ಮರಳಿ ಮನೆಯತ್ತ ಸಂತ್ರಸ್ತರ ಹೆಜ್ಜೆ
ಮರಂ ಹಾಕಿ ಹಾಳಾದ ರಸ್ತೆಗಳ ದುರಸ್ತಿ•ವಿತರಿಸಲು ಆಹಾರ ಕಿಟ್ ಸಿದ್ಧ; ಜಿಲ್ಲಾಧಿಕಾರಿ
Team Udayavani, Aug 16, 2019, 1:05 PM IST
ಲಿಂಗಸೂಗೂರು: ಜಲದುರ್ಗ ಸೇತುವೆ ಬಳಿ ಮರಂ ಹಾಕಿ ಸಮತಟ್ಟು ಮಾಡುತ್ತಿರುವುದು.
ರಾಯಚೂರು: ಕೃಷ್ಣಾ ನದಿ ಪ್ರವಾಹ ದಿನೇದಿನೆ ಕ್ಷೀಣಿಸುತ್ತಿದ್ದು, ಗುರುವಾರ ಕೂಡ ನಾರಾಯಣಪುರ ಜಲಾಶಯದಿಂದ ನದಿಗೆ 5.50 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರೂ ನದಿ ಪ್ರವಾಹ ಮಾತ್ರ ಇಳಿಮುಖವಾಗಿದೆ.
ಗುರುವಾರ ಬೆಳಗ್ಗೆ 5.80 ಲಕ್ಷ ಕ್ಯೂಸೆಕ್ ಹರಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಆ ಪ್ರಮಾಣ 5.50 ಲಕ್ಷ ಕ್ಯೂಸೆಕ್ಗೆ ಬಂದಿತ್ತು. ಕೆಲ ಹಳ್ಳಿಗಳು ಪ್ರವಾಹಮುಕ್ತವಾಗಿದ್ದು, ಗ್ರಾಮಸ್ಥರು ತಮ್ಮ ಹಳ್ಳಿಗಳತ್ತ ಮುಖ ಮಾಡಿದ್ದರಿಂದ ಜಿಲ್ಲಾಡಳಿತ 9 ಪರಿಹಾರ ಕೇಂದ್ರಗಳನ್ನು ಸ್ಥಗಿತಗೊಳಿಸಿದೆ. ಅಂಚೆಸೂಗುರು, ವಡಗಂಬಳಿ, ಗೋಪಾಲಪುರ, ನಿಲುವಂಜಿ, ವೀರಗೋಟ, ಪರ್ತಪುರ, ಹೇರುಂಡಿ, ಮುದ್ಗೋಟ್, ಮದರಕಲ್ ಪರಿಹಾರ ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಉಳಿದ ಕೇಂದ್ರಗಳನ್ನು ಮುಂದುವರಿಸಲಾಗಿದೆ.
ಇನ್ನು ಆಲಮಟ್ಟಿಗೆ ಒಳಹರಿವು ಕೇವಲ 3 ಲಕ್ಷ ಕ್ಯೂಸೆಕ್ ಆಗಿದ್ದು, ಶುಕ್ರವಾರ ಇಲ್ಲವೇ ಶನಿವಾರದ ಒಳಗೆ ನದಿ ಪ್ರವಾಹ ಗಣನೀಯವಾಗಿ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹ ಬಳಿಕ ಜಿಲ್ಲಾಡಳಿತ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಹಾಳಾದ ರಸ್ತೆಗಳನ್ನು ತಾತ್ಕಾಲಿಕ ದುರಸ್ತಿ ಮಾಡುತ್ತಿದೆ. ಜಲದುರ್ಗ ಸೇತುವೆ ಬಳಿ ಪ್ರವಾಹದಿಂದ ಕೊಚ್ಚಿ ಹೋದ ರಸ್ತೆಯಲ್ಲಿ ಮರಂ ಹಾಕಿಸಿ ಸಮತಟ್ಟು ಮಾಡುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಹಾನಿ ಬಗ್ಗೆ ಸಮೀಕ್ಷೆ ಆರಂಭಿಸಿದ್ದು, ಎಲ್ಲೆಲ್ಲಿ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ನಾಲ್ಕು ಸಾವಿರ ಆಹಾರ ಕಿಟ್ಗಳನ್ನು ತಯಾರಿಸುತ್ತಿದ್ದು, ನಿರಾಶ್ರಿತರಿಗೆ ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ