ಮಹಿಳಾ ಒಕ್ಕೂಟದಿಂದ 25 ಸಾವಿರ ದೇಣಿಗೆ
Team Udayavani, May 11, 2020, 6:47 PM IST
ಸಾಂದರ್ಭಿಕ ಚಿತ್ರ
ಕನಕಪುರ: ಕೋವಿಡ್ ಸೋಂಕು ಪರಿಹಾರ ನಿಧಿಗೆ ತಾಲೂಕಿನ ಕನಕಾಂಬರಿ ಮಹಿಳಾ ಒಕ್ಕೂಟ 25 ಸಾವಿರ ರೂ. ಕೊಡುಗೆ ನೀಡಿದೆ. ಒಕ್ಕೂಟದ ಗೌರವ ಅಧ್ಯಕ್ಷ ಕೆಪಿಸಿಸಿ ಕಾರ್ಯದರ್ಶಿ ಎಚ್. ಕೆ.ಶ್ರೀಕಂಠ ಚೆಕ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು. ಅದರೊಟ್ಟಿಗೆ 10 ಸಾವಿರ ಮಾಸ್ಕ್ ಕೊಡುಗೆ ನೀಡಿದರು.
ಸುದ್ದಿಗಾರರೊಂದಿಗೆ ಎಚ್.ಕೆ. ಶ್ರೀಕಂಠು ಮಾತನಾಡಿ, ಮಹಿಳಾ ಒಕ್ಕೂ ಟದ ಕಾರ್ಯಕರ್ತರು ಮಾಸ್ಕ್ ತಯಾರಿಸುತ್ತಿದ್ಧಾರೆ. ಸಂಸ್ಥೆಯಲ್ಲಿಯೇ ಹೊಲಿಗೆ ತರಬೇತಿ ಪಡೆದಿದ್ದ ಸುಮಾರು 200 ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಮನೆಗಳಲ್ಲೇ ಮಾಸ್ಕ್ಗಳನ್ನು ಹೊಲಿಯುತ್ತಿದ್ದು, ಈವರೆಗೂ ಒಂದೂ ವರೆ ಲಕ್ಷ ಮಾಸ್ಕ್ ತಯಾರು ಮಾಡಿ ಕೊಟ್ಟಿದ್ದಾರೆ. ಕೋವಿಡ್ ಸೋಂಕು ಸಂದರ್ಭದಲ್ಲಿ ಗುಡಿ ಕೈಗಾರಿಕೆ ಪೋ›ತ್ಸಾಹಿಸುತ್ತಿರುವುದಾಗಿ ಅವರು ತಿಳಿಸಿದರು.
ಕೊರೊನಾ ಸೋಂಕು ತಡೆಗಟ್ಟಲು ಆರೋಗ್ಯ ನಾನಿಯಾಗಿ ಕೆಲಸ ಮಾಡುವವರು, ಪಂಚಾಯ್ತಿ ಸಿಬ್ಬಂದಿ, ಟಿಎಪಿಸಿ ಎಂಎಸ್ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಮದುವೆ ಮಾಡುವವರು ಮುಂತಾದವರಿಗೆ ಇಲ್ಲಿವರೆಗೆ 50 ಸಾವಿರ ಮಾಸ್ಕ್ ಉಚಿತವಾಗಿ ವಿತರಿಸಲಾಗಿದೆ. 1 ಲಕ್ಷ ಮಾಸ್ಕ್ ರಿಯಾಯಿತಿ ದರದಲ್ಲಿ ಮಾರಾಟ ಮಾಡಿ, ಅದರಿಂದ ಬಂದ ಹಣ ಮಾಸ್ಕ್ ತಯಾರು ಮಾಡಲು ಶ್ರಮಿಸಿದ ಸ್ವಯಂ ಉದ್ಯೋಗಿನಿಯರಿಗೆ ಕೊಟ್ಟಿರುವುದಾಗಿ ತಿಳಿಸಿದರು.
ಮಾಸ್ಕ್ ಅವಶ್ಯಕತೆ ಇದ್ದವರು ತಮಗೆ ಆರ್ಡ್ರ್ ಕೊಟ್ಟರು ಶೀಘ್ರದಲ್ಲಿ ಮಾಸ್ಕ್ ಹೊಲಿದು ರಿಯಾಯಿತಿ ದರದಲ್ಲಿ ಕೊಡುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್ವೈ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ