821 ಸ್ಥಾನಕ್ಕೆ 1987 ಅಭ್ಯರ್ಥಿಗಳು ಸ್ಪರ್ಧೆ


Team Udayavani, Dec 16, 2020, 3:13 PM IST

821 ಸ್ಥಾನಕ್ಕೆ 1987 ಅಭ್ಯರ್ಥಿಗಳು ಸ್ಪರ್ಧೆ

ಸಾಂದರ್ಭಿಕ ಚಿತ್ರ

ರಾಮನಗರ: ಡಿ.22ರಂದು ನಡೆಯುವ ರಾಮನಗರ ಮತ್ತು ಕನಕಪುರ ತಾಲೂಕುಗಳ ಒಟ್ಟು 56 ಗ್ರಾಮಪಂಚಾಯ್ತಿಗಳ 971 ಸ್ಥಾನಗಳ ಪೈಕಿ 147 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿವೆ.3 ಸ್ಥಾನಗಳಿಗೆ ನಾಮಪ ತ್ರಗಳು ಸಲ್ಲಿಕೆಯಾಗಿಲ್ಲ. ಹೀಗಾಗಿ ಉಳಿದ 821 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

56 ಗ್ರಾಮ ಪಂಚಾಯ್ತಿಗಳಿಗೆ ಸ್ಪರ್ಧೆ ಬಯಸಿ ಒಟ್ಟು 3575 ನಾಮಪತ್ರಗಳು ಸಲ್ಲಿಕೆಯಾಗಿದ್ದವು.ಪರಿಶೀಲನೆ ವೇಳೆ 53 ನಾಮಪತ್ರಗಳು (ರಾಮನಗರ 2, ಕನಕಪುರ 53) ತಿರಸ್ಕೃತವಾಗಿದ್ದವು. ನಾಮಪತ್ರಗಳು ಹಿಂಪಡೆಯುವ ಅವಕಾಶದಲ್ಲಿಅಂತಿಮವಾಗಿ 1987 (ರಾಮನಗರದಲ್ಲಿ 1157 ಮತ್ತು ಕನಕಪುರದಲ್ಲಿ 830) ಉಮೇದುವಾರರು ಕಣದಲ್ಲಿ ಉಳಿದುಕೊಂಡಿದ್ದಾರೆ.

ಅವಿರೋಧವಾಗಿ ಆಯ್ಕೆಯಾಗಿದ್ದೆಲ್ಲಿ?: ರಾಮನಗರ ತಾಲೂಕಿನ 20 ಗ್ರಾಮ ಪಂಚಾಯ್ತಿಗಳ 359 ಸ್ಥಾನಗಳ ಪೈಕಿ 26 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 2 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿ ಕೆಯಾಗಿಲ್ಲ. ಉಳಿದ 331 ಸ್ಥಾನಗಳಿಗೆ ಡಿ.22ರಂದು ಚುನಾವಣೆ ನಡೆಯಲಿದೆ. ಅವಿರೋಧವಾಗಿ ಆಯ್ಕೆಯಾದ ಗ್ರಾಮ ಪಂಚಾಯ್ತಿಗಳ ಸ್ಥಾನಗಳ ಮಾಹಿತಿ ಇಲ್ಲಿದೆ. ಗ್ರಾಮ ಪಂಚಾಯ್ತಿಯ ಹೆಸರಿನ ಮುಂದೆ ಅವಿರೋಧವಾಗಿ ಆಯ್ಕೆಯಾದ ಸಂಖ್ಯೆ ಇದೆ. ಒಟ್ಟು ಸ್ಥಾನಗಳ ಸಂಖ್ಯೆಯನ್ನು ಆವರಣದಲ್ಲಿ ಕೊಟ್ಟಿದೆ. ಕಂಚುಗಾರನಹಳ್ಳಿ 2 (17), ಗೋಪಹಳ್ಳಿ 3 (26), ಮಂಚನಾಯ್ಕನಹಳ್ಳಿ 3 (34), ಬಿಳಗುಂಬ 2 (18), ಸುಗ್ಗನಹಳ್ಳಿ2 (20),ಕೂಟಗಲ್‌2 (19), ದೊಡ್ಡಗಂಗವಾಡಿ 1 (9), ಹುಲಿಕೆರೆಗುನ್ನೂರು 1 (17), ಲಕ್ಷ್ಮೀಪುರ 1 (18), ಕೈಲಾಂಚ 5(15), ಹುಣಸನಹಳ್ಳಿ1 (21), ವಿಭೂತಿಕೆರೆ2 (19),ಶ್ಯಾನುಭೋಗನಹಳ್ಳಿ1 (16).

121 ಸ್ಥಾನಗಳಿಗೆ ಅವಿರೋಧ ಆಯ್ಕೆ: ಕನಕಪುರದ 36 ಗ್ರಾಮ ಪಂಚಾಯ್ತಿಗಳ 612 ಸ್ಥಾನಗಳ ಪೈಕಿ 121ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. 1 ಸ್ಥಾನಕ್ಕೆನಾಮಪತ್ರ ಸಲ್ಲಿಕೆಯಾಗಿಲ್ಲ. ಉಳಿದ 490 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಗ್ರಾಮ ಪಂಚಾಯ್ತಿಯ ಹೆಸರಿನ ಮುಂದೆ ಅವಿರೋಧವಾಗಿ ಆಯ್ಕೆಯಾದ ಸಂಖ್ಯೆ ಇದೆ. ಒಟ್ಟು ಸ್ಥಾನಗಳ ಸಂಖ್ಯೆಯನ್ನು ಆವರಣದಲ್ಲಿ ಕೊಟ್ಟಿದೆ. ಯಲಚವಾಡಿ 2 (18), ಚೀಲೂರು3 (31), ದೊಡ್ಡಮರಳವಾಡಿ 5 (19), ತೋಕಸಂದ್ರ 1(18), ಚಿಕ್ಕಮುದವಾಡಿ 2 (18), ಅಳ್ಳಿಮಾರನಹಳ್ಳಿ5 (14), ಸೋಮದ್ಯಾಪನಹಳ್ಳಿ 2 (15), ಕಲ್ಲಹಳ್ಳಿ 5 (17), ಚಾಕನಹಳ್ಳಿ 6 (22), ಟಿ.ಬೇಕುಪ್ಪೆ 5 (19), ಶಿವನಹಳ್ಳಿ 4 (20), ಅಚ್ಚಲು 3 (20), ಚೂಡಹಳ್ಳಿ 3 (16), ಅರೆಕಟ್ಟೆದೊಡ್ಡಿ 1 (15), ಕಾಡಹಳ್ಳಿ 3 (17), ಸಾತನೂರು 9 (20), ಮರಳೇಬೇಕುಪ್ಪೆ 7 (15),ದೊಡ್ಡಾಲಹಳ್ಳಿ 2 (16), ಐ ಗೊಲ್ಲಹಳ್ಳಿ 5 (19), ಮುಳ್ಳಹಳ್ಳಿ 4 (14), ಹೂಕುಂದ 2 (14), ಕೋಡಿ ಹಳ್ಳಿ23(24), ಅರಕೆರೆ7 (15), ಹೇರಂದ್ಯಾಪನಹಳ್ಳಿ 3 (17),ಕೊಳಗೊಂಡನಹಳ್ಳಿ5 (22), ಹೊಸದುರ್ಗ 2 (19), ಬನ್ನಿಮಕೋಡ್ಲು2 (16).

ಕೋಡಿಹಳ್ಳಿ ಗ್ರಾಮ ಪಂಚಾಯ್ತಿ ವಿಶೇಷ: ಕನಕಪುರ ತಾಲೂಕು ಕೋಡಿಹಳ್ಳಿ ಗ್ರಾಮ ಪಂಚಾಯ್ತಿ ಕ್ಷೇತ್ರಜಿಲ್ಲೆಯ ಗಮನ ಸೆಳೆದಿದೆ. ಕೋಡಿಹಳ್ಳಿ ಗ್ರಾಮ ಪಂಚಾಯ್ತಿಯ 24 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಈ ಪೈಕಿ 23 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 1 ಸ್ಥಾನಕ್ಕೆ ಮಾತ್ರಚುನಾವಣೆ ನಡೆಯಬೇಕಿದೆ. ಕೋಡಿಹಳ್ಳಿ ಪಂಚಯ್ತಿ ವ್ಯಾಪ್ತಿಯ ಹೊಸದಡ್ಡಿ ಗ್ರಾಮದ ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನಕ್ಕೆ ಮಾತ್ರ ಚುನಾವಣೆಯಾಗಬೇಕಾಗಿದೆ. ಕಾಂಗ್ರೆಸ್‌ ಬೆಂಬಲಿತ ಪಿ.ಜಗದೀಶ್‌ ಮತ್ತು ಬಿಜೆಪಿ ಬೆಂಬಲಿ ಎಂ. ಆರ್‌.ರಮೇಶ್‌ ನಡುವೆ ಹಣಾಹಣಿ ನಡೆಯಲಿದೆ. ಈ ಕ್ಷೇತ್ರದ800 ಮತದಾರರು ತಮ್ಮ ಇಚ್ಚೆಯ ಪ್ರತಿನಿಧಿಯನ್ನು ಆಯ್ಕೆಮಾಡಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Getting good response from people in constituency: D.K. Suresh

Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್

1-aaaa

Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ‌ ಕಬ್ಬಿಣದ ಕಡಲೆ

Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ‌ ಕಬ್ಬಿಣದ ಕಡಲೆ

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.