ಓಡಾಟ ನಡೆಸಿದವರಿಗೆ ಎಚ್ಚರಿಕೆ
Team Udayavani, Apr 30, 2021, 4:24 PM IST
ಕನಕಪುರ: ಅನಗತ್ಯವಾಗಿ ಓಡಾಡುತ್ತಿದ್ದದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದು ಪೊಲೀಸರುಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಕೊರೊನಾಗೆಕಡಿವಾಣ ಹಾಕಲು ಸರ್ಕಾರ 14ದಿನಗಳ ಕಾಲಲಾಕ್ಡೌನ್ ಘೋಷಿಸಿ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ ಅಗತ್ಯ ವಸ್ತುಗಳ ಖರೀದಿಗೂಕಾಲಾವಕಾಶ ಮಾಡಿಕೊಟ್ಟಿದೆ ಆದರೆಸಾರ್ವಜನಿಕರು ಸರ್ಕಾರದ ನಿಯಮಗಳನ್ನುಗಾಳಿಗೆ ತೂರಿ ಓಡಾಡುತ್ತಿದ್ದಾರೆ.
ಬೆಳಗ್ಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಮದ್ಯ ಪ್ರಿಯರು ಬೆಳಗ್ಗೆ 6 ರಿಂದಲೇಮದ್ಯದಂಗಡಿಗಳ ಮುಂದೆ ಸಾಲುಗಟ್ಟಿ ನಿಂತುಮಧ್ಯ ಖರೀದಿಸಿದರು. 10 ಗಂಟೆಯ ನಂತರವು ತರೆದಿದ್ದ ಕೆಲವು ದಿನಸಿ ತರಕಾರಿ ಚಿಕನ್ ಮಟನ್ಸ್ಟಾಲ್ಗಳನ್ನು ಮುಚ್ಚುವಂತೆ ಪೊಲೀಸರು ಎಚ್ಚರಿಸಿದರು.
ನಗರದ ನಾಲ್ಕು ದಿಕ್ಕಿನಲ್ಲೂಬ್ಯಾರಿಕೇಡ್ ಹಾಕಿ ಅನಗತ್ಯವಾಗಿ ಓಡಾಡುತ್ತಿದ್ದದ್ವಿಚಕ್ರವಾಹನ ಸಾವಾರರನ್ನು ತಪಾಸಣೆ ನಡೆಸಿವಶಕ್ಕೆ ಪಡೆದು ಬಳಿಕ ಬಿಟ್ಟು ಕಳುಹಿಸಿದರು. 10ಗಂಟೆಯ ನಂತರ ನಗರದಲ್ಲಿ ಎಲ್ಲ ಅಂಗಡಿಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು.ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.