ಸಂಭ್ರಮದ ಬಾಣಂತಮಾರಮ್ಮ ಅಗ್ನಿಕೊಂಡೋತ್ಸವ

ವಿವಿಧ ಬೀದಿಗಳಲ್ಲಿ ಮಾರಮ್ಮ ದೇವಿ ಮೆರವಣಿಗೆ

Team Udayavani, Apr 25, 2019, 3:37 PM IST

ramanagar-tdy-2..

ಕನಕಪುರ: ನಗರದ ರಾಮನಗರ ರಸ್ತೆಯ ಮೇಗಳ ಬೀದಿಯಲ್ಲಿನ ಬಾಣಂತಮಾರಮ್ಮ ದೇವಿಯ ಅಗ್ನಿಕೋಂಡೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.

ಪ್ರತಿ ವರ್ಷ ಯುಗಾದಿ ಹಬ್ಬದ 15 ದಿನಗಳ ನಂತರ ಆಚರಣೆಯಾಗುವ ಬಾಣಂತ ಮಾರಮ್ಮನ ಕೊಂಡೋತ್ಸವಕ್ಕೆ ನಗರದ ಪ್ರಮುಖ ಬೀದಿಗಳು ವಿದ್ಯುತ್‌ದೀಪಗಳಿಂದ ಅಲಂಕಾರಗೊಂಡು ಯಳವಾರದ ಮೂಲಕ ಕೊಂಡೋತ್ಸವಕ್ಕೆ ಅಗತ್ಯವಾದ ಸೌದೆಗಳನ್ನು ವಾದ್ಯಮೇಳಗಳ ಮೂಲಕ ಕರೆತಂದು ಕಟ್ಟಿಗೆಗಳನ್ನು ರಾತ್ರಿಯಿಡಿ ಸುಟ್ಟು ಅಗ್ನಿ ಕೊಂಡಕ್ಕೆ ಸಿದ್ಧತೆ ಮಾಡಿ ನಂತರ ಬಾಣಂತ ಮಾರಮ್ಮನ ಕಲಶವನ್ನು ಹೊತ್ತ ಅರ್ಚಕ ಅಗ್ನಿಕೊಂಡ ಪ್ರವೇಶಿಸುವುದು ವಾಡಿಕೆಯಾಗಿದೆ.

ಬಾಣಂತಮಾರಮ್ಮನ ದೇವಾಲಯದಿಂದ ಮಧ್ಯರಾತ್ರಿಯಲ್ಲೇ ಬಾಣಂತಮಾರಮ್ಮ ದೇವಿಯ ಕಲಶದಲ್ಲಿ ಪ್ರತಿಷ್ಠಾಪಿಸಿ ಅರ್ಕಾವತಿ ನದಿಯ ದಡದಿಂದ ಪೂಜೆ ಮೂಲಕ ಮೆರವಣಿಗೆಯಲ್ಲಿ ದೇವರನ್ನು ಕರೆದೋಯ್ದು ಬುಧವಾರ ಬೆಳಗ್ಗೆ 8 ಗಂಟೆಗೆ ಅಗ್ನಿಕೊಂಡೋತ್ಸವದಲ್ಲಿ ಬಾಣಂತಮಾರಮ್ಮನ ಕಲಶವನ್ನು ಹೊತ್ತ ಅರ್ಚಕ ಅಗ್ನಿ ಪ್ರವೇಶ ಮಾಡಿ ಕೊಂಡ ಹಾಯುತ್ತಿದ್ದಂತೆ ನೆರೆದಿದ್ದ ಭಕ್ತರು ಜೈಕಾರ ಹಾಕಿ ಸಂಭ್ರಮಿಸಿದರು.

ಪಟಾಕಿಗಳ ಚಿತ್ತಾರ: ಬಾಣಂತಮಾರಮ್ಮ ದೇವಿಯನ್ನು ಅರ್ಕಾವತಿ ನದಿಯ ದಡದಿಂದ ಮೆರವಣಿಗೆ ಮೂಲಕ ಬೂದಕೇರಿ ರಸ್ತೆ , ಎಂ.ಜಿ. ರಸ್ತೆ , ಕಾಮನಗುಡಿ ರಸ್ತೆ ಮೂಲಕ ರಾಮನಗರ ರಸ್ತೆಗೆ ಬಂದು ನಂತರ ದೇವಾಲಯಕ್ಕೆ ತೆರಳುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆಯಾಗಿದ್ದು, ಅಂತೆಯೇ ಬೆಳಗಿನ ಜಾವ 4 ಗಂಟೆಗೆ ಮೆರವಣಿಗೆ ಆರಂಭವಾಗು ತ್ತಿದ್ದಂತೆ ಪಟಾಕಿಗಳ ಸದ್ದು ಮತ್ತು ಆಗಸದಲ್ಲಿ ಹಲವು ಬಗೆಯ ಚಿತ್ತಾರಗಳನ್ನು ಮೂಡಿಸುವ ಮೂಲಕ ಹಬ್ಬದ ಮೆರಗನ್ನು ಹೆಚ್ಚಿಸಿದವು.

ಬುಧವಾರ ಬೆಳಗಿನ ಜಾವ ಕೊಂಡೋತ್ಸವದ ನಂತರ ಬಾಣಂತಮಾರಮ್ಮ ದೇಗುಲದ ಸುತ್ತಮುತ್ತ ಪಕ್ಕದ ರಸ್ತೆಗಳಲ್ಲಿ ದೇವರ ಮೆರವಣಿಗೆ ನಡೆಸಲಾಗುತ್ತದೆ. ಇಂದು ನಗರದ ಮೇಗಳ ಬೀದಿ, ವಿವೇಕಾನಂದ ನಗರ, ಮೆಜೆಸ್ಟಿಕ್‌ ವೃತ್ತ, ಕುಂಬಾರರ ಕಾಲೋನಿ, ನವಗ್ರಹ ದೇವಾಸ್ಥಾನದ ಬಡಾವಣೆ, ಬಾಣಂತಮಾರಮ್ಮನ ಬಡಾವಣೆ, ಎಸ್‌. ಕರಿಯಪ್ಪ ರಸ್ತೆ, ಸೇರಿದಂತೆ ಹಲವು ಬಡಾವಣೆಗಳಲ್ಲಿ ದೇವರು ಕೊಂಡೋತ್ಸವಕ್ಕೆ ಮುನ್ನ ಮೆರವಣಿಗೆಯಲ್ಲಿ ಬರುವಾಗ ದಾರಿಯುದ್ದಕ್ಕೂ ಮೇಕೆಗಳನ್ನು ಬಲಿಕೊಟ್ಟು ನಂತರ ಹಬ್ಬದ ಪ್ರಯುಕ್ತ ಬಾಡೂಟ ಮಾಡಿ ಹಬ್ಬದಲ್ಲಿ ನೆಂಟರಿಗೆ ಉಣಬಡಿಸಲಾಗುತ್ತದೆ, ಶುಕ್ರವಾರ ಸಿಟಿಗಾವು, ಜಾತ್ರೆ  ನಡೆಯಲಿದೆ.

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.