ಗೌರಮ್ಮನ ಕೆರೆ ಪುನಶ್ಚೇತನಕ್ಕೆ ಕ್ರಮ
Team Udayavani, Jan 22, 2020, 6:08 PM IST
ಮಾಗಡಿ: ಪಟ್ಟಣದ ಗೌರಮ್ಮನ ಕೆರೆ ಪುನಶ್ಚೇತನ ಗೊಳಿಸಲು 2 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕಾಮಗಾರಿ ಕೈಗೊಳ್ಳಲಾಗವುದು ಎಂದು ಶಾಸಕ ಎ. ಮಂಜುನಾಥ್ ತಿಳಿಸಿದರು.
ಪಟ್ಟಣದ ಗೌರಮ್ಮನಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾಗರಿಕರ ಅನುಕೂಲಕ್ಕಾಗಿ ವಾಕಿಂಗ್ ಪಾತ್ ಹಾಗೂ ಉದ್ಯಾನ ಅಭಿವೃದ್ಧಿಪಡಿಸಲು ಈ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹಿಂದೆ ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಂ.ಎನ್. ಮಂಜುನಾಥ್ ಕೆರೆ ಪುನಶ್ಚೇನಕ್ಕೆ 2 ಕೋಟಿ ರೂ. ಮೀಸಲಿಟ್ಟು ಮಂಜೂರಾತಿ ನೀಡಿದ್ದರು. ಸಣ್ಣ ನೀರಾವರಿ ಇಲಾಖೆ ಈಗಾಗಲೇ ಟೆಂಡರ್ ಕರೆದಿದೆ. ಇರುವ ರಾಜ ಕಾಲುವೆ ಮುಚ್ಚಿ ಹೋಗಿದೆ. ಕೆರೆಏರಿಯಿಂದ ನೀರಿನ ಸೋರಿಕೆಯಾಗುತ್ತಿದ್ದು, ಅಬಿವೃದ್ಧಿಗೊಳಿಸಲು ಹೆಚ್ಚಿನ ಅನುದಾನ ಬೇಕಿದೆ ಎಂಬ ಎಇಇ ಕೇಳಿದ್ದಾರೆ. ಅನುದಾನ ಮಂಜೂರು ಮಾಡಿಸಿಕೊಡಲಾಗುವುದು.
ಅತಿ ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಿ ನಾಗರಿಕರಿಗೆ ಸಮರ್ಪಣೆಯಾಗಬೇಕು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದ್ದೇನೆ. ಕೆರೆ ಒತ್ತುವರಿಯಾಗಿದ್ದಾರೆ, ಸರ್ವೇ ಮಾಡಿಸಲಾಗುವುದು. ಕೆರೆಯ ಕಲುಷಿತ ನೀರು ಹೊರತೆಗೆಸಿ ಸ್ವತ್ಛಗೊಳಿಸಲಾಗುವುದು. ನಾಗರಿಕರ ಅನುಕೂಲವೇ ನಮ್ಮ ಪರಮ ಗುರಿಯಾಗಿದೆ ಎಂದು ತಿಳಿಸಿದರು.
ಪುರಸಭಾ ಸದಸ್ಯರಾದ ಎಂ.ಎನ್. ಮಂಜುನಾಥ್, ಕೆ.ವಿ.ಬಾಲು, ಹೇಮಲತಾ, ವಿಜಯ ರೂಪೇಶ್, ಭಾಗ್ಯಮ್ಮ ನಾರಾಯಣ್, ನವೀನ್ಕುಮಾರ್, ಕೆಡಿಪಿ ಸದಸ್ಯೆ ಗೌರಮ್ಮ, ಮುಖಂಡರಾದ ನರಸೇಗೌಡ, ಜೈಕುಮಾರ್, ತಗ್ಗೀಕುಪ್ಪೆ ರಾಮಣ್ಣ, ಪುರುಶೋತ್ತಮ್, ವೆಂಕಟೇಶ್, ನಾಗರಾಜು, ವಸಂತಕೃಷ್ಣ, ನಯಾಜ್, ಪುರಸಭಾ ಮುಖ್ಯಾಧಿಕಾರಿ ಎಂ.ಸಿ.ಮಹೇಶ್, ಎಂಜಿನಿಯರ್ ಪ್ರಶಾಂತ್ಶೆಟ್ಟಿ, ರೂಪೇಶ್ ಕುಮಾರ್, ಸೂರಪ್ಪ, ನರಸಿಂಹಯ್ಯ, ರಂಗನಾಥ್, ಬೋರ್ವೆಲ್ ನರಸಿಂಹಯ್ಯ, ರವಿ ಕುಮಾರ್, ರಂಗಣ್ಣಿ, ರಾಜಣ್ಣ, ನಾಗರತ್ನಮ್ಮ, ಶಿವಕುಮಾರ್ ಇದ್ದರು.