ಸಂಸ್ಥಾನ ದೊರೆಗೆ ಒಲಿದ ಸಂಸದ ಸ್ಥಾನ
Team Udayavani, May 24, 2019, 2:58 PM IST
ರಾಯಚೂರು: ಗುರುಗುಂಟಾ ಸಂಸ್ಥಾನದ ದೊರೆ ರಾಜಾ ಅಮರೇಶ್ವರ ನಾಯಕರಿಗೆ ಸಂಸತ್ ಪ್ರವೇಶ ಭಾಗ್ಯ ಕಲ್ಪಿಸುವ ಮೂಲಕ ಕ್ಷೇತ್ರದ ಮತದಾರರು ಜೋರಾಗಿಯೇ ಈ ಬಾರಿ ಆಶೀರ್ವದಿಸಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ನಾಯಕರ ಕದನ ಏರ್ಪಟ್ಟಿತ್ತು. ಹಾಲಿ ಸಂಸದ ಬಿ.ವಿ.ನಾಯಕರಂತೆ ರಾಜಾ ಅಮರೇಶ್ವರ ನಾಯಕರು ಕೂಡ ಸಭ್ಯತೆಗೆ ಹೆಸರಾದ ವ್ಯಕ್ತಿ. ಅದರ ಜತೆಗೆ ಆಗೊಮ್ಮೆ ಈಗೊಮ್ಮೆ ಮುನ್ನೆಲೆಗೆ ಬಂದು ಅಧಿಕಾರ ಅನುಭವಿಸಿದ ಅವರನ್ನು ಜಿಲ್ಲೆಯ ಜನ ಸ್ವೀಕರಿಸಿದ್ದೂ ಉಂಟು ತಿರಸ್ಕರಿಸಿದ್ದೂ ಉಂಟು.
ಸಂಸ್ಥಾನದ ದೊರೆಗಳಾದ ಅವರಿಗೆ ಆಡಳಿತಾತ್ಮಕ ಚಿಂತನೆಗಳ ಜತೆಗೆ ರಾಜಕೀಯ ಪಟ್ಟುಗಳನ್ನು ಅರಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಹೀಗಾಗಿ 1989ರಲ್ಲಿಯೇ ಅವರು ಲಿಂಗಸುಗೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಬಳಿಕ 1999ರಲ್ಲಿ ಕಲ್ಮಲ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಅಚ್ಚರಿ ವಿಷಯವೆಂದರೆ ಎರಡು ಬಾರಿಯೂ ಸಚಿವ ಸ್ಥಾನ ಲಭಿಸಿತ್ತು. ಆಗ ಅವರು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮನೆ ಮಾತಾಗಿದ್ದರು. ಅದರಲ್ಲಿ ರಾಂಪುರ ಏತ ನೀರಾವರಿ ಯೋಜನೆಯ ಫಲವನ್ನು ಜನ ಇಂದು ಅನುಭವಿಸುತ್ತಿದ್ದಾರೆ.
ಕಾಂಗ್ರೆಸ್, ಜೆಡಿಎಸ್ನಲ್ಲಿ ಓಡಾಡಿಕೊಂಡಿದ್ದ ಅವರು ಜೆಡಿಎಸ್ನಿಂದ 2004ರಲ್ಲಿ ಸ್ಪರ್ಧಿಸಿ ಸೋತಿದ್ದರು. 2013ರಲ್ಲೂ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ, ಕಳೆದ 2018ರಲ್ಲಿ ವಿಧಾನಸಭೆ ಚುನಾವಣೆಯಿಂದ ದೂರ ಉಳಿದಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ರಾಯಚೂರು ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿ ಇಲ್ಲದಿರುವುದು ರಾಜಾ ಅಮರೇಶ್ವರ ನಾಯಕರ ರಾಜಕೀಯ ಬದುಕಿನ ಮತ್ತೂಂದು ಪರ್ವಕ್ಕೆ ನಾಂದಿ ಹಾಡಿದಂತಾಗಿದೆ. ಹಲವು ಹೊಸ ಚಿಂತನೆಗಳೊಂದಿಗೆ ಜನರ ಮುಂದೆ ಬಂದಿರುವ ಅವರ ಮೇಲೆಯೂ ಕ್ಷೇತ್ರದ ಜನ ಅಪಾರ ವಿಶ್ವಾಸ ಹೊಂದಿದ್ದಾರೆ. ಆದರೆ, ತಮಗೆ ಸಿಕ್ಕಿರುವ ಈ ಅಧಿಕಾರವನ್ನು ಹೇಗೆ ಬಳಸಿಕೊಳ್ಳುವರು ಎಂದು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ