ಬೆಂಕಿ ತಗುಲಿ ರಾಗಿ ಬಣವೆ ಭಸ್ಮ: ರೈತನಿಗೆ ನಷ್ಟ
Team Udayavani, Mar 7, 2021, 3:36 PM IST
ಚನ್ನಪಟ್ಟಣ: ಆಕಸ್ಮಿಕ ಬೆಂಕಿ ತಗುಲಿ ರಾಗಿ ಬಣವೆ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಗೌಡಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕರಿಗೌಡ ಎಂಬುವರಿಗೆ ಸೇರಿದ ರಾಗಿ ಬಣವೆ ಬೆಂಕಿಯ ಕೆನ್ನಾಲಿಗೆ ಬೂದಿಯಾಗಿದ್ದು, ಸಾವಿರಾರು ರೂ. ಮೌಲ್ಯದ ರಾಗಿ ಹುಲ್ಲು ನಷ್ಟವಾಗಿದೆ.
ಹೈನುಗಾರಿಕಯನ್ನೇ ಅವಲಂಬಿಸಿ ಬದುಕು ನಡೆಸುತ್ತಿರುವ ಅವರು, ಆರು ಸೀಮೆ ರಾಸು ಸಾಕಿಕೊಂಡಿದ್ದರು. ರಾಸುಗಳ ನಿರ್ವಹಣೆಗಾಗಿ, ಸ್ಥಳೀಯವಾಗಿ ರಾಗಿ ಒಕ್ಕಣೆಗಾರರಿಂದ ರಾಗಿ ಹುಲ್ಲನ್ನು ಖರೀದಿ ಮಾಡಿ, ತಮ್ಮ ಮನೆಯ ಪಕ್ಕದಲ್ಲಿ ಬಣವೆ ಹಾಕಿಕೊಂಡಿದ್ದರು.
ಶನಿವಾರ ಮಧ್ಯಾಹ್ನ 2ಗಂಟೆ ಹೊತ್ತಿಗೆ ಆಕಸ್ಮಿಕವಾಗಿ ಮೆದೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕುರಿಗಾಹಿಗಳು ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ, ಸ್ಥಳಿಯರು ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟರು ವಿಫಲವಾಗಿದೆ. ಅಗ್ನಿ ಶಾಮಕದಳ ಆಗಮಿಸುವುದರೊಳಗೆ ಬೆಂಕಿ ಸಂಪೂರ್ಣವಾಗಿ ರಾಗಿಮೆದೆಯನ್ನು ಸುತ್ತುವರಿದು ಧಗಧಹಿಸಿದೆ. ಇತ್ತೀಚಿನ ದಿನಗಳಲ್ಲಿ ರಾಗಿ ಹುಲ್ಲಿನ ಬೆಲೆ ಹೆಚ್ಚಳವಿರುವುದರಿಂದ, ಹಲವಾರು ಕಡೆ ಹುಡುಕಾಡಿ, ರಾಗಿಹುಲ್ಲನ್ನು ಶೇಖರಣೆ ಮಾಡಿ ಮೆದೆ ಹಾಕಿದ್ದರು. ದುರದೃಷ್ಟವೆಂಬಂತೆ ಬೆಂಕಿ ರಾಗಿ ಮೆದೆಯನ್ನು ಭಸ್ಮ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್