ಸಮಸ್ಯೆಗಳ ಆಲಿಕೆಗೆ ಸೀಮಿತವಾದ ಸಭೆ
Team Udayavani, Oct 4, 2018, 7:00 AM IST
ರಾಮನಗರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ರಾಮನಗರ ಉಪಚುನಾವಣೆಯ ಬಗ್ಗೆ ವಿಷಯ ಪ್ರಸ್ತಾಪವೇ ಆಗಲಿಲ್ಲ. ಕಾರ್ಯಕರ್ತರು ದೂರುಗಳಿಗೆ ಸಭೆ ಸೀಮಿತವಾಯಿತು.
ಕೇತಿಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಬುಧವಾರ ಚನ್ನಪಟ್ಟಣ ಮತ್ತು ರಾಮನಗರ ಕಾರ್ಯಕರ್ತರ ಸಭೆ ನಡೆಯಿತು. ರಾಮನಗರ ಉಪಚುನಾವಣೆ ಹಿನ್ನೆಲೆಯಲ್ಲೇ ಸಭೆ ಆಯೋಜಿಸಲಾಗಿದೆ ಎಂದು ಬಹುತೇಕ ಕಾರ್ಯಕರ್ತರು ಭಾವಿಸಿದ್ದರು.
ಆದರೆ, ಕುಮಾರಸ್ವಾಮಿ ಅವರೇ ಸ್ವತಃ ಇದು ಉಪಚುನಾವಣೆಗೆ ಸಂಬಂಧಿಸಿದ ಸಭೆ ಅಲ್ಲ ಎಂದು ಸ್ಪಷ್ಟ ಪಡಿಸಿದರು. ಸಮಸ್ಯೆ ಆಲಿಸಲೆಂದೇ ಕರೆದ ಸಭೆ, ಉಪಚುನಾವಣೆ ಹಿನ್ನೆಲೆಯಲ್ಲಿ ಎಂಬುದು ಮಾಧ್ಯಮಗಳ ಸೃಷ್ಟಿ ಎಂದರು. ಸರ್ಕಾರ ಬಿದ್ದೇ ಹೋಯ್ತು ಎಂದು ಕೆಲ ಮಾಧ್ಯಮಗಳು ಹೇಳಿದವು. ಆದರೆ ತಮಗೆ 5 ವರ್ಷ ಸರ್ಕಾರ ಹೇಗೆ ನಡೆಸಬೇಕು ಎಂಬುದು ಗೊತ್ತು ಎಂದರು.
ಅಧಿಕಾರಿಗಳ ಮೇಲೆ ದೂರು, ಚನ್ನಪಟ್ಟಣ ಕೆರೆಗಳಿಗೆ ನೀರು ಬಿಟ್ಟಿಲ್ಲ ಹೀಗೆ ಅನೇಕ ಸಮಸ್ಯೆಯನ್ನು ಕಾರ್ಯಕರ್ತರು ಹೇಳಿಕೊಂಡರು. ಅಗತ್ಯ ಕ್ರಮ ವಹಿಸುವುದಾಗಿ ಸಿಎಂ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ