ಹೈಕೋರ್ಟ್ ಆದೇಶದಂತೆ ಕೆರೆ ಒತ್ತುವರಿ ತೆರವು
Team Udayavani, Jul 20, 2019, 2:36 PM IST
ಕನಕಪುರದಲ್ಲಿ ಹೈಕೋರ್ಟ್ ಆದೇಶದ ಮೇರೆಗೆ ತೋಟಗಾರಿಕೆ ಇಲಾಖೆ ಕಟ್ಟಡಗಳು, ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ತೆರವುಗೊಳಿಸಲಾಯಿತು.
ಕನಕಪುರ: ಹೈಕೋರ್ಟ್ ಆದೇಶದ ಮೇರೆಗೆ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರವು ಮುಂದುವರಿದಿದೆ. ತೋಟಗಾರಿಕೆ ಇಲಾಖೆ ಕಟ್ಟಡಗಳು, ಕೃಷಿ ಉತ್ಪನ್ನ ಮಾರುಕಟ್ಟೆ ತೆರವುಗೊಳಿಸಿದ ಜಿಲ್ಲಾ ಮತ್ತು ತಾಲೂಕು ಆಡಳಿತ ಶುಕ್ರವಾರ ದೇವಾಲಯವನ್ನು ತೆರವುಗೊಳಿಸಿತು.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದ ಅಯ್ಯಪ್ಪಸ್ವಾಮಿ ದೇವಾಲಯವು ನಗರದ ಮುಖ್ಯದ್ವಾರದಲ್ಲಿದ್ದು, ಪ್ರತಿ ದಿನ ನೂರಾರು ಭಕ್ತರಿಗೆ ದರ್ಶನ ನೀಡುತ್ತಿದ್ದ ದೇವಾಲಯ ಇಂದು ಇಲ್ಲವಾಗಿದೆ. ದೇವಸ್ಥಾನದ ಸಮಿತಿ ಸದಸ್ಯರು ಪೂಜಾ ಕಾರ್ಯಗಳನ್ನು ನಡೆಸಿ ಅಯ್ಯಪ್ಪ ಮೂರ್ತಿಯನ್ನು ಮಳಗಾಳಿನ ಸಮುದಾಯ ಭವನದಲ್ಲಿ ಸ್ಥಾಪಿಸಿದ್ದಾರೆ.
ದೇವಾಲಯಕ್ಕೆ ಜಿಲ್ಲಾ ಮತ್ತು ತಾಲೂಕು ಆಡಳಿತ ಯಾವುದೇ ಸೂಕ್ತವಾದ ಜಾಗವನ್ನು ಸೂಚಿಸಿಲ್ಲ. ದೇವಾಲಯದ ಸಮಿತಿ ಸದಸ್ಯರು 20 ಎಕರೆ ಕೆರೆ ಅಭಿವೃದ್ಧಿಗೆ ಹೊರತುಪಡಿಸಿ, 16 ಎಕರೆ 20 ಗುಂಟೆ ಜಾಗದಲ್ಲಿ ಸರ್ಕಾರಿ ವಿವಿಧ ಇಲಾಖೆಗಳ ಕಟ್ಟಡ ನಿರ್ಮಾಣಗೊಂಡು ಉಳಿದ ಜಾಗದಲ್ಲಿ ದೇವಾಲಯ ನಿರ್ಮಾ ಣಕ್ಕೆ ಜಾಗ ನೀಡಬೇಕು ತಹಶೀಲ್ದಾರ್ ಆನಂದಯ್ಯಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ