ಚಿತ್ರ ಬಿಡಿಸಿ ಕೋವಿಡ್ 19 ಅರಿವು
Team Udayavani, Apr 8, 2020, 3:12 PM IST
ಕನಕಪುರ: ಲಾಕ್ಡೌನ್ ಆದೇಶ ಉಲ್ಲಂ ಸುತ್ತಿರುವ ಸಾರ್ವಜನಿಕರಿಂದ ಹೈರಾಣಾಗಿರುವ ಪೊಲೀಸ್ ಇಲಾಖೆ ಕೋವಿಡ್ 19 ಸೋಂಕಿನ ಬಗ್ಗೆ ರಸ್ತೆಯಲ್ಲಿ ಕೋವಿಡ್ 19 ಚಿತ್ರ ಬಿಡಿಸಿ ವಿನೂತನವಾಗಿ ಜಾಗೃತಿ ಮೂಡಿಸಿದರು. ಲಾಕ್ ಡೌನ್ ಆದೇಶವಿದ್ದರೂ ನಗರದಲ್ಲಿ ಅನಗತ್ಯವಾಗಿ ವಾಹನ ಗಳಲ್ಲಿ ಸಂಚರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಇರುವುದು, ಮಾಂಸದಂಗಡಿಗಳಲ್ಲಿ ಮುಗಿ ಬೀಳುವುದು ಸಾಮಾನ್ಯವಾಗಿದೆ. ಇನ್ನು ಸುಖಾಸುಮ್ಮನೆ ತಿರುಗಾಡುವ ಬೈಕ್ ವಶಕ್ಕೆ ಪಡೆದು ಲಾಕ್ಡೌನ್ ಆದೇಶ ಮುಗಿಯುವವರೆಗೂ ವಾಹನ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಈಗ ನಗರದ ಚನ್ನಬಸಪ್ಪ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋವಿಡ್ 19 ವೈರಸ್ ಚಿತ್ರ ಬಿಡಿಸಿ “ಮನೆಯಿಂದ ಹೊರಗೆ ಬಂದರೆ ನೀನು, ನಿಮ್ಮ ಮನೆಗೆ ಬರುವೆ ನಾನು’ ಎಂಬ ಜಾಗೃತಿ ಸಂದೇಶ ಸಾರುತ್ತಿದೆ.