ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಸಹಕಾರ ಅಗತ್ಯ
Team Udayavani, Jun 21, 2020, 6:48 AM IST
ಕನಕಪುರ: ಅಧಿಕಾರಿಗಳ ಮತ್ತು ಸದಸ್ಯರ ಸಹಕಾರದಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯಾಗುತ್ತದೆ ಎಂದು ಹೂಕುಂದ ಗ್ರಾಪಂ ಅಧ್ಯಕ್ಷ ಜಮೀರ್ ಅಹಮದ್ ತಿಳಿಸಿದರು. ತಾಲೂಕಿನ ಕೋಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆಗಳ ಮೀನು ಪಾಶುವಾರು ಹಕ್ಕಿನ ಹಾರಾಜು ಪ್ರಕ್ರಿಯೆ ಮುಗಿದ ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಪಂ ವ್ಯಾಪ್ತಿಯ ಬಹುತೇಕ ಕೆರೆ ಹೂಳೆತ್ತುವ ಮೂಲಕ ಅಭಿವೃದ್ಧಿಗೊಳಿಸಲಾಗಿದೆ. ಅದರಿಂದ 4 ಕೆರೆಗಳಲ್ಲಿ ಹೆಚ್ಚು ನೀರಿನ ಸಂಗ್ರಹಣೆಯಿಂದ ಮೀನು ಪಾಶುವಾರು ಹಕ್ಕಿನ ಹಾರಾಜಿನಲ್ಲಿ 6 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಹರಾಜಾಗಿದ್ದು, ಗ್ರಾಪಂಗೆ ಉತ್ತಮ ಆದಾಯ ಬಂದಿದೆ ಎಂದರು. ಗ್ರಾಪಂ ವ್ಯಾಪ್ತಿಯ ಒಟ್ಟು 4 ಕೆರೆಗಳ ಮೀನು ಪಾಶುವಾರು ಹಕ್ಕಿನ ಹಾರಾಜು ಪ್ರಕ್ರಿಯೆಯಲ್ಲಿ ಶೆಟ್ಟಿಕೆರೆದೊಡ್ಡಿ ಗ್ರಾಮದ ಕೆರೆ 2.70 ಲಕ್ಷಕ್ಕೆ ಹರಜಾಯಿತು.
ಉಳಿದಂತೆ ಬಸವನಕೆರೆ 1.85 ಲಕ್ಷ ಶ್ರೀರಾಮಸಾಗರ ಗ್ರಾಮದ ಊರಗೆಜ್ಜೆ ಬಸವನಕೆರೆ 1.18 ಲಕ್ಷ ಮತ್ತು ಹೂಕುಂದ ಗ್ರಾಮದ ಕುಂಬಾರರಕಟ್ಟೆ 80 ಸಾವಿರಕ್ಕೆ ಹರಾಜಾದವು. 2020-21ನೇ ಸಾಲಿನ ಯಶಸ್ವಿ ಬಿಡ್ದಾರರು ಶೇ.5ರಷ್ಟು ಸೇರಿಸಿ ಪ್ರತಿವರ್ಷ ಜೂನ್ 20ರೂಳಗೆ 2021-22ನೇ ಸಾಲಿನ ಬಿಡ್ ಮೊತ್ತ ಪಾವತಿಸಲು ಬದ್ಧರಾಗಿರಬೇಕು. ತಪ್ಪಿದ್ದಲ್ಲಿ ಆದೇಶ ರದ್ದಾಗಲಿದೆ ಎಂದು ಅಭಿವೃದ್ಧಿ ಅಧಿಕಾರಿ ಖಾದರ್ಖಾನ್ ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ನವೀನ್ಕುಮಾರ್, ಗಿರೀಶ್ ಸೇರಿದಂತೆ ಆನೇಕ ಬಿಡ್ದಾರರು ಮತ್ತು ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್ಡಿಕೆ ಸ್ಪರ್ಧೆ ಸುಳಿವು
Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ ಕಬ್ಬಿಣದ ಕಡಲೆ
Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್ ವಾಗ್ಧಾಳಿ