ಕೌಟುಂಬಿಕ ಕಲಹ : ಅತ್ತೆಯನ್ನೇ ಕೊಂದ ಅಳಿಯ
Team Udayavani, Mar 27, 2021, 12:43 PM IST
ಕನಕಪುರ: ಕೌಟುಂಬಿಕ ಕಲಹಕ್ಕೆವ್ಯಕ್ತಿಯೊಬ್ಬ ತನ್ನ ಅತ್ತೆಯನ್ನೇ ಮರದಪಟ್ಟಿಯಿಂದ ಹೊಡೆದು ಕೊಲೆಮಾಡಿರುವ ಘಟನೆ ತುಳಸಿದೊಡ್ಡಿಯಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ತುಳಸಿದೊಡ್ಡಿ ಗ್ರಾಮದ ಲಕ್ಷ್ಮೀ ಬಾಯಿ(52) ಕೊಲೆಯಾದ ಮಹಿಳೆ.ಮೃತ ಲಕ್ಷ್ಮೀ ಬಾಯಿ ಮತ್ತುವೀರಪ್ಪನಾಯಕ ದಂಪತಿ ಪುತ್ರಿಶಶಿಕಲಾಬಾಯಿ ಅವರನ್ನು ಅದೇಗ್ರಾಮದ ಆರೋಪಿ ಭೀಮಾನಾಯಕ ಎಂಬವನಿಗೆ 10 ವರ್ಷಗಳ ಹಿಂದೆ ವಿವಾಹ ಮಾಡಿಕೊಟ್ಟಿದ್ದರು. ನಂತರ ಪತಿ-ಪತ್ನಿ ನಡುವೆ ವೈಮಸ್ಸುಉಂಟಾಗುತ್ತಿತ್ತು. ಪತ್ನಿ ಶಶಿಕಲಾಬಾಯಿ ತವರು ಮನೆ ಸೇರಿಕೊಂಡಿದ್ದರು.
ಪತ್ನಿಯನ್ನು ಕಳುಹಿಸಿಕೊಡುವಂತೆ ಭೀಮಾನಾಯಕ್ ಅತ್ತೆ ಮಾವನ ಮನೆಗೆಕುಡಿದು ಬಂದು ಆಗಾಗ ಗಲಾಟೆಮಾಡುತ್ತಿದ್ದ ಇದೇ ವಿಚಾರಕ್ಕೆ ಶುಕ್ರವಾರ ಸಂಜೆ 6ರ ಸಮಯದಲ್ಲಿ ಕುಡಿದುಬಂದ ಭೀಮಾನಾಯಕ್, ಪತ್ನಿಯನ್ನುಕಳುಹಿಸಿಕೊಡುವಂತೆ ಅತ್ತೆ ಮಾವನಮನೆ ಬಳಿ ಬಂದು ಗಲಾಟೆ ಮಾಡಿದ್ದನು.
ಮಾತಿಗೆ ಮಾತು ಬೆಳೆದು ಕುಡಿದ ಮತ್ತಿನಲ್ಲಿದ್ದ ಭೀಮಾನಾಯಕ್ ಪಕ್ಕದಲ್ಲಿದ್ದ ಮರದ ಪಟ್ಟಿಯಿಂದ ಅತ್ತೆ ಲಕ್ಷ್ಮೀ ಬಾಯಿ ಅವರ ತಲೆ ಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮೀ ಬಾಯಿ ಅವರಿಗೆ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇಮೃತ ಪಟ್ಟಿದ್ದಾರೆ. ವಿಷಯ ತಿಳಿದಅಪರಾಧ ಪತ್ತೆದಳದ ವೆಂಕಟೇಶ್ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿಶವವನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.ಮೃತರ ಪತಿ ವೀರಪ್ಪನಾಯಕನೀಡಿದ ದೂರಿನ ಮೇರೆಗೆ ಕೊಲೆಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ