ವೆಂಕಟೇಶ್ಗೆ ಬುದ ಪ್ರಶಸ್ತಿ ಪ್ರದಾನ
Team Udayavani, Oct 9, 2019, 5:22 PM IST
ಮಾಗಡಿ: ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಟಿ.ವೆಂಕಟೇಶ್ ಅವರಿಗೆ ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿಯನ್ನು ಮೈಸೂರಿನ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಪ್ರದಾನ ಮಾಡಿದರು.
ತಾಲೂಕಿನ ಸೋಲೂರು ಹೋಬಳಿ ಬಿಟ್ಟಸಂದ್ರಪಾಳ್ಯದ ರೈತ ತಿಮ್ಮಸಿದ್ದಯ್ಯ ಅವರ ಪುತ್ರ ಟಿ.ವೆಂಕಟೇಶ್ ಗ್ರಾಮೀಣ ಭಾಗದಲ್ಲಿ ಪ್ರಯೋಗ ಶೀಲ ಟ್ರಸ್ಟ್ ಎಂಬ ಸಂಸ್ಥೆ ಸ್ಥಾಪಿಸಿ, ಸಂಸ್ಥೆಯಿಂದ ಕನ್ನಡ ನಾಡು, ನುಡಿಯ ಸೇವೆ ಜೊತೆಗೆ ಸಮಾಜಮುಖೀ ಸೇವೆಯಲ್ಲಿ ತೊಡಗಿಸಿಕೊಂಡು, ಸಾವಿರಾರು ಮಂದಿಗೆ ಟ್ರಸ್ಟ್ ಯಿಂದ ಸಹಾಯ ಮಾಡಿದ್ದಾರೆ.
ಟ್ರಸ್ಟ್ನ ಟಿ.ವೆಂಕಟೇಶ್ ಅವರ ಸಮಾಜಮುಖೀ ಸೇವೆಯನ್ನು ಪರಿಗಣಿಸಿ, ಬುದ್ಧ ನ್ಯಾಷನಲ್ ಎಜುಕೇಷನ್ ಮತ್ತು ಕಲ್ಚರಲ್ ಅಕಾಡಮಿ ಮೈಸೂರು ವತಿಯಿಂದ ಟಿ.ವೆಂಕಟೇಶ್ಗೆ ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿಯನ್ನು ಮೈಸೂರಿನ ಪ್ಲವರ್ ಗಾರ್ಡನ್ ಸಿಟಿಯಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು. ಈ ವೇಳೆ ಕುವೆಂಪು ವಿವಿಯ ಪಿ.ವೆಂಕಟರಾಮಯ್ಯ, ಎಸ್.ಬಿ.ಸಂಪತ್ತು ಇತರರು ಹಾಜರಿದ್ದರು.