ಪೊಲೀಸ್-ಆರೋಗ್ಯ ಸಿಬ್ಬಂದಿಗೆ ಸನ್ಮಾನ
Team Udayavani, Apr 26, 2020, 5:05 PM IST
ಯಡ್ರಾಮಿ: ಪೊಲೀಸ್ ಠಾಣೆಯ ಎಸೈ ಗುರಣ್ಣ ಹಾಗೂ ಆರೋಗ್ಯ ಸಹಾಯಕರಿಗೆ ಮಳ್ಳಿ-ನಾಗರಹಳ್ಳಿ ಯುವಕರು ಸನ್ಮಾನಿಸಿದರು
ಯಡ್ರಾಮಿ: ಕೋವಿಡ್ ಲಾಕ್ಡೌನ್ ಹಿನ್ನೆಲೆಯಲ್ಲಿ ನಾಗರಹಳ್ಳಿಯ ಡಾ| ಅಂಬೇಡ್ಕರ್ ವೃತ್ತದ ಬಳಿ ಇರುವ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮಳ್ಳಿ -ನಾಗರಹಳ್ಳಿ ಯುವಕರು ಸನ್ಮಾನಿಸಿದರು.
ಚೆಕ್ಪೋಸ್ಟ್ನಲ್ಲಿ ನಿರಂತರ ಕರ್ತವ್ಯದಲ್ಲಿ ನಿರತರಾಗಿದ್ದರಿಂದ ಪೊಲೀಸರು, ಆರೋಗ್ಯ ಸಿಬ್ಬಂದಿ ಮನೆ, ಕುಟುಂಬಸ್ಥರ ಮುಖವೇ ನೋಡದಂತಾಗಿದೆ. ಲಾಕ್ಡೌನ್ ಪ್ರಾರಂಭವಾದಾಗಿನಿಂದಲೂ ರಸ್ತೆಯ ಪಕ್ಕದಲ್ಲಿಯೇ ತಮ್ಮ ಹಸಿವು, ನೀರಡಿಕೆ ಇಂಗಿಸಿಕೊಳ್ಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಹಗಲು ರಾತ್ರಿ ಎನ್ನದೆ ಕೊರೊನಾ ಬಂದೋಬಸ್ತ್ಗಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಸ್ವಯಂ ಸೇವಕರಿಗೆ ಗ್ರಾಮದ ಯುವ ಜನತೆ ಉಪಾಹಾರದ ವ್ಯವಸ್ಥೆ ಮಾಡಿ, ಅವರಿಗೆ ಪ್ರೋತ್ಸಾಹಿಸಿದರು.
ಸಿಬ್ಬಂದಿಯ ಪ್ರಾಮಾಣಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಡಾ| ಚನ್ನವೀರಪ್ಪ, ಎಸೈ ಗುರಣ್ಣ, ಪೊಲೀಸ್ ಸಿಬ್ಬಂದಿಗಳಾದ ಶಾಂತೇಶ, ವಿಠ್ಠಲ ಹೂಗಾರ, ಭೀಮಾಶಂಕರ ಅಲ್ಲಾಪುರ, ಸುರೇಶ ಸಾಹು ನಾಗರಾಳ, ಬಸಲಿಂಗ ಸಾಹು ಕುರುಳಗೇರಾ, ಬಸವರಾಜ, ಪ್ರವೀಣ ನಾಗರಹಳ್ಳಿ, ಸಿದ್ಧಯ್ಯ ಚಿಕ್ಕಮಠ, ಹುಸೇನಿ ಬೂದನೂರ, ಕಿರಣ ತಾಳಿಕೋಟಿ, ರುದ್ರಗೌಡ ಬಿರಾದಾರ ಇತರರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ
Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ
Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ