ಜಿಲ್ಲಾ ದಲಿತ ಜಾಗೃತಿ ಸಮಿತಿ ರದ್ದು ಮಾಡಲು ಒತ್ತಾಯ
Team Udayavani, Feb 6, 2021, 5:25 PM IST
ರಾಮನಗರ: ಜಿಲ್ಲಾ ದಲಿತ ಜಾಗೃತಿ ಸಮಿತಿ ರದ್ದು ಪಡಿಸಿ ಪುನರ್ ರಚನೆ ಮಾಡು ವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಅಧ್ಯಕ್ಷ ರಾಂಪುರ ನಾಗೇಶ್ ನೇತೃತ್ವದಲ್ಲಿ ದಲಿತ ಮುಖಂಡರು ನಗರ ದಲ್ಲಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ :ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸದಿದ್ದರೆ ಬಿಲ್ಲವರಾದ ನಾವು ‘ತಾಂಟಲು’ ಸಿದ್ದ: ಪ್ರತಿಭಾ ಕುಳಾಯಿ
ನಗರದ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರು ಜಿಲ್ಲಾ ದಲಿತ ಜಾಗೃತಿ ಸಮಿತಿ ರಚನೆಗೆ ಮುನ್ನ ಜಿಲ್ಲೆಯಲ್ಲಿ ಅನೇಕ ಅರ್ಹರು ಹಾಗೂ ಆಸಕ್ತರು ಅರ್ಜಿಸಲ್ಲಿಸಿದ್ದಾರೆ. ಈ ಪೈಕಿ ಕೆಲವರನ್ನು ಚುನಾಯಿತ ಪ್ರತಿನಿಧಿಗಳು ಶಿಫಾರಸ್ಸು ಮಾಡಿದ್ದಾರೆ. ಆದರೆ ಅವರೆಲ್ಲರನ್ನು ಕಡೆಗಣಿಸಿ ಸಮಿತಿ ರಚನೆಯಾಗಿದೆ. ಸದರಿ ಸಮಿತಿಯ ಬಗ್ಗೆ ತಮಗೆ ಅಸಮಾಧಾನವಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.