ಗೋಮಾಳ ಪ್ರದೇಶ ಪ್ರಭಾವಿಗಳ ಪಾಲು

ಗೋಮಾಳ ಅಧಿಕಾರಿಗಳ ಸ್ವಂತ ಕ್ಕೆ ಬಳಕೆ, ಮೇವಿಗಾಗಿ ಜಾನುವಾರುಗಳ ಪರದಾಟ

Team Udayavani, Oct 11, 2019, 7:36 PM IST

11-October-21

ಚನ್ನಪಟ್ಟಣ: ಜಾನುವಾರುಗಳು ಮೇಯಲು ಮೀಸಲಿದ್ದ ಗೋಮಾಳ ಜಮೀನನ್ನು ಅಕ್ರಮ ಸಾಗುವಳಿ ಮಾಡಲು ಮುಂದಾಗಿದ್ದು, ರಾಜಕಾರಣಿಗಳಿಂದ ಆರಂಭಗೊಂಡು ಕಂದಾಯ
ಇಲಾಖೆ ನೌಕರರವರೆಗೂ ಗೋಮಾಳ ಜಮೀನನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಇದು ರಾಜ್ಯದ ಭೂ ಹಗರಣ ಅಲ್ಲ. ಇದೇ ತಾಲೂಕಿನ ನೂರಾರು ಎಕರೆ ಗೋಮಾಳಗಳು ಪ್ರಭಾವಿಗಳ ಪಾಲಾಗಿರುವ ನೈಜ ಕತೆ. ತಾಲೂಕಿನ ವಿರುಪಾಕ್ಷಿಪುರದಿಂದ ವಿರುಪಸಂದ್ರವರೆಗೆ, ಮಲ್ಲಮಗೆರೆಯಿಂದ ಮೊಗೇನಹಳ್ಳಿಯವರೆಗೆ, ಅಬ್ಬೂರಿನಿಂದ ಹುಲವಾಡಿವರೆಗೆ, ದೊಡ್ಡನಹಳ್ಳಿಯಿಂದ ಭೂಹಳ್ಳಿವರೆಗೆ ಎಲ್ಲಿ ಹೋದರಲ್ಲಿ ಎಲ್ಲಾ ಗೋಮಾಳ ಪ್ರದೇಶಗಳು ಅಧಿಕಾರಿಗಳ ಅಕ್ರಮ ಖಾತೆಗೆ ಸೇರಿಹೋಗಿವೆ.

ವಿರುಪಾಕ್ಷಿಪುರ ಹೋಬಳಿಯ ಅರಳಾಳುಸಂದ್ರದ ಸರ್ವೇ ನಂ.12ರ ಗೋಮಾಳದಲ್ಲಿ 87 ಎಕರೆ, ಬ್ರಹ್ಮಣೀಪುರ, ಸರ್ವೇ ನಂ.39ರ ಗೋಮಾಳದಲ್ಲಿ 65 ಎಕರೆ, ಮಲ್ಲಮಗೆರೆಯ ಸರ್ವೇ ನಂ.4ರ 25 ಎಕರೆ, ದೊಡ್ಡನಹಳ್ಳಿಯ ಸರ್ವೇ ನಂ.4ರ 15 ಎಕರೆ, ಅಬ್ಬೂರಿನ ಸರ್ವೇ ನಂ.353ರ 20 ಎಕರೆ, ಹುಲುವಾಡಿಯ ಸರ್ವೇ ನಂ.128ರ 22 ಎಕರೆ, ಮುಕುಂದದ ಸರ್ವೇ ನಂ. 40ರ 25 ಎಕರೆ, ಹರೂರು ಮೊಗೇನಹಳ್ಳಿಯ ಸರ್ವೇ ನಂ.294ರ 20 ಎಕರೆ, ವಿರುಪಸಂದ್ರದ ಸರ್ವೇ ನಂ. 26ರ 28 ಎಕರೆ, ಭೂಹಳ್ಳಿಯ ಸರ್ವೇ ನಂ. 109ರ 15
ಎಕರೆ ಸರ್ಕಾರಿ ಭೂಮಿ ತಾಲೂಕಿನ ನೂರಾರು ಎಕರೆ ಭೂಗಳ್ಳ ಪ್ರಭಾವಿಗಳ ಪಾಲಾಗಿದೆ. ಭೂ ಖದೀಮರು ಸರಿ ಸುಮಾರು 350ಕ್ಕೂ ಹೆಚ್ಚು ಎಕರೆ ಗೋಮಾಳ ಪ್ರದೇಶವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದು, ಇದರ ಇಂದಿನ ಮೌಲ್ಯ ಕೋಟಿಗಳಿಗೆ ಮೀರಿದೆ.

ಕದ್ದವರೆಲ್ಲ ಭಾರೀ ಕುಳಗಳು: ಗೋಮಾಳಗಳು ಹಿಂದೆ ಹಸು, ಎಮ್ಮೆಗಳು ಸೇರಿದಂತೆ ಜಾನುವಾರುಗಳು ಮೇಯಲು ಮೀಸಲಿಟ್ಟ
ಪ್ರದೇಶವಾಗಿವೆ. ಕೆಲವೊಮ್ಮೆ ಯಾವುದೇ ಆಸ್ತಿಯನ್ನು ಹೊಂದಿರದವರು ಇಂತಹ ಪ್ರದೇಶಗಳಲ್ಲಿ ಸಾಗುವಳಿ ಮಾಡಿದರೆ, ಅಂತವರಿಗೆ ಪೂರ್ವಾಪರಗಳನ್ನು ಪರಿಶೀಲಿಸಿ, ಸಾಗುವಳಿ ಚೀಟಿ ನೀಡುವ ಪರಿಪಾಠವೂ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ಪ್ರತ್ಯೇಕ ಕಾನೂನು ಮತ್ತು ಭೂ ಮಂಜೂರಾತಿ ಸಮಿತಿಗಳು ಕೂಡಾ ಇದೆ.

ವಿಪರ್ಯಾಸವೆಂದರೆ ತಾಲೂಕಿನಲ್ಲಿ ಗೋಮಾಳ ನುಂಗಿರುವ ಅಧಿಕಾರಿಗಳು ಯಾರು ಜಮೀನು ಇಲ್ಲದವರಲ್ಲ. ಎಲ್ಲರೂ ಶ್ರೀಮಂತರು ಮತ್ತು ಜಮೀನುದಾರರೇ ಆಗಿದ್ದಾರೆ. ಮತ್ತು ವಿಶೇಷವೆಂದರೆ ಬಹುತೇಕರು ಆದಾಯ ತೆರಿಗೆ ಪಾವತಿದಾರರು, ಎಸಿ ಕಾರಿನಲ್ಲೇ ಓಡಾಡುವರು, ರಾಜಧಾನಿ ಬೆಂಗಳೂರು ಸೇರಿದಂತೆ ಚನ್ನಪಟ್ಟಣದ ಪ್ರತಿಷ್ಠಿತ ಬಡಾವಣೆಗಳಲ್ಲಿ ಭಾರೀ ಬಂಗಲೆಗಳಲ್ಲೇ ವಾಸ ಮಾಡುತ್ತಿದ್ದಾರೆ. ಅಲ್ಲದೆ, ಇವರಲ್ಲಿ ಬಹುತೇಕರಿಗೆ ಪಿತ್ರಾರ್ಜಿತವಾಗಿ ಇಲ್ಲವೇ ಸ್ವಯಾರ್ಜಿತವಾಗಿ ಹತ್ತಾರು ಎಕರೆ ಜಮೀನು ಹೊಂದಿದ್ದಾರೆ ಎನ್ನಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 99(3)ರಲ್ಲಿ
ಹೇಳಿರುವಂತೆ ಗೋಮಾಳದ ಭೂಮಿಗೆ ಇಷ್ಟೆಲ್ಲಾ ಸೌಲಭ್ಯಗಳನ್ನು ಹೊಂದಿರುವ ಇವರು ಫಲಾನುಭವಿಗಳಾಗಲು ಸಾಧ್ಯವಿಲ್ಲ.

ಕಾಟಾಚಾರಕ್ಕೆ ನೋಟಿಸ್‌: ಮಾಜಿ ಮಂತ್ರಿ, ಮಾಜಿ ಶಾಸಕ, ಮಾಜಿ ಶಾಸಕರ ಪುತ್ರ, ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು, ಆಯಾ ಗ್ರಾಮಗಳ ಪ್ರಭಾವಿ ರಾಜಕೀಯ ಪಕ್ಷಗಳ ಮುಖಂಡರು, ವ್ಯಾಪಾರಿಗಳು ಸಾಗುವಳಿ ನೆಪದಲ್ಲಿ ಗೋಮಾಳ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದು ಅಕ್ರಮ ಎಂಬುದು ಸ್ಥಳೀಯ ಆಡಳಿತಕ್ಕೆ ತಿಳಿದಿದೆ. ಆದರೆ, ಒತ್ತುವರಿಯಾಗಿರುವ ಗೋಮಾಳ ಪ್ರದೇಶವನ್ನು ಮತ್ತೆ ವಶಪಡಿಸಿಕೊಳ್ಳುವ ಕಟ್ಟು ನಿಟ್ಟಿನ ಕೆಲಸಕ್ಕೆ ಮುಂದಾಗಲಿಲ್ಲ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬಂದಿದೆ.

ನಾ ಕೊಡೆ ನೀ ಬಿಡೆ ಎಂಬಂತೆ ಕಾಟಾಚಾರಕ್ಕೆ ಗೋಮಾಳ ಪ್ರದೇಶ ಒತ್ತುವರಿದಾರರಿಗೆ ನೋಟಿಸ್‌ ನೀಡುವ ಸ್ಥಳೀಯ ಆಡಳಿತ, ಇದುವರೆಗೂ ಒಮ್ಮೆಯೂ ತೆರವು ಕಾರ್ಯಾಚರಣೆ ನಡೆಸಿಲ್ಲ. ಅಲ್ಲದೆ, ನೋಟಿಸ್‌ ಪಡೆದಾಗ ಒತ್ತುವರಿಯನ್ನು ತೆರವು ಮಾಡುವುದಾಗಿ ಹೇಳುವ ಒತ್ತುವರಿದಾರರು, ನಂತರ ತಮಗೂ ನೋಟಿಸ್‌ಗೂ ಸಂಬಂಧವೇ ಇಲ್ಲ ಎಂಬಂತೆ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ತಾಲೂಕಿನಲ್ಲಿ ನಡೆದಿರುವ ಗೋಮಾಳ ಪ್ರದೇಶ ಒತ್ತುವರಿ ಮಾಡಿಕೊಂಡವರನ್ನು ಗೋ ಬ್ಯಾಕ್‌ ಮಾಡುವ ಕೆಲಸ ಮಾಡಿ, ಕೋಟ್ಯಂತರ ರೂಪಾಯಿ ಮೌಲ್ಯದ ಗೋಮಾಳ  ದೇಶವನ್ನು ಉಳಿಸಬೇಕಿದೆ.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.