ಪ್ರಚಾರಕ್ಕೆ ರಮೇಶ ಜಾರಕಿಹೊಳಿ ದಿಢೀರ್ ಎಂಟ್ರಿ
Team Udayavani, Sep 1, 2021, 7:45 PM IST
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣಾ ಅಬ್ಬರ ಶುರುವಾಗಿ ವಾರ ಕಳೆದರೂ ಇತ್ತ ಸುಳಿಯದಿದ್ದ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಬಹಿರಂಗ ಪ್ರಚಾರದ ಕೊನೆಯ ದಿನವಾದ ಮಂಗಳವಾರ ದಿಢೀರ್ ನಗರಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರಕ್ಕೆ ಬಾರದೇ ಚರ್ಚೆಗೆ ಕಾರಣವಾಗಿದ್ದ ರಮೇಶ ಜಾರಕಿಹೊಳಿ ಅವರು ಮಂಗಳವಾರ ವಾರ್ಡ್ ನಂಬರ್ 34ರ ಶ್ರೇಯಸ್ ನಾಕಾಡಿ ಪರ ಪ್ರಚಾರ ನಡೆಸಿದರು. ವಾರ್ಡಿನ ಪ್ರಮುಖ ಬೀದಿಗಳಲ್ಲಿ ತಿರುಗಾಡಿ ಬಿಜೆಪಿ ಭಿತ್ತಿ ಪತ್ರಗಳನ್ನು ನೀಡಿ ಬಿಜೆಪಿ ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ರಮೇಶ ಜಾರಕಿಹೊಳಿ ಅವರು ಪಾಲಿಕೆ ಚುನಾವಣೆಯ ಪ್ರಚಾರ ರ್ಯಾಲಿಯಲ್ಲಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಬಹುತೇಕ ಯಾವುದೇ ವಾರ್ಡಿನಲ್ಲಿಯ ಅಭ್ಯರ್ಥಿಗಳು ರಮೇಶ ಅವರ ಭಾವಚಿತ್ರವನ್ನೂ ಮುದ್ರಿಸಿಲ್ಲ. ಭಿತ್ತಿಪತ್ರ, ಬ್ಯಾನರ್, ಫ್ಲೆಕ್ಸ್ಗಳಲ್ಲಿ ರಮೇಶ ಜಾರಕಿಹೊಳಿ ಅವರ ಭಾವಚಿತ್ರ ಕಾಣಸಿಗುತ್ತಿಲ್ಲ. ಕೊನೆಯ ದಿನದಂದು ರಮೇಶ ಎಂಟ್ರಿಕೊಟ್ಟಿದ್ದು ಕುತೂಹಲ ಮೂಡಿಸಿದೆ.ಕೇವಲ ಒಬ್ಬ ಅಭ್ಯರ್ಥಿ ಪರವಾಗಿ ಮಾತ್ರ ಮತಯಾಚಿಸಿ ಗೋಕಾಕಕ್ಕೆ ವಾಪಸ್ಸಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ