ಪೂರ್ವ ದ್ವೇಷದ ಹಿನ್ನೆಲೆ: ರಾಯಚೂರಿನಲ್ಲಿ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ
Team Udayavani, May 31, 2021, 1:23 PM IST
ರಾಯಚೂರು: ವೈಯಕ್ತಿಕ ವೈಷಮ್ಯದ ಕಾರಣದಿಂದ ತಾಲೂಕಿನ ಮರ್ಚೇಡ್ ಗ್ರಾಮದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಬೇಲ್ದಾರ್ ಕೆಲಸ ಮಾಡಿಕೊಂಡಿದ್ದ 26 ವರ್ಷದ ತಾಯಪ್ಪ (ಶಶಿ) ಎಂಬಾತನೇ ಕೊಲೆಯಾದ ಯುವಕ.
ಗ್ರಾಮದ ದೇವಸ್ಥಾನದ ಎದುರು ಯುವಕನನ್ನು ಮಾರಕಾಸ್ತ್ರಗಳಿಂದ ಕೊಂದು ಕರುಳು ಬಗೆದು ಬಯಲಿಗೆ ಎಸೆಯುವ ಮೂಲಕ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.
ಇದನ್ನೂ ಓದಿ:ನಿತಿನ್ ಗಡ್ಕರಿ ಉತ್ತಮ ವ್ಯಕ್ತಿ, ಅದರೆ ಅವರ ಪಕ್ಷ ಸರಿಯಿಲ್ಲ: ಮಹಾರಾಷ್ಟ್ರ ಸಚಿವ
ಘಟನೆಗೆ ಹಳೇ ವೈಷಮ್ಯ ಕಾರಣ ಎನ್ನಲಾಗುತ್ತಿದೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರಿಮ್ಸ್ ಗೆ ಕಳುಹಿಸಿದ್ದು ತನಿಖೆ ಮುಂದುವರಿಸಲಾಗಿದೆ.