950 ಮರಗಳನ್ನು ಪೋಷಿಸಿದ ಸಾಲು ಮರದ ನಿಂಗಣ್ಣ!


Team Udayavani, Jun 5, 2019, 3:00 AM IST

950

ರಾಮನಗರ: ಈ ರೈತನಿಗೆ ಪರಿಸರ ಪಾಠವನ್ನು ಯಾರು ಹೇಳಿಕೊಡಲಿಲ್ಲ. ಪರಿಸರ ಸಂರಕ್ಷಿಸಿ ಎಂದು ಯಾರು ಬೇಡಿಕೆ ಇಡಲಿಲ್ಲ. ಜೀವ ಸಂಕುಲದ ಉಸಿರೇ ಹಸಿರು ಎಂದಷ್ಟೇ ಗೊತ್ತು! ಇಷ್ಟು ತಿಳುವಳಿಕೆಯಿಂದಾಗಿಯೇ ಇಂದು 950 ಮರಗಳ ನಳನಳಿಸುತ್ತಿವೆ!

ವಿಶ್ವ ಖ್ಯಾತಿಯ ಸಾಲು ಮರದ ತಿಮ್ಮಕ್ಕನ ಮಾದರಿಯಲ್ಲೇ ರಾಮನಗರ ತಾಲೂಕಿನ ಅರೇಹಳ್ಳಿಯ ನಿವಾಸಿ ನಿಂಗಣ್ಣ ಕೂಟಗಲ್‌ ಹೋಬಳಿ ಬಿಳಗುಂಬ -ಅರೇಹಳ್ಳಿ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 950 ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ. ಸಾಲು ಮರದ ನಿಂಗಣ್ಣ ಎಂಬ ಖ್ಯಾತಿಗಳಿಸಿದ್ದಾರೆ. ಈ ಸಸಿಗಳಿಂದು ಹೆಮ್ಮರಗಳಾಗಿ ಬೆಳೆದಿವೆ. ಕುಟುಂಬದ ಸಹಕಾರದಲ್ಲಿ 20 ವರ್ಷಗಳ ನಿಂಗಣ್ಣರ ಕಾಯಕದಿಂದಾಗಿ ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು, ಸ್ಥಳೀಯರಿಗೆ ತಂಪರೆದು ಸ್ವಾಗತಿಸುತ್ತಿವೆ.

ಜೀವನಕ್ಕೆ ಕೃಷಿ ಕೂಲಿ: ಜೀವನ ಪೋಷಣೆಗೆ ಕೃಷಿ ಕೂಲಿಯನ್ನು ಅವಲಂಭಿಸಿರುವ ನಿಂಗಣ್ಣ ಇಂದಿಗೂ ಕೆಲವೊಂದು ಲೇಔಟ್‌ಗಳಲ್ಲಿ ಸಸಿ ನೆಟ್ಟು ಪೋಷಿಸುವ ಸೇವೆ ಮುಂದುವರಿಸಿದ್ದಾರೆ. ಪರಿಸರವಿಂದು ಮಾಲಿನ್ಯಗೊಂಡು ಜೀವ ಸಂಕುಲಕ್ಕೆ ಅಪಾಯ ಎದುರಾಗಿರುವ ಈ ಸಂದರ್ಭದಲ್ಲಿ ತಿಮ್ಮಕ್ಕ ಮತ್ತು ನಿಂಗಣ್ಣರಂತಹ ನಿಸ್ವಾರ್ಥ ಸೇವೆ ಇತರರಿಗೆ ಮಾದರಿಯಾಗಿದೆ. ನಿಂಗಣ್ಣರ ಸೇವೆಯನ್ನು ಜನಸಾಮಾನ್ಯರು ಮನದಾಳದಿಂದ ಶ್ಲಾ ಸುತ್ತಿದ್ದಾರೆ. ಹತ್ತು, ಹಲವು ಸಂಘ-ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದೆ. ಆದರೆ, ಸರ್ಕಾರ ಮಾತ್ರ ಇವರ ಮನವಿಗಳಿಗೆ ಕಿಮ್ಮತ್ತು ನೀಡುತ್ತಿಲ್ಲ ಎಂಬುದೇ ವಿಪರ್ಯಾಸ!

ಮನವಿಗೆ ಸ್ಪಂದಿಸದ ಆಡಳಿತ: ಪರಿಚಯಸ್ಥರೊಬ್ಬರು ತಮ್ಮ ಜಮೀನಿನನಲ್ಲಿ ಶುಂಠಿ ಬೆಳೆದು ಕೊಟ್ಟರೆ ಪಾಲು ಕೊಡುವುದಾಗಿ ಹೇಳಿದ್ದರಂತೆ, ಶುಂಠಿ ಬೆಳೆದು ಕೊಟ್ಟ ನಂತರ ಕೊಟ್ಟ ಮಾತು ಈಡೇರಿಸದೇ ನಿಂಗಣ್ಣರ ಪರಿಶ್ರಮವನ್ನು ಕಡೆಗಣಿಸಿದ್ದು, ನಿಂಗಣ್ಣ ಮತ್ತು ಕುಟುಂಬಕ್ಕೆ ಬೇಸರ ತಂದಿದೆ. ಇನ್ನಾರಧ್ದೋ ಭೂಮಿಯಲ್ಲಿ ಕೃಷಿ ಕೂಲಿ ಮಾಡಿಕೊಂಡು ಜೀವನ ನಡೆಸುವ ಬದಲಿಗೆ, ಒಂದಿಷ್ಟು ಭೂಮಿ ಮಂಜೂರು ಮಾಡಲು ಸರ್ಕಾರಕ್ಕೆ ಮಾಡಿಕೊಂಡ ಮನವಿಗಳು ಕೇವಲ ಕಡತಗಳಲ್ಲಿ ದಾಖಲಾಗುತ್ತಿದೆ.

2015ರ ಮಾರ್ಚ್‌ನಲ್ಲಿ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಧೀನ ಕಾರ್ಯದರ್ಶಿ ಭಾಗ್ಯಲಕ್ಷ್ಮೀ ಅವರು ಕಂದಾಯ ಇಲಾಖೆಗೆ ಪತ್ರ ಬರೆದು ಸರ್ಕಾರದ 4 ಎಕರೆ ಭೂಮಿ ಮಂಜೂರು ಮಾಡುವಂತೆ ತಿಳಿಸಿದ್ದಾರೆ. ಈ ಪತ್ರವನ್ನು ಹಿಡಿದು ನಿಂಗಣ್ಣ ತಹಶೀಲ್ದಾರ ಕಚೇರಿಯಿಂದ, ರಾಜ್ಯಪಾಲರ ತನಕ ಅಲೆದಿದ್ದಾರೆ. ರಾಜ್ಯಪಾಲರು ಸೇರಿದಂತೆ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಪತ್ರ ಬರೆದು ಭೂಮಿ ಮಂಜೂರು ಮಾಡಿಕೊಡುವಂತೆ ಸೂಚನೆ ಕೊಟ್ಟಿದ್ದಾರೆ. ಆದರೆ, ಇನ್ನೂ ಭೂಮಿ ಮಂಜೂರು ಆಗಲೇ ಇಲ್ಲ. ಜನನಾಯಕರು ಕೊಟ್ಟ ಭರವಸೆಯನ್ನೇ ನಂಬಿರುವ ಈ ವೃಕ್ಷ ಸಂರಕ್ಷಕ ದಿನ ದೂಡುತ್ತಿದ್ದಾರೆ.

ಬೆದರಿಕೆ ಕರೆಗಳು!: ಅರೇಹಳ್ಳಿ ನಿಂಗಣ್ಣರ ಸಾಲು ಮರಗಳು ಖ್ಯಾತಿ ಪಡೆಯುತ್ತಿವೆ. ಸಾಲು ಮರದ ತಿಮ್ಮಕ್ಕನಂತೆ, ನಿಂಗಣ್ಣರ ಪರಿಸರ ಸೇವೆಯನ್ನು ಜನಸಾಮಾನ್ಯರು ಶ್ಲಾ ಸುತ್ತಿರುವ ಬೆನ್ನಲ್ಲೆ ಕೆಲವು ಕಿಡಿಗೇಡಿಗಳು ನಿಂಗಣ್ಣರ ಮೊಬೈಲ್‌ಗೆ ಕರೆಗಳನ್ನು ಮಾಡಿ ಬೆದರಿಕೆ ಹಾಕುತ್ತಿದ್ದಾರಂತೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದಾಗಿ ಸ್ವತಃ ನಿಂಗಣ್ಣ ತಿಳಿಸಿದ್ದಾರೆ. ಬೆದರಿಕೆ ಕರೆಗಳ ಬಗ್ಗೆ ಗ್ರಾಮಾಂತರ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಪೊಲೀಸರು ಇನ್ನಷ್ಟೇ ಕಿಡಿಗೇಡಿಯನ್ನು ಪತ್ತೆ ಹಚ್ಚಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.

ಕೈಲಾಗದವನು ಮೈ ಪರಿಚಿಕೊಂಡ ಎಂಬಂತೆ ಕೆಲವರು ನಿಂಗಣ್ಣರ ಖ್ಯಾತಿಯನ್ನು ಸಹಿಸದೆ, ಇವರು ಬೆಳೆಸಿದ ಮರಗಳ ಕೊಂಬೆ ಕತ್ತರಿಸುವುದು, ಬೆಂಕಿ ಹಚ್ಚುವುದನ್ನು ಮಾಡುತ್ತಿದ್ದಾರಂತೆ, ಇದನ್ನು ಕಂಡು ಬೇಸರವಾಗುತ್ತಿದೆ ಎಂದು ನಿಂಗಣ್ಣ ನೋವು ತೋಡಿಕೊಂಡಿದ್ದಾರೆ.

ಭೂಮಿ ತಾಯಿಯ ಸೇವೆ ಮಾಡಬೇಕೆನ್ನಿಸಿತು ಮಾಡಿದ್ದೇನೆ. ತಮಗೆ 62 ವರ್ಷ. ಸರ್ಕಾರದಿಂದ ಒಂದಿಷ್ಟು ಭೂಮಿ ಸಿಕ್ಕರೆ ಸ್ವಂತ ಭೂಮಿಯಲ್ಲಿ ಕೃಷಿ ಮಾಡಿ ಜೀವನ ಸಾಗಿಸುವ ಕನಸಿದೆ. ಸರ್ಕಾರ ಸ್ಪಂದಿಸಬೇಕಾಗಿದೆ. ವಸತಿ ಬಡಾವಣೆಗಳಲ್ಲಿ ಸಸಿ ನೆಡುವಂತೆ ಆ ಬಡಾವಣೆಗಳ ನಿವಾಸಿಗಳು, ಮಾಲೀಕರು ಸೂಚಿಸಿದರೆ ಕೆಲಸ ಮಾಡಿಕೊಡುತ್ತೇನೆ. ಬಡಾವಣೆಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ನೀರು ಹಾಯಿಸಿ ಕೂಲಿ ಪಡೆದು ಜೀವನ ಸಾಗಿಸುತ್ತಿದ್ದೇನೆ.
-ಸಾಲು ಮರದ ನಿಂಗಣ್ಣ

* ಬಿ.ವಿ.ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.