ಶ್ವಾನ ಬೇಟೆಗೆ ಬಂದ ಚಿರತೆ ಸೆರೆ
Team Udayavani, Feb 6, 2018, 5:40 PM IST
ರಾಮನಗರ: ಆಹಾರ ಅರಸಿ ಬಂದ ಚಿರತೆಯೊಂದು ಗ್ರಾಮದಲ್ಲಿದ್ದ ನಾಯಿ ಬೇಟೆಯಾಡಲು ಹೋಗಿ ಸಿಕ್ಕಿ ಬಿದ್ದಿರುವ
ಘಟನೆ ತಾಲೂಕಿನ ಸಂಗಬಸವನದೊಡ್ಡಿಯಲ್ಲಿ ನಡೆದಿದೆ.
ಸೋಮವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಆಹಾರ ಅರಸಿ ಸಂಗಬಸನವದೊಡ್ಡಿ ಗ್ರಾಮಕ್ಕೆ ಬಂದ ಚಿರತೆಗೆ ರವಿ ಎಂಬುವರಿಗೆ ಸೇರಿದ ಮನೆಯ ಬಳಿ ನಾಯಿಯೊಂದು ಕಾಣಿಸಿಕೊಂಡಿದೆ. ಅದನ್ನು ಬೇಟೆಯಾಡಲು ಮುಂದಾದಾಗ ನಾಯಿ ತಪ್ಪಸಿಕೊಂಡು ಅಲ್ಲೆ ಇದ್ದ ದನಕ ಕೊಠಡಿಯೊಳಗೆ ನುಗ್ಗಿದೆ. ಚಿರತೆಯೂ ದನದ ಕೊಟ್ಟಿಗೆಗೆ ನುಗ್ಗಿದೆ, ಆದರೆ ನಾಯಿ ತಪ್ಪಿಸಿಕೊಂಡು ಹೊರ ಬಂದು ತೀವ್ರವಾಗಿ ಬೊಗಳಲಾರಂಭಿಸಿದೆ. ಸದ್ದು ಕೇಳಿ ಬಂದ ಸುತ್ತಮುತ್ತಲಿನ ಮನೆಯವರು ದನದ ಕೊಟ್ಟಿಗೆಯಲ್ಲಿರುವ ಚಿರತೆ ಕಂಡು ಹೌಹಾರಿ, ಕೊಟ್ಟಿಗೆಯ ಬಾಗಿಲನ್ನು ಭದ್ರಪಡಿಸಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಬನ್ನೇರುಘಟ್ಟದಿಂದ ಅರವಳಿಕೆ ತಜ್ಞರನ್ನು ಕರೆಸಿಕೊಂಡು ಕೊಟ್ಟಿಗೆಯಲ್ಲಿ ಬಂಧನವಾಗಿದ್ದ ಚಿರತೆಗೆ ಅರವಳಿಕೆ ಚುಚ್ಚು ಮದ್ದು ನೀಡಿದ್ಧಾರೆ. ಪ್ರಜ್ಞೆ ತಪ್ಪಿದ ಚಿರತೆಯನ್ನು ಬೋನಿನಲ್ಲಿ
ಕೂಡಿಹಾಕಿದ್ದಾರೆ.
ಮೂರು ವರ್ಷದ ಗಂಡು ಚಿರತೆಯನ್ನು ಬನ್ನೇರುಘಟ್ಟದ ಅರಣ್ಯ ಪ್ರದೇಶದಲ್ಲಿ ಬಿಡುವುದಾಗಿ ತಿಳಿಸಿದ್ದಾರೆ. ಈ ಭಾಗದಲ್ಲಿ ಇನ್ನು ಕೆಲವು ಚಿರತೆಗಳಿವೆ, ಅವುಗಳನ್ನು ಹಿಡಿಯಿರಿ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ