣಗದ್ದೆಪ್ಪ, ಸಹದೇವಪ್ಪಕರಡಿ,ಮಲ್ಲರೆಡ್ಡಿ,ದೇವಮ್ಮ, ರುದ್ರಮ್ಮ, ಗೌರಮ್ಮ, ಶಶಿಕಲಾ, ಅಕ್ಕಮ್ಮ, ಉಮಾದೇವಿ ಸೇರಿದಂತೆ ಇತರರಿದ್ದರು