ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ಮೋಸಗಾರ

ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿಯವರಿಂದ ಗಂಭೀರ ಆರೋಪ

Team Udayavani, Jul 22, 2019, 1:02 PM IST

rn-tdy-1

ಮಾಗಡಿ ತಾಲೂಕಿನ ಕಲ್ಲುದೇವನಹಳ್ಳಿಯಲ್ಲಿ ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಸುದ್ದಿಗಾರರಿಗೆ ತನ್ನ ಸಹೋದರ ನರಸಿಂಹಮೂರ್ತಿ ಯ ಮೋಸ ,ವಂಚನೆಗೆ ಸಂಬಂಧಿಸಿದಂತೆ ದಾಖಲೆ ತೋರಿಸುತ್ತಿರುವುದು.

ಮಾಗಡಿ: ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ನಯವಂಚಕ, ಮೋಸಗಾರ. ನನ್ನ ವಿರುದ್ಧ ಆರೋಪ ಮಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕಲ್ಲುದೇವನಹಳ್ಳಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ನರಸಿಂಹಮೂರ್ತಿಗೆ ನಾನು ವಂಚಕ, ಮೋಸಗಾರ ಎಂಬುದು ಈಗ ಗೊತ್ತಾಗಿದೆ. ನರಸಿಂಹಮೂರ್ತಿ ಮಗ ನನ್ನು ಜೈಲಿನಿಂದ ಬಿಡಿಸಿದ್ದಾಗ, ಮಗನ ಅಪಘಾತದ ಸಂದರ್ಭದಲ್ಲಿ, ಮದುವೆಗೆ ಹಣ ಕೊಟ್ಟಾಗ ಮೋಸಗಾರನಾಗಿರಲಿಲ್ಲ. ನನ್ನಿಂದ ಕೋಟ್ಯಂತರ ರೂ. ಸಹಕಾರ ಪಡೆದು, ಈಗ ನನ್ನನ್ನು ಮೋಸ ಗಾರ ಎಂದು ಹೇಳುವ ನರಸಿಂಹಮೂರ್ತಿಗೆ ನಾಚಿಕೆಯಾಗಬೇಕು ಎಂದು ವಿರುದ್ಧ ಕೆ. ಕೃಷ್ಣಮೂರ್ತಿ ಹರಿಹಾಯ್ದರು.

ಶೀಘ್ರ ಮೋಸಗಾರ ಯಾರೆಂದು ತಿಳಿಯುತ್ತದೆ: ನರಸಿಂಹಮೂರ್ತಿ ವಿರುದ್ಧ ಹಲವು ಗಂಭೀರ ಆರೋಪಗಳಿವೆ. ಅವರ ಮಗನ ಭವಿಷ್ಯಕ್ಕೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಸುಮ್ಮ ನಿದ್ದೇವು. ಈಗಲೂ ನರಸಿಂಹ ಮೂರ್ತಿ ವಿರುದ್ಧ ಗಂಭೀರ ಆರೋಪವು ಕೋರ್ಟ್‌ ಕಟಕಟೆ ಯಲ್ಲಿದೆ. ಕೆಲದಿನಗಳಲ್ಲೇ ಹೈಕೋರ್ಟ್‌ ಮೆಟ್ಟಿ ಲೇರುವ ಸಾಧ್ಯತೆಗಳೂ ಇವೆ. ಅಲ್ಲದೆ ಅನ್ಯಾಯ ಕ್ಕೊಳಗಾಗಿರುವವರು ಶೀಘ್ರದಲ್ಲೇ ಮಾಧ್ಯಮ ಮುಂದೆ ಬರಲಿದ್ದಾರೆೆ. ಆಗಲೇ ಜನರಿಗೆ ಮೋಸಗಾರ, ನಯವಂಚಕ ಯಾರು ಎಂದು ತಿಳಿಯುತ್ತದೆ ಎಂದು ಆರೋಪಿಸಿದರು.

ಸಂಸ್ಥೆಯಿಂದ ವಜಾಗೊಂಡವರು: ಬಿಡಿಸಿಸಿ ಬ್ಯಾಂಕ್‌ ಹಗರಣದಲ್ಲಿ ನನ್ನ ಪಾತ್ರವಿದೆ ಎಂಬ ಪ್ರಕರಣ ನ್ಯಾಯಾಲಯದಲ್ಲಿದೆ. ನಾನು ಅಪರಾಧಿ ಯಲ್ಲ. ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಆದರೆ ನನ್ನ ವಿರುದ್ಧ ಮಾತನಾಡುತ್ತಿರುವ ಎಚ್.ಎನ್‌.ಅಶೋಕ್‌ ಮತ್ತು ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ, ಈ ಇಬ್ಬರು ಸಂಸ್ಥೆಯಿಂದ ವಜಾ ಗೊಂಡಿರುವವರಾಗಿದ್ದಾರೆ. 2016ರಲ್ಲಿ ಆಗಲ ಕೋಟೆ ಡೇರಿಯಲ್ಲಿ ಮೋಸದ ಪ್ರಕರಣದಲ್ಲಿರುವ ನರಸಿಂಹಮೂರ್ತಿ ವಿರುದ್ಧ 29 ಅಡಿ ನೋಟಿಸ್‌ ಜಾರಿಯಾಗಿದೆ ಎಂದು ಮಾಹಿತಿ ನೀಡಿದರು.

ನಾನು ಕೇಸು ಹಾಕಿಸಿಲ್ಲ: ರಂಗನಾಥಸ್ವಾಮಿ ಮತ್ತು ಕಲ್ಲುದೇವನಹಳ್ಳಿ ಮಹಾದೇಶ್ವರ ಸ್ವಾಮಿ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನರಸಿಂಹ ಮೂರ್ತಿಯವರ ದೊಡ್ಡ ಮಗನೇ, ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು. ಇದರಲ್ಲಿ ನನ್ನ ಪಾತ್ರ ವೇನೂ ಇಲ್ಲ. ಕಾರ್ಯದರ್ಶಿ ನಿವೃತ್ತಿಯಾಗಿದ್ದಾಗ ಆ ಹುದ್ದೆಗೆ ಪದವೀಧರ ಅಂಗವಿಕಲ ಹಾಗೂ ಎಸ್‌ಸಿ ಯುವಕ ಅರ್ಜಿಸಲ್ಲಿಸಿದ್ದರು. ಆದರೆ ಇವರಿ ಬ್ಬರ ಅರ್ಜಿ ತಿರಸ್ಕಾರವಾಗಿ, ಅನರ್ಹ ವ್ಯಕ್ತಿಯೊಬ್ಬನ ಹುದ್ದೆಗೆ ತಾತ್ಕಾಲಿಕವಾಗಿ ನೇಮಕವಾಗುತ್ತದೆ. ಬಳಿಕ ಯುವಕನನ್ನು ವಜಾಗೊಳಿಸಿ, ಮರು ನೇಮಕ ಗೊಳಿಸಿ ಕಾಯಂಗೊಳಿಸಲಾಗುತ್ತದೆ. ಇದು ಎಂತಹ ನಿಯಮ ಎಂದು ತಿಳಿದಿಲ್ಲ. ಈ ಕೃತ್ಯದ ವಿರುದ್ಧ ಅವರ ಪುತ್ರನೇ ಪ್ರಕರಣ ದಾಖಲಿಸಿದ್ದಾರೆ. ಡೇರಿ ಯಲ್ಲಿ ಹೊಂದಾಣಿಕೆ ಬಳಿಸ ಸುಮ್ಮನಾಗಿದ್ದರು.

ಅನ್ಯಾಯಕ್ಕೊಳಗಾದವರ ಪರವಾಗಿದ್ದೇನೆ: ನರಸಿಂಹ ಮೂರ್ತಿಯಿಂದ ಸಾಕಷ್ಟು ಯುವಕರು ಮೋಸ ಹೋಗಿದ್ದಾರೆ. ನಾನು ಅವರ ಪರವಾಗಿ ನಿಂತಿದ್ದು, ನರಸಿಂಹ ಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ. ಏಕ ಪೀಠದ ನ್ಯಾಯದಲ್ಲಿ ನರಸಿಂಹ ಮೂರ್ತಿಗೆ ನ್ಯಾಯ ದೊರೆತರೆ, ದ್ವಿಪೀಠ ನ್ಯಾಯದಲ್ಲಿ ನಮಗೆ ಜಯ ದೊರಕಿತು. ಆದರೆ ಪ್ರಕರಣವನ್ನು ಡಿ.ಆರ್‌.ಕೋರ್ಟ್‌ನಲ್ಲಿ ಇತ್ಯರ್ಥ ಗೊಳಿಸಿಕೊಳ್ಳಲು ಪೀಠ ತಿಳಿಸಿದೆ. ಈಗಲೂ ಪ್ರಕರಣ ಕೋರ್ಟ್‌ನಲ್ಲಿದ್ದು, ಇತ್ಯರ್ಥವಾಗದಿದ್ದರೆ ಸುಪ್ರೀಂ ನಲ್ಲಿ ಪ್ರಕರಣ ದಾಖಲಿಸುತ್ತೇನೆ. ಅಲ್ಲದೆ ನರಸಿಂಹ ಮೂರ್ತಿ ಮೋಸಗಾರರು ಯಾರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಆಗಲಕೋಟೆ, ಲವ, ಬಾಳೇನಹಳ್ಳಿ ಶಿವಲಿಂಗಯ್ಯ, ಮಲ್ಲಿಕಪ್ಪ, ಜಗದೀಶ್‌, ಪ್ರಸನ್ನಕುಮಾರ್‌ ಗೌಡ, ಬೋಗೇಶ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.