ರೈತರ ತೋಟದಿಂದಲೇ ಬೆಳೆ ಖರೀದಿ: ಪರಮಶಿವಯ್ಯ


Team Udayavani, Dec 3, 2020, 6:27 PM IST

ರೈತರ ತೋಟದಿಂದಲೇ ಬೆಳೆ ಖರೀದಿ: ಪರಮಶಿವಯ್ಯ

ರಾಮನಗರ: ರೈತರು ತಾವು ಬೆಳೆದ ಉತ್ಪನ್ನಗಳನ್ನುಅವರ ತೋಟಗಳ ಬಳಿಯಿಂದಲೇ ಮಾರುಕಟ್ಟೆಬೆಲೆ ಕೊಟ್ಟು ಖರೀದಿಸುವುದು, ಬಿತ್ತನೆ ಬೀಜ, ಸಾವಯವ ಗೊಬ್ಬರ ಪೂರೈಕೆ ಮುಂತಾಗಿ ಕೃಷಿಗೆಅಗತ್ಯವಿರುವ ವಸ್ತು ಪೂರೈಸುವ ಉದ್ದೇಶದಿಂದ ಜೈ ಜವಾನ್‌ – ಜೈ ಕಿಸಾನ್‌ ರೈತ ಸಂಪರ್ಕ ಕೇಂದ್ರ ಆರಂಭಿಸಿರುವುದಾಗಿ ಎಲ್‌.ವಿ.ಗ್ರೂಪ್‌ ಮಾಲೀಕ ಎಲ್‌.ವಿ.ಪರಮಶಿವಯ್ಯ ತಿಳಿಸಿದರು.

ತಾಲೂಕಿನ ಕೇತೋಹಳ್ಳಿ ಗ್ರಾಮದಲ್ಲಿ ಜೈಜವಾನ್‌-ಜೈ ಕಿಸಾನ್‌ ಕೃಷಿ ಉತ್ಪನ್ನ ಕೇಂದ್ರದಉದ್ಘಾಟನೆ, ಪ್ರಗತಿ ಪರ ರೈತರ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾರುಕಟ್ಟೆ ಬೆಲೆ: ರೈತರು ತಾವು ಬೆಳೆದ ಪದಾರ್ಥಗಳಿಗೆ ಸಗಟು, ಚಿಲ್ಲರೆ ಮಾರುಕಟ್ಟೆಗೆ ಸಾಗಿಸಲು ಸಾಗಾಟದ ವೆಚ್ಚವೇ ಅಧಿಕ. ಹೀಗಾಗಿಕೆಎಂಎಫ್‌ ಮಾದರಿಯಲ್ಲಿ ಪ್ರತಿ ಹಳ್ಳಿಗೆ ಹಾಲುಸಂಗ್ರಹಕ್ಕಾಗಿ ಲಾರಿ ತೆರಳುತ್ತಿದೆ. ಇದೇ ಮಾದರಿಯಲ್ಲಿ ತಾವೂ ಪ್ರತಿ ಹಳ್ಳಿಗಳಿಗೆ ವಾಹನ ಕಳುಹಿಸಲಾಗುತ್ತಿದೆ. ಸ್ಥಳೀಯ ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆ ಬೆಲೆ ನೀಡಿ ಖರೀದಿಸಲಾಗುತ್ತದೆ. ಇದರಿಂದಾಗಿ ರೈತರಿಗೆ ಸಾಗಾಟದ ವೆಚ್ಚ ಕಡಿಮೆಯಾಗಲಿದೆ ಎಂದು ಹೇಳಿದರು.

ಕೃಷಿ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ತಾವು ನಿರೂಪಿಸುವುದಾಗಿ ತಿಳಿಸಿದಅವರು, ತಾವು ಸ್ಥಾಪಿಸಿರುವ ಕೃಷಿ ಕೇಂದ್ರದಲ್ಲಿಯುವಕರೇ ಹೆಚ್ಚು ಇರಲಿದ್ದಾರೆ. ಅವರೂ ಕೃಷಿಮಾಡಲಿದ್ದಾರೆ. ಉದ್ಯೋಗಕ್ಕಾಗಿ ದೊಡ್ಡ ನಗರಗಳನ್ನು ಆಶ್ರಯಿಸುವುದು ತಪ್ಪುತ್ತದೆ ಎಂದರು.

ಫ‌ಲವತ್ತತೆ ಹೆಚ್ಚಿಸಿ: ಮಣ್ಣು ಮತ್ತು ಸಮಗ್ರ ಕೃಷಿ ತಜ್ಞ ಸಾಯಿಲ್ ವಾಸು, ಮಣ್ಣಿನ ಬಗ್ಗೆ ಉಪನ್ಯಾಸ ನೀಡಿದರು. ಸಾವಯವ, ತೇವಾಂಶ, ಜೀವಾಂಶ, ಹೊದಿಕೆ ಈ ನಾಲ್ಕು ಗುಣಗಳನ್ನು ರೈತರು ಪಾಲಿಸಿ ದರೆ ಮಣ್ಣಿನ ಫಲವತ್ತತೆ ಹೆಚ್ಚಾಗಲಿದೆ ಎಂದರು. ಸಮಗ್ರ ಕೃಷಿ ಬೇಸಾಯದಿಂದ ವೆಚ್ಚ ಕಡಿಮೆಮಾಡಿ ಹೆಚ್ಚು ಬೆಳೆ ಬೆಳಯಲು ಸಹಕಾರಿಯಾಗುತ್ತದೆ. ಜತೆಗೆ ಮಣ್ಣಿನ ಫಲವತ್ತೆ ಉತ್ತಮವಾಗಲು ಸಾಧ್ಯವಿದೆ. ಗ್ರಾಮದ ಸುತ್ತಮುತ್ತ ಇರುವಕೆರೆಯ ಹೂಳನ್ನು ರೈತರೇ ತೆಗೆದು ತಮ್ಮ ಹೊಲ, ಗದ್ದೆ, ತೋಟಗಳಿಗೆ ಬಳಸಿಕೊಂಡು ಫ‌ಲವತ್ತತೆ ಹೆಚ್ಚಿಸಿ ಕೊಳ್ಳಬೇಕು ಎಂದರು. ಕೃಷಿ ವಿಜ್ಞಾನಿ ರೀತು, ಕೃಷಿ ಅಧಿಕಾರಿ ಅಶೋಕ್‌ ಮಾತನಾಡಿದರು. ಸ್ಥಳೀಯ ಪ್ರಗತಿ ಪರ ರೈತರಾದ ಕಮಲಮ್ಮ, ಮಾದೇಶ್‌, ಜೈಕುಮಾರ್‌ ಮತ್ತಿತರರನ್ನು ಸನ್ಮಾನಿಸಲಾಯಿತು. ಕೃಷಿ ಅಧಿಕಾರಿ ವನಿತಾ ಮತ್ತಿತರರಿದ್ದರು.

ಕೃಷಿ ವಿಜ್ಞಾನಿಗಳ ಬಳಿ  ತರಬೇತಿ ಪಡೆಯಿರಿ :  ಪ್ರಗತಿಪರ ರೈತ ಮಹಿಳೆಯಾಗಿ ತಮ್ಮ ಅನುಭವವನ್ನುಕಮಲಮ್ಮಕಾರ್ಯಕ್ರಮದಲ್ಲಿ ಹಂಚಿಕೊಂಡರು. ತಾವು ಜಿಕೆವಿಕೆ ಬೆಂಗಳೂರುಮತ್ತು ಮಾಗಡಿ ಕೃಷಿ ವಿಜ್ಞಾನಕೇಂದ್ರದಲ್ಲಿ ತರಬೇತಿ ಪಡೆದು ಯಶಸ್ವಿಯಾಗಿ ಸಮಗ್ರಕೃಷಿಯಲ್ಲಿ ತೊಡಗಿಸಿಕೊಂಡಿರುವುದಾಗಿತಿಳಿಸಿದರು. ಸದ್ಯ ಕ್ಯಾಪ್ಸಿಕಂ ಬೆಳೆಯುತ್ತಿರುವುದಾಗಿ, ತಮ್ಮ ಸಂಪರ್ಕದಲ್ಲಿರುವ ರೈತರುಬೆಳೆದ ಕ್ಯಾಪ್ಸಿಕಂಕೂಡ ಖರೀದಿಸಿ ಅನ್ಯ ರಾಜ್ಯಗಳಖರೀದಿದಾರರಿಗೂ ನೇರವಾಗಿ ಮಾರಾಟಮಾಡುತ್ತಿರುವುದಾಗಿ ತಿಳಿಸಿದರು. ಒಬ್ಬ ಮಹಿಳೆಯಾಗಿ ತಾವು ಮಾಡಿರುವ ಸಾಧನೆ ಪುರುಷ ರೈತರಿಗೇಕೆ ಸಾಧ್ಯವಾಗುತ್ತಿಲ್ಲಎಂದು ಕಾರ್ಯ ಕ್ರಮದಲ್ಲಿ ಪ್ರಶ್ನಿಸಿದರು.

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.