ಗಂಗಾಧರಾಚಾರ್ ಅವಿರೋಧ ಆಯ್ಕೆ
Team Udayavani, Jan 10, 2021, 7:16 PM IST
ರಾಮನಗರ: ತಾಲೂಕಿನ ಸುಗ್ಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಸ್.ವಿ.ಗಂಗಾಧರಾಚಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಸುರೇಂದ್ರನಾಥ ಶರ್ಮ ಅವರ ರಾಜೀನಾವೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ಶನಿವಾರ ಚುನಾವಣೆ ನಡೆಯಿತು.
ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಗಂಗಾಧರಾಚಾರ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಕೆ.ಟಿ. ಉಮೇಶ್ ಘೋಷಿಸಿದರು. ಸಂಘದ ಸಿಇಒ ಪ್ರಕಾಶ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಎಸ್. ವಿ.ಗಂಗಾಧರಾಚಾರ್ ಮಾತನಾಡಿ, ಹಿರಿಯರ ಮಾರ್ಗದರ್ಶನ ಮತ್ತು ಎಲ್ಲ ನಿರ್ದೇಶಕರ ಸಹಕಾರದಲ್ಲಿ ಸಂಘವನ್ನು ಮುನ್ನಡೆಸಿಕೂಂಡು ಹೋಗುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಇದನ್ನೂ ಓದಿ:ಬಸ್ ನಿಲ್ದಾಣ ದಿಢೀರ್ ಸ್ಥಳಾಂತರ ಸರಿನಾ?
ಸಂಘದ ಉಪಾಧ್ಯಕ್ಷೆ ಗಿರಿಜಮ್ಮ, ನಿರ್ದೇಶಕರಾದ ಉಮಾಶಂಕರ್, ಎಚ್.ಪಿ.ಶಿವಪ್ಪ, ಉಮೇಶ್ ಕೆ.ಎಸ್, ಎಚ್.ಬಿ.ನಾಗರಾಜಯ್ಯ, ಸುರೇಂದ್ರ ನಾಥಶರ್ಮ, ದೂಡ್ಡರಂಗನಾಯ್ಕ, ಅಂಜನಾಚಾರ್, ಶಾಂತಮ್ಮ, ಮುಖಂಡರಾದ ರಾಮಕೃಷ್ಣಯ್ಯ ಮಹದೇವಯ್ಯ, ಲೋಕೇಶ್, ಗುರುಲಿಂಗಯ್ಯ ಮತ್ತಿತರರು ಹಾಜರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.