ಓದುಗರನ್ನು ಯೋಚನೆಗೆ ಹಚ್ಚುವ ಸಾಹಿತ್ಯ ರಚನೆ ಆಗಲಿ

ಕೆ. ಗಿರಿಜಾ ಅವರ 'ತತ್ರಾಣಿ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ ಅಭಿಮತ

Team Udayavani, Aug 26, 2019, 4:08 PM IST

26-Agust-34

ರಾಯಚೂರು: ನಗರದ ಕನ್ನಡ ಭವನದಲ್ಲಿ ಕೆ.ಗಿರಿಜಾ ರಾಜಶೇಖರ ಅವರ ತತ್ರಾಣಿ ಕೃತಿ ಲೋಕಾರ್ಪಣೆ ಮಾಡಲಾಯಿತು.

ರಾಯಚೂರು: ಬರಹದಲ್ಲಿನ ಸೂಕ್ಷ್ಮತೆ ಓದುಗರನ್ನು ಸೆಳೆಯಬೇಕು. ಯೋಚನೆಗೆ ಹಚ್ಚುವ ಸಾಹಿತ್ಯ ರಚಿಸುವತ್ತ ಯುವ ಬರಹರಾರರು ಮುಂದಾಗಬೇಕು ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕ ಡಾ| ವಿಕ್ರಮ ವಿಸಾಜಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ನಗರದ ಕನ್ನಡ ಭವನದಲ್ಲಿ ನಡೆದ ಕೆ.ಗಿರಿಜಾ ರಾಜಶೇಖರ ಅವರ ತತ್ರಾಣಿ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಬರಹ ಓದಿದಾಗ ಅದು ಅಧಿಕೃತ, ಪ್ರಾಮಾಣಿಕತೆಯಿಂದ ಕೂಡಿದೆ ಎನಿಸಬೇಕು. ಅಂಥ ಕೃತಿಗಳಿಗೆ ಮಾತ್ರ ಮಹತ್ವ ಜಾಸ್ತಿ. ಜಾತಿ, ಧರ್ಮ, ಗುಂಪು, ಪ್ರದೇಶ ಮೀರಿ ಯೋಚಿಸುವ ಬರಹಗಾರನಿಂದ ಮಾತ್ರ ಉತ್ತಮ ಕೃತಿಗಳ ನಿರೀಕ್ಷೆ ಸಾಧ್ಯ ಎಂದರು.

ಯುವ ಬರಹಗಾರರು ತಮಗರಿವಿಲ್ಲದೆಯೇ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಅದರಿಂದ ಮುಕ್ತಗೊಳ್ಳುವ ದಾರಿ ಕಂಡುಕೊಳ್ಳದ ವಿನಃ ಬರವಣಿಗೆ ಅಸಾಧ್ಯ. ಒಳನೋಟಗಳನ್ನು ನೀಡುವ ಸಾಹಿತಿ ಪರಿಪೂರ್ಣ ಬರಹಗಾರನಾಗಬಲ್ಲ. ಸಾಮಾಜಿಕ, ರಾಜಕೀಯ ಧಾರ್ಮಿಕದಂಥ ಸೂಕ್ಷ ್ಮ ತೆಗಳು ಬರಹದಲ್ಲಿ ದಾಖಲಾಗುತ್ತವೆ. ಲೇಖಕರಿಗೆ ಒಳ್ಳೆಯ ಕಾಲದ ಕಲ್ಪನೆ ಇರಬೇಕು. ಕೃತಿಗಳಲ್ಲಿ ಅದು ಕಂಡು ಬರಬೇಕು. ಭಯದಿಂದ ಕೂಡಿದ ಬರವಣಿಗೆಯಿಂದ ಸಮಾಜಕ್ಕೆ ಸಂದೇಶ ನೀಡಲು ಸಾಧ್ಯವಿಲ್ಲ. ದಿಟ್ಟತನ ತೋರಿ ಬರೆದಿದ್ದಕ್ಕೆ ಇಂದಿಗೂ ನಾವು ವಚನಗಳನ್ನು ಅಧ್ಯಯನ ಮಾಡುತ್ತೇವೆ ಎಂದರು.

ನೆಲದ ವಾಸ್ತವಗಳಿಗೆ, ಬಿಕ್ಕಟ್ಟುಗಳಿಗೆ ಸ್ಪಂದಿಸಿ ಬರೆಯುವ ಕೃತಿಗಳು ಸಾಹಿತ್ಯ ವಲಯದಲ್ಲಿ ದಾಖಲಾಗಲೇಬೇಕು. ಗ್ರಾಮೀಣ ಬದುಕಿನ ಮುಖಗಳ ಅನಾವರಣ, ಜಾಗತೀಕರಣ ಹೇಗೆ ವಿರೋಧಿಸಬೇಕು ಎಂಬುದನ್ನು ಬರಹಗಾರ ದಾಖಲಿಸಬೇಕು. ಎಡಪಂಥೀಯ ಹೋರಾಟಕ್ಕೆ ನೆಲೆ ನೀಡಿದ ಜಿಲ್ಲೆ ರಾಯಚೂರು. ಶೋಷಿತರ ಪರ ಧ್ವನಿಯಾಗಿ ಅನೇಕ ಕೃತಿಗಳು ಹೊರಬಂದಿದ್ದು, ತತ್ರಾಣಿ ಕೃತಿಯೂ ಜಾತಿ, ಧರ್ಮ, ಮೌಡ್ಯತೆಯ ವಿರುದ್ಧ ಮಾನವೀಯ ಗುಣಗಳನ್ನು ಪ್ರಸ್ತುತ ಪಡಿಸಿದೆ ಎಂದರು.

ಸಾಹಿತಿ ಪವನಕುಮಾರ್‌ ಗುಂಡೂರಾವ್‌ ಕೃತಿ ಪರಿಚಯಿಸಿದರು. ಕಸಾಪ ಜಿಲ್ಲಾಧ್ಯಕ್ಷ ಬಸವಪ್ರಭು ಪಾಟೀಲ ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಕೆ.ಗಿರಿಜಾ ರಾಜಶೇಖರ, ಸಾಹಿತಿ ದಸ್ತಗೀರಸಾಬ್‌ ದಿನ್ನಿ, ಭೀಮಣ್ಣ ಇಟಗಿ, ಉರುಕುಂದಪ್ಪ ನಾಯಕ ಇತರರಿದ್ದರು. ಕಸಾಪ ಗೌರವ ಕಾರ್ಯದರ್ಶಿ ಜೆ.ಎಲ್. ಈರಣ್ಣ ಸ್ವಾಗತಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.