ಹಣ ದೋಚಿದ್ದ ನಕಲಿ ಪೊಲೀಸರ ಸೆರೆ
Team Udayavani, Sep 1, 2020, 1:03 PM IST
ಸಾಂದರ್ಭಿಕ ಚಿತ್ರ
ರಾಮನಗರ: ಪೊಲೀಸರೆಂದು ಹೇಳಿ ಪ್ರೇಮಿಗಳ ಬಳಿ ನಗ, ನಾಣ್ಯ ಮೊಬೈಲ್ ದೋಚಿದ್ದ ಇಬ್ಬರು ಆರೋಪಿಗಳನ್ನು ತಾವರೆಕೆರೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ದೇವಲಾಪುರ ಹೋಬಳಿ ನಾಗನಹಳ್ಳಿಯ ಪ್ರದೀಪ ಅಲಿಯಾಸ್ ಕೆಂಚ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಅಮೃತೂರು ಹೋಬಳಿ ಹೊಸಕೆರೆ ವಾಸಿ ಜಗದೀಶ ಬಂಧಿತ ಆರೋಪಿಗಳು. ಇವರಿಂದ ಸುಲಿಗೆ ಮಾಡಿದ್ದ 4 ಲಕ್ಷ ಮೌಲ್ಯದ ಟಾಟಾ ಇಂಡಿಕಾ ಕಾರು, 6 ಮೊಬೈಲ್ ಮತ್ತು ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. 2020ರ ಜೂ.16ರಂದು ತಿಪ್ಪಗೊಂಡ ನಹಳ್ಳಿ ಚಿತ್ರಕೂಟ ಕಾಲೇಜು ಬಳಿ ಅರ್ಕಾವತಿ ಹೊಳೆ ಬಳಿ ಡ್ರೈವ್ ಜಿ ಬೈಕ್ನಲ್ಲಿ ಬಂದ ಆರೋಪಿಗಳು, ಪೊಲೀಸರೆಂದು ಹೇಳಿ ಅವಿನಾಶ್ ಬಳಿ ಹಣ, ಮೊಬೈಲ್ ಕಸಿದುಕೊಂಡಿದ್ದಾರೆ. ಆನಂತರ ಅವಿನಾಶ್ ಜತೆಗಿದ್ದ ಹುಡುಗಿಯನ್ನು ಟಾಟಾ ಇಂಡಿಕಾ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಆಕೆ ಬಳಿಯಿದ್ದ ಚಿನ್ನದ ಸರ ಕಿತ್ತು ಕೊಂಡು ರಾಮನಗರ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಬಗ್ಗೆ ತಾವರೆಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾಗಡಿ ವೃತ್ತ ನಿರೀಕ್ಷಕ ಮಂಜು ನಾಥ್ ನೇತೃತ್ವದಲ್ಲಿ ತಾವರೆಕೆರೆ ಠಾಣೆ ಸಬ್ ಇನ್ಸ್ಪೆಕ್ಟರ್ ನರೇಂದ್ರ ಬಾಬು, ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ದಸ್ತಗಿರಿ ಮಾಡಿದಾಗ, ಪ್ರಕರಣ ಬಯಲಿಗೆ ಬಂದಿದೆ.ಪೊಲೀಸರ ಸೋಗಿ ನಲ್ಲಿ ಪ್ರೇಮಿಗಳಿಂದ ಹಣ, ಚಿನ್ನಾಭರಣ ದೋಚಿದ್ದು ಮಾತ್ರವಲ್ಲದೆ ಇತರೆ ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದಾಗಿ ಬಾಯಿ ಬಿಟ್ಟಿದ್ದಾರೆ.
………………………………………………………………………………………………………………………………………………………
ಏಳು ಮಂದಿ ದರೋಡೆಕೋರರ ಬಂಧನ : ರಾಮನಗರ: ಹಣ ದೋಚಿದ್ದ 7ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ತಾವರೆಕೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಸುಂಕದಕಟ್ಟೆ ಈರಣ್ಣನಪಾಳ್ಯದ ನಿವಾಸಿ ವಿಜಯ್, ಕೆಬ್ಬೇಹಳ್ಳದ ನಿವಾಸಿ ಧನುಷ್, ಭರತ್, ಜಾಲಹಳ್ಳಿ ಕ್ರಾಸ್ ಎನ್ಟಿಟಿಎಫ್ ನಿವಾಸಿ ರೋಹಿತ್ ಅಲಿಯಾಸ್ ಸ್ಟೀಫನ್, ನಾಗರಬಾವಿಯ ಎಂಪಿಎಂ ಲೇಔಟ್ ನಿವಾಸಿ ಸುರೇಶ, ಕೆಂಗುಂಟೆ ವಾಸಿ ಅನಿಲ್ ಹಾಗೂ ಶಿವಮೊಗ್ಗ ಜಿಲ್ಲೆ ಭದ್ರಾವತಿ ಸಂತೆಮೈದಾನ ನಿವಾಸಿ ರಾಬರ್ಟ್ ಬಂಧಿತ ಆರೋಪಿಗಳು. ಪೊಲೀಸರು ಇವರಿಂದ ಬಳಸಿದ ಕಾರು, 16 ಗ್ರಾಂ ತೂಕದ ಚಿನ್ನದ ಸರ, 2 ಮೊಬೈಲ್, ಕೃತ್ಯಕ್ಕೆ ಬಳಸಿದ್ದ ಬೈಕ್ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
2020ರ ಆ.18ರಂದು ವೆಂಕಟ್ ಮತ್ತು ಸ್ನೇಹಿತರಾದ ನರೇಶ್, ಜೀವನ್, ನರೇಶ್, ನರೇಶ್ ಮಾಗಡಿ ರಸ್ತೆ ಜೋಗೇಹಳ್ಳಿ ಬಳಿ ಕಾರು ನಿಲ್ಲಿಸಿಕೊಂಡಿದ್ದರು. ಈ ವೇಳೆ ಮೂರು ಬೈಕುಗಳಲ್ಲಿ ಬಂದ 5-6 ಜನ ಇವರ ಮೇಲೆ ಕಾರದ ಪುಡಿ ಎರಚಿ ಮೊಬೈಲ್, ಚಿನ್ನದ ಸರ ಹಾಗೂ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ವೆಂಕಟ್ ದೂರು ದಾಖಲಿಸಿದ್ದರು. ಮಾಗಡಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ತಾವರೆಕೆರೆ ಠಾಣೆ ಸಬ್ ಇನ್ಸ್ ಪೆಕ್ಟರ್ ನರೇಂದ್ರ ಬಾಬು, ಸಿಬ್ಬಂದಿಗಳ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ