ರಾಮನಗರದಲ್ಲಿ ಗುಡುಗು,ಸಿಡಿಲು ಸಹಿತ ಮಳೆಯ ಅಬ್ಬರಕ್ಕೆ ಹತ್ತಾರು ಕುರಿ,ಮೇಕೆಗಳು ಸಾವು
Team Udayavani, May 1, 2022, 5:55 PM IST
ರಾಮನಗರ: ತಾಲೂಕಿನಲ್ಲಿ ಧಾರಕಾರ ಮಳೆ, ಬಿರುಗಾಳಿ, ಗುಡುಗು ಸಹಿತ ವರುಣ ಅಬ್ಬರಿಸಿದೆ.
ಬಿಡದಿ ಹೋಬಳಿ ಬೆತ್ತನಗೆರೆ ಗ್ರಾಮದಲ್ಲಿ ಸಿಡಿಲು ಬಡಿದು 10 ಕುರಿ, 9 ಮೇಕೆ ಸಾವನ್ನಪ್ಪಿವೆ.
ತಾಲೂಕಿನ ಕಸಬಾ ಹೋಬಳಿ ಕೂನಮುದ್ದನಹಳ್ಳಿ ಕ್ರಾಸ್ ಬಳಿ ರಾಮನಗರ- ಮಾಗಡಿ ರಸ್ತೆಯಲ್ಲಿ, ಭಾರಿ ಗಾಳಿಗೆ ಅರಳಿಮರ ಮತ್ತು ನಾಲ್ಕು ವಿದ್ಯತ್ ಕಂಬಗಳು ರಸ್ತೆಗೆ ಉರುಳಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಮಳೆಯಿಂದಾಗಿ ಹೆದ್ದಾರಿ ರಸ್ತೆಯಲ್ಲಿ ನೀರು ತುಂಬಿದ್ದರಿಂದ ಲಘು, ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.