ಜೆಡಿಎಸ್‌ ಸಂಘಟನೆಗೆ ಬೂತ್‌ ಸಮಿತಿ

2023ರ ಚುನಾವಣೆ ವೇಳೆ ಎದುರಾಳಿ ಯಾರೇ ಆಗಿರಲಿ, ಸಮರ್ಥವಾಗಿ ಎದುರಿಸೋಣ: ನಿಖೀಲ್‌

Team Udayavani, Nov 13, 2021, 4:31 PM IST

ಜೆಡಿಎಸ್‌ ಸಂಘಟನೆಗೆ ಬೂತ್‌ ಸಮಿತಿ

ರಾಮನಗರ: “2023ರ ಸಾರ್ವತ್ರಿಕ ಚುನಾವಣೆ ಕೇವಲ ಕುಮಾರಸ್ವಾಮಿ ಮತ್ತು ತಮ್ಮ ಅಸ್ತಿತ್ವದ ಪ್ರಶ್ನೆಯಲ್ಲ, ಕ್ಷೇತ್ರದ ಕಾರ್ಯಕರ್ತರ ಅಸ್ತಿತ್ವದ ಪ್ರಶ್ನೆ, ಕ್ಷೇತ್ರವನ್ನು ಉಳಿಸಿಕೊಳ್ಳ ಬೇಕಾಗಿದೆ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತರ ಶ್ರಮವೂ ಈಗ ಮುಖ್ಯ’ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಕೈಲಾಂಚ ಹೋಬಳಿ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಎದುರಾಳಿ ಯಾರೇ ಆಗಿರಲಿ, ಅದರ ಬಗ್ಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳುವುದು ಬೇಡ. ಅವರನ್ನು ಸಮ ರ್ಥವಾಗಿ ಎದುರಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

 ಸರ್ವೆ: ಜೆಡಿಎಸ್‌ ದುರ್ಬಲವಾಗಿದೆ ಎಂದು ವಿರೋಧ ಪಕ್ಷಗಳ ನಾಯಕರು ಮತದಾರರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಸರ್ವೆ ಮಾಡಿಸಿದ್ದೇವೆ. ಸರ್ವೆಯಲ್ಲಿ ಪಕ್ಷಕ್ಕೆ ಪೂರಕ ಅಂಶಗಳಿವೆ. ಪಕ್ಷ ದುರ್ಬಲವಾಗಿಲ್ಲ. ಮತದಾರರು ಈಗಲೂ ಜೆಡಿಎಸ್‌ ಪರವಾಗಿಯೇ ಇದ್ದಾರೆ. ಈ ವಿಚಾರದಲ್ಲಿ ತಾವು ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ, ರಾಮನಗರಕ್ಕೆ ಅನ್ಯಾಯ ಮಾಡಿಲ್ಲ, ಮಾಡುವುದಿಲ್ಲ ಎಂದರು.

ಪಕ್ಷ ಸಂಘಟನೆ: 2018ರ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಸಿಕ್ಕ ಲೀಡ್‌ಗಿಂತ ಹೆಚ್ಚಿನ ಮತಗಳ ಲೀಡ್‌ಗಳಿಸಬೇಕಾಗಿದೆ. ಈ ಹಿನ್ನೆಲೆ ಪಕ್ಷವನ್ನು ಸಂಘಟಿಸ ಬೇಕಾಗಿದೆ. ಬೂತ್‌ ಕಮಿಟಿಗಳ ರಚನೆಯಾಗಬೇಕಾಗಿದೆ. ಕುಮಾರಸ್ವಾಮಿ ಅವರು ಕಾರ್ಯದೊತ್ತಡ ದಿಂದಾಗಿ ಬೂತ್‌ ಮಟ್ಟದ ಸಮಿತಿ ರಚನೆಯಾಗಿಲ್ಲ.

ಇದನ್ನೂ ಓದಿ:- ಚಿಕ್ಕಮಗಳೂರು: ಅತಂತ್ರ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರ ಬದುಕು

ಈಗ ಈ ಹೊಣೆಯನ್ನು ತಾವು ಹೊತ್ತುಕೊಂಡಿರುವು ದಾಗಿ, ಹೀಗೆ ರಚನೆಯಾಗುವ ಬೂತ್‌ ಮಟ್ಟದ ಕಮಿಟಿ ಯಲ್ಲಿ ಎಲ್ಲಾ ಜಾತಿ, ಸಮುದಾಯದ ಯುವಕರು, ಮಹಿಳೆಯರು ಇರಬೇಕು. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಅಷ್ಟರೊಳಗೆ ನಾವು ಪಕ್ಷ ಸಂಘಟನೆ ಮಾಡಬೇಕಿದ್ದು, ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಸ ಟ್ರೆಂಡ್‌!: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕುಮಾರಸ್ವಾಮಿ ಅವರು ಎಂದೂ ಹಸ್ತಕ್ಷೇಪ ಮಾಡಿದವರಲ್ಲ. ಆದರೆ, ಇತ್ತೀಚೆಗೆ ಒಂದು ಟ್ರೆಂಡ್‌ ಶುರುವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ವಿಧಾನಸಭೆ ಚುನಾವಣೆ ರೀತಿ ನಡೆಸಲಾಗುತ್ತಿದೆ. ನಾವೂ ಅದನ್ನು ಶುರು ಮಾಡಬೇಕಿದೆ. ಬುಡ ಸದೃಢವಾಗಿ ಇದ್ದಾಗ ನಮ್ಮನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ನಮ್ಮ ಕಾರ್ಯಕರ್ತರಲ್ಲಿದ್ದ ಗೊಂದಲದಿಂದ ಚುನಾವಣೆಯಲ್ಲಿ ನಮಗೆ ಅಲ್ಪ ಹಿನ್ನಡೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ನಗರಸಭೆ ಚುನಾವಣೆ ವೇಳೆ ಕುಮಾರಸ್ವಾಮಿ ಯಾವತ್ತೂ ಕಾರ್ಯಕರ್ತರು ಸಭೆ ನಡೆಸಿರಲಿಲ್ಲ. ಆದರೆ, ಮೊದಲ ಬಾರಿ ಸಭೆ ನಡೆಸಿ ಕಾರ್ಯಕರ್ತರ ಬೆನ್ನೆಲುಬಾಗಿ ನಿಂತರು. ಕೋವಿಡ್‌ ಕಾರಣದಿಂದ ಪ್ರಚಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಫ‌ಲಿತಾಂಶ ನಮಗೆ ವ್ಯತಿರಿಕ್ತವಾಗಿ ಬಂದಿದೆ ಎಂದು ನಗರಸಭೆ ಚುನಾವಣೆ ಫ‌ಲಿತಾಂಶವನ್ನು ವಿಶ್ಲೇಷಿಸಿದರು.

ಜಿಪಂ, ತಾಪಂ ಚುನಾವಣೆಬಗ್ಗೆಯೂ ನಿಗಾ ಇರಲಿ-

ನಗರಸಭೆ ಆಡಳಿತವನ್ನು ಸಂಪೂರ್ಣವಾಗಿ ನಮ್ಮ ವಶಕ್ಕೆ ತೆಗೆದುಕೊಳ್ಳುವ ದಿನ ಮುಂದೆ ಬರಲಿವೆ. ಅದಕ್ಕಾಗಿ ಇಂದಿನಿಂದಲೇ ಪ್ರಾಮಾಣಿಕವಾಗಿ ದುಡಿಯುವ ಶಪಥ ಮಾಡಬೇಕಿದೆ. ಜಿಪಂ, ತಾಪಂ ಚುನಾವಣೆಯನ್ನು ಸಮರ್ಥವಾಗಿ ಎದುರಿಸೋಣ. ಜಿಪಂನಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯ ಪ್ರವೃತ್ತರಾಗೋಣ. ಇನ್ನುಬೂತ್‌ ಕಮಿಟಿಗಳ ರಚನೆ ವಿಚಾರದಲ್ಲಿ ತಮ್ಮ ತಂದೆ ಕುಮಾರಸ್ವಾಮಿಯವರು ಅನುಮತಿಸಿ ದ್ದಾರೆ. ಕೈಲಾಂಚ ಹೋಬಳಿ ಮತದಾರರು ಎಂದೂ ಪಕ್ಷದ ಕೈಬಿಟ್ಟಿಲ್ಲ. ಹಾಗಾಗಿ ಅಲ್ಲಿಂದಲೇ ಸಂಘಟನೆಗೆ ಚಾಲನೆ ನೀಡುವುದಾಗಿ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್‌ ಕುಮಾರಸ್ವಾಮಿ ತಿಳಿಸಿದರು.

ಕಾರ್ಯಾಗಾರ: ಬೂತ್‌ ಕಮಿಟಿಗಳ ರಚನೆ ನಂತರ ರಾಜ್ಯಮಟ್ಟದ ಕಾರ್ಯಾಗಾರ ನಡೆಸಿದಂತೆ ಕ್ಷೇತ್ರದ ಮುಖಂಡರಿಗೂ ಕಾರ್ಯಾಗಾರ ಹಮ್ಮಿಕೊಳ್ಳುವುದಾಗಿ. 4 ಹೋಬಳಿಗಳಿಗೆ ನಾಲ್ಕು ದಿನ ಕಾರ್ಯಾಗಾರ ನಡೆಸುವುದಾಗಿ, ಕಾರ್ಯಾಗಾರದಲ್ಲಿ ಸ್ವತಃ ಕುಮಾರಸ್ವಾಮಿಯವರೇ ಭಾಗವಹಿಸಲಿದ್ದಾರೆ ಎಂದರು.

 ಸಂಪರ್ಕದಲ್ಲಿರಿ: ಪ್ರತಿ ಬೂತ್‌ನಿಂದ 3 ಮಂದಿ ನನ್ನ ನೇರ ಸಂಪರ್ಕದಲ್ಲಿರಬೇಕು. ಅದಕ್ಕೆಂದೇ ಒಂದು ಸಿಮ್, ಫೋನ್‌ ಮೀಸಲಿರುತ್ತದೆ, ಎಲ್ಲರ ಹೆಸರು, ನಂಬರ್‌ ಅನ್ನು ಅದರಲ್ಲಿ ಸೇವ್‌ ಮಾಡಿರಲಾಗುತ್ತದೆ. ಏನೇ ಸಮಸ್ಯೆಗಳಿದ್ದರೂ ತನಗೆ ನೇರವಾಗಿ ಕರೆ ಮಾಡಬಹುದು. ಚರ್ಚೆ ನಡೆಯಬೇಕು, ಆಗ ಮಾತ್ರ ಸಮಸ್ಯೆ ಹಾಗೂ ಅವುಗಳ ಪರಿಹಾರ ಸಾಧ್ಯ ಎಂದರು.

ಹಾರೋಹಳ್ಳಿ, ಮರಳವಾಡಿ ಹೋಬಳಿಗಳಲ್ಲಿ ಸಾಗುವಳಿ ಚೀಟಿ ಸಮಸ್ಯೆ ಹೊರತುಪಡಿಸಿದರೆ ಇಡೀ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಕೊರತೆ ಇಲ್ಲ, ಅದನ್ನು ಶೀಘ್ರ ಪರಿಹರಿಸಲಾಗುವುದು ಎಂದರು. ಸಭೆಯಲ್ಲಿ ತಾಲೂಕು ಅಧ್ಯಕ್ಷ ರಾಜಶೇಖರ್‌, ಜಿಪಂ ಮಾಜಿ ಅಧ್ಯಕ್ಷ ಎಚ್‌.ಸಿ.ರಾಜು, ರಾಜ್ಯ ವಕ್ತಾರ ಬಿ.ಉಮೇಶ್‌, ಮುಖಂಡರಾದ ದೊರೆಸ್ವಾಮಿ, ಅಶ್ವತ್ಥ, ಪ್ರಕಾಶ್‌, ಮಾವಿನ ಸಸಿ ವೆಂಕಟೇಶ್‌, ರವಿ, ಗೂಳಿ ಕುಮಾರ್‌, ಕೃಷ್ಣ, ರಾಮಕೃಷ್ಣಯ್ಯ, ಮೋಹನ್‌, ಗೇಬ್ರಿ ಯಲ್, ಎಂ.ಜಿ.ಫೈರೋಜ್, ಸೊಹೇಲ್ ಪಾಷಾ, ಕಾಡನಕುಪ್ಪೆ ನವೀನ್‌, ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.